ಮುಗಿಲೇರಿದ ಸಿರಿಗನ್ನಡ ಬಾವುಟ
ಹಾರಲಿ ಮೊದಲು ಎದೆಯಲ್ಲಿ
ಚರಿತೆಯ ಪಡೆದಿಹ ಕನ್ನಡ ರಥಕೆ
ಹೊಸ ಹಾದಿಯನು ತೋರುತಲಿ
ಮಲಗಿದ ಮನಗಳು ಎಚ್ಚರವಾಗಲಿ
ಕನ್ನಡ ಮೈತಾಳಿ
ಭವಿಷ್ಯ ಕಾಣದ ನೆಲಜಲ ಕಾಯಲು
ಅಭಿಮಾನವ ಚೆಲ್ಲಿ
ಎದ್ದಿಹ ಕನ್ನಡ ವಿರೋಧಿ ಸದ್ದನು
ಅಡಗಿಸಿ ಗತ್ತಿನಲಿ
ಬರೆಯಲಿ ಇಂದೇ ಹೊಸ ಅಧ್ಯಾಯವ
ಚರಿತೆಯ ಪುಟಗಳಲಿ
ಆಗಿಹ ಅನ್ಯಾಯವ ಅರಿಯುತಲಿ
ಏಳಲಿ ಕನ್ನಡಿಗ
ಆಶ್ವಾಸನೆಗಳ ನಂಬಿ ಕೂರದೆ
ಮುನ್ನಡೆಯಲಿ ಬೇಗ
ನಾಗಾಲೋಟದ ಸೃಷ್ಟಿಯ ಜತೆಗೆ
ಹೆಗಲೇಕೆ ತಾನಾಗಿ
ಜಗದಿತಿಹಾಸದಿ ಕನ್ನಡ ಉಳಿಸಿ
ಬೆಳಗಲಿ ಬೆಳಕಾಗಿ
*****
Related Post
ಸಣ್ಣ ಕತೆ
-
ಯಿದು ನಿಜದಿ ಕತೀ…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
-
ಉಪ್ಪು
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…
-
ಅವಳೇ ಅವಳು
ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…
-
ಮೌನವು ಮುದ್ದಿಗಾಗಿ!
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…
-
ಇನ್ನೊಬ್ಬ
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…