Home / ಕವನ / ತತ್ವಪದ / ಮನವೆ ಎಚ್ಚರ

ಮನವೆ ಎಚ್ಚರ

ಮನವೆ ನಿನಗೆಷ್ಟು ನಾ ಕೋರಿಕೊಳ್ಳಲಿ
ಆದರೂ ನಿನ್ನ ಅವಗುಣ ಬಿಡಲಾರೆ
ಪರಮಾತ್ಮನತ್ತ ನಿನ್ನ ಧ್ಯಾನಿಸದಾಗಲೆಲ್ಲ
ಧ್ಯಾನದಲ್ಲೂ ನೀನು ಚಿತ್ತ ಇಡಲಾರೆ

ನನಗಿರುವವನು ನೀನೊಬ್ಬನೆ ಅಲ್ಲವೆ!
ನೀನೇ ನನ್ನನ್ನು ಮೋಸಗೊಳಿಸಿದರೆ
ಯಾರ ಮುಂದೆ ನಾ ಹೇಳಿಕೊಳ್ಳಬಲ್ಲೇ
ಒಳಗೊಳಗೆ ಆತ್ಮದಲಿ ಕೊರಗದಿರಲಾರೆ

ಆಸೆ ಆಕಾಂಕ್ಷೆ ಸ್ವಾರ್‍ಥಗಳದು
ದೊಡ್ಡ ಅಭಿಪ್ಸೆ ಹೊರೆ ನಿನ್ನದು
ಮತ್ತೆ ಕಾಮ ಮೋಹ ಸಾಧಿಸಲು
ಇಂದ್ರಿಯಗಳ ಸೈನ್ಯವು ನಿನ್ನದು

ಒಳಗೆ ಹೃದಯದತ್ತ ಇಣಕದೆ ನೀನು
ಹೃದಯವನ್ನೆ ಕದ್ದು ಮೋಸಿಸಿರುವೆ
ತನುವಿಗೆ ಬಲಿಪಶು ಮಾಡಿ ನೀನು
ಭೋಗ ಲಾಲಸೆಗಳ ತೀರಿಸಿಕೊಳ್ಳುತ್ತಿರುವೆ

ನೀನು ಮಾಡಿದ ಕರ್‍ಮಗಳಿಗೆಲ್ಲವು
ಮತ್ತೆ ನಾನು ಹೊಣೆಗಾರನಾಗಬೇಕೆನೊ!
ಅಸತ್ಯ ಅನಿತ್ಯಗಳಲಿ ತೊಳಲಾಡುತ್ತ
ಜನುಮ ಜನುಮಗಳಲ್ಲಿ ಅನುಭವಿಸಬೇಕೆನೊ!

ಹೌದು ಮನವೆ ನಾನೀಗ ಎಚ್ಚರಾಗಿರುವೆ
ನಿನ್ನ ಬಣ್ಣದ ಕನಸುಗಳ ನಂಬಲಾರೆ
ನಾನು ಹೇಳಿದ ಹಾಗೆ ನಿ ನಡೆಯದಿದೆ
ಮಾಣಿಕ್ಯ ವಿಠಲನದಾರಿ ಬಿಡಲಾರೆ
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...