ಮನವೆ ಎಚ್ಚರ

ಮನವೆ ನಿನಗೆಷ್ಟು ನಾ ಕೋರಿಕೊಳ್ಳಲಿ
ಆದರೂ ನಿನ್ನ ಅವಗುಣ ಬಿಡಲಾರೆ
ಪರಮಾತ್ಮನತ್ತ ನಿನ್ನ ಧ್ಯಾನಿಸದಾಗಲೆಲ್ಲ
ಧ್ಯಾನದಲ್ಲೂ ನೀನು ಚಿತ್ತ ಇಡಲಾರೆ

ನನಗಿರುವವನು ನೀನೊಬ್ಬನೆ ಅಲ್ಲವೆ!
ನೀನೇ ನನ್ನನ್ನು ಮೋಸಗೊಳಿಸಿದರೆ
ಯಾರ ಮುಂದೆ ನಾ ಹೇಳಿಕೊಳ್ಳಬಲ್ಲೇ
ಒಳಗೊಳಗೆ ಆತ್ಮದಲಿ ಕೊರಗದಿರಲಾರೆ

ಆಸೆ ಆಕಾಂಕ್ಷೆ ಸ್ವಾರ್‍ಥಗಳದು
ದೊಡ್ಡ ಅಭಿಪ್ಸೆ ಹೊರೆ ನಿನ್ನದು
ಮತ್ತೆ ಕಾಮ ಮೋಹ ಸಾಧಿಸಲು
ಇಂದ್ರಿಯಗಳ ಸೈನ್ಯವು ನಿನ್ನದು

ಒಳಗೆ ಹೃದಯದತ್ತ ಇಣಕದೆ ನೀನು
ಹೃದಯವನ್ನೆ ಕದ್ದು ಮೋಸಿಸಿರುವೆ
ತನುವಿಗೆ ಬಲಿಪಶು ಮಾಡಿ ನೀನು
ಭೋಗ ಲಾಲಸೆಗಳ ತೀರಿಸಿಕೊಳ್ಳುತ್ತಿರುವೆ

ನೀನು ಮಾಡಿದ ಕರ್‍ಮಗಳಿಗೆಲ್ಲವು
ಮತ್ತೆ ನಾನು ಹೊಣೆಗಾರನಾಗಬೇಕೆನೊ!
ಅಸತ್ಯ ಅನಿತ್ಯಗಳಲಿ ತೊಳಲಾಡುತ್ತ
ಜನುಮ ಜನುಮಗಳಲ್ಲಿ ಅನುಭವಿಸಬೇಕೆನೊ!

ಹೌದು ಮನವೆ ನಾನೀಗ ಎಚ್ಚರಾಗಿರುವೆ
ನಿನ್ನ ಬಣ್ಣದ ಕನಸುಗಳ ನಂಬಲಾರೆ
ನಾನು ಹೇಳಿದ ಹಾಗೆ ನಿ ನಡೆಯದಿದೆ
ಮಾಣಿಕ್ಯ ವಿಠಲನದಾರಿ ಬಿಡಲಾರೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೧೫
Next post ಪಾಪಿಯ ಪಾಡು – ೧೮

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…