ಕವಿಯ ಸೋಲಿಸಿದ ಕನ್ನಡ

ಮೂಡು ಕೆಂಪಿನಲಿ ಹಕ್ಕಿ ಬರಹದಲಿ
ಕಣ್ಣು ತುಂಬಿದೆ ಕನ್ನಡ
ಬೆಳ್ಳಿ ಹಸುರಿನಲಿ ಬಳ್ಳಿ ಒನಪಿನಲಿ
ಲಾಸ್ಯವಾಡಿದೆ ಕನ್ನಡ
ಜಗವೆ ನಗುವಲ್ಲಿ ತುಂಬಿ ಬರುತಲಿದೆ
ಎದೆಯ ಹಾಡು ಈ ಕನ್ನಡ
ಬನದೆ ಬೆಡಗಿನಲಿ ಮೊರವ ಕುಕಿಲಿನಲಿ
ಕುಣಿವ ಜಿಂಕೆಯಲಿ ಕನ್ನಡ
ನಗುವ ಹೂವಿನಲಿ ಹೊರಟ ಕಂಪಿನಲಿ
ಗಾಳಿ ಸುಳಿಯುವಲಿ ಕನ್ನಡ
ಹೃದಯ ತುಂಬಿದಾನಂದ ಹಾಡಿದೆ
ಏಳು ಸ್ವರಗಳಲಿ ಕನ್ನಡ
ತೆಂಗು ಬಾಳೆ ಹೊಂಬಾಳೆ ಬಳುಕಿನಲಿ
ಚೆಲುವ ಹೊಂಚಿನಲಿ ಕನ್ನಡ
ಗದ್ದೆಯಂಚಿನಲಿ ಹರಿವ ನೀರಿನಲಿ
ಬೆವರ ಉಸಿರಿನಲಿ ಕನ್ನಡ
ಎಂತು ಸವಿಯಲಿನ್ನೆಷ್ಟು ಹಾಡಲಿ
ಕವಿಯ ಸೋಲಿಸಿತು ಕನ್ನಡ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಯನಿವಾರಣೆ
Next post ಮಹಾತ್ಮರ ಉಪವಾಸ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…