ಕ್ರಾಂತಿದರ್‍ಶಿ

ಉಧೋ! ಉಧೋ! ಏಳಿರೆನ್ನು!
ಇದೋ! ಇದೋ! ಎದ್ದೆವೆನ್ನು!
ಎಲ್ಲು ಇಲ್ಲ ದೇವರು.
ನಾವೆ ನಮ್ಮ ದೇವರು.
ತಾಳಬೇಕು,-ಬಾಳಲು.
ಸಹಿಸಬೇಕು,-ಆಳಲು.

ಬಿನ್ನವಿಸಲು,- ಕೊಡುವದಿಲ್ಲ !
ಗರ್‍ಜಿಸೆ-ಕೊಡದಿರುವದಿಲ್ಲ !
ಹಣಕಾಸೆಳೆ ಬೈಲಿಗೆ.
ಕೈಯ್ಯ ಹಚ್ಚು ಧೈಲಿಗೆ.
ಹಣದ ಮೇಲೆ ನಿಂತ ಕಲೆ,-
ಮರೆ ಮೋಸದಿ ಒಗೆದ ಬಲೆ.
ಹಣವು ತಂದ ಚೆಲುವು-ಹೆಣ !
ದೇಶಕಿರುವ ದಾಸ್ಯವ್ರಣ,
ಸುಟ್ಟು ಬಿಡೂ! ಬಿಡೂ! ಬಿಡು!
ಮುಂದೆ ಮುಂದೆ ಹೆಜ್ಜೆಯಿಡು !

ಆಳು ನಾವು-ಜೋಳದಾಳು,
ಕುಡಿವೆವು ಕಣ್ಣೀರ ಕಾಳು,
ಧರ್‍ಮವೆ ಮನೆತುಂಬ ಹೊಗೆ,
ಶ್ರದ್ದೆ ನಮ್ಮ ಹುಗಿವ ಹಗೆ,
ಹಿಂದಿರುವದು ಹಿಂದೆಯಿತ್ತು
ಇಂದು ಮಾತ್ರ ಸಿಡಿಲು ಬಿತ್ತು.
ಊದು ಕಹಳೆ, ಹೊಡೆ ನಗಾರಿ,-
ನಾಳೆ ಬಾಳ್ವೆಯೆಂದು ಸಾರಿ !

ಮನೆ ಮನೆಯಲಿ ಹೊನ್ನು ನಾಳೆ.
ಮನೆಮನೆಯಲಿ ಚೆಲುವು ನಾಳೆ.
ನಾಳೆ ವಿದ್ಯೆ, ನಾಳೆ ಬೆಳಗು.
ನಾಳೆ ಜ್ಯೋತಿ ಹೊರಗು ಒಳಗು.
ಇಂದು ಬಾಳಿದೆಲ್ಲ ಹಾಳು.
ತಿರುಗ ಮುರುಗ ಬರಿಯ ಗೋಳು.
ನಾಳನಾಳದಲ್ಲಿ ನಾಳೆ.
ತುಂಬಿ ಬರಲು,- ಬಹುದು ವೇಳೆ :
ಊದು ಕಹಳೆ ಹೊಡೆ ನಗಾರಿ,-
ನಾಳೆ ಬಾಳ್ವೆಯೆಂದು ಸಾರಿ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುರಲೀನಾದ
Next post ಸಾರ್ಥಕ ಗ್ರಂಥ ನನ್ನೂರು ನನ್ನವ್ವ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys