ಕ್ರಾಂತಿದರ್‍ಶಿ

ಉಧೋ! ಉಧೋ! ಏಳಿರೆನ್ನು!
ಇದೋ! ಇದೋ! ಎದ್ದೆವೆನ್ನು!
ಎಲ್ಲು ಇಲ್ಲ ದೇವರು.
ನಾವೆ ನಮ್ಮ ದೇವರು.
ತಾಳಬೇಕು,-ಬಾಳಲು.
ಸಹಿಸಬೇಕು,-ಆಳಲು.

ಬಿನ್ನವಿಸಲು,- ಕೊಡುವದಿಲ್ಲ !
ಗರ್‍ಜಿಸೆ-ಕೊಡದಿರುವದಿಲ್ಲ !
ಹಣಕಾಸೆಳೆ ಬೈಲಿಗೆ.
ಕೈಯ್ಯ ಹಚ್ಚು ಧೈಲಿಗೆ.
ಹಣದ ಮೇಲೆ ನಿಂತ ಕಲೆ,-
ಮರೆ ಮೋಸದಿ ಒಗೆದ ಬಲೆ.
ಹಣವು ತಂದ ಚೆಲುವು-ಹೆಣ !
ದೇಶಕಿರುವ ದಾಸ್ಯವ್ರಣ,
ಸುಟ್ಟು ಬಿಡೂ! ಬಿಡೂ! ಬಿಡು!
ಮುಂದೆ ಮುಂದೆ ಹೆಜ್ಜೆಯಿಡು !

ಆಳು ನಾವು-ಜೋಳದಾಳು,
ಕುಡಿವೆವು ಕಣ್ಣೀರ ಕಾಳು,
ಧರ್‍ಮವೆ ಮನೆತುಂಬ ಹೊಗೆ,
ಶ್ರದ್ದೆ ನಮ್ಮ ಹುಗಿವ ಹಗೆ,
ಹಿಂದಿರುವದು ಹಿಂದೆಯಿತ್ತು
ಇಂದು ಮಾತ್ರ ಸಿಡಿಲು ಬಿತ್ತು.
ಊದು ಕಹಳೆ, ಹೊಡೆ ನಗಾರಿ,-
ನಾಳೆ ಬಾಳ್ವೆಯೆಂದು ಸಾರಿ !

ಮನೆ ಮನೆಯಲಿ ಹೊನ್ನು ನಾಳೆ.
ಮನೆಮನೆಯಲಿ ಚೆಲುವು ನಾಳೆ.
ನಾಳೆ ವಿದ್ಯೆ, ನಾಳೆ ಬೆಳಗು.
ನಾಳೆ ಜ್ಯೋತಿ ಹೊರಗು ಒಳಗು.
ಇಂದು ಬಾಳಿದೆಲ್ಲ ಹಾಳು.
ತಿರುಗ ಮುರುಗ ಬರಿಯ ಗೋಳು.
ನಾಳನಾಳದಲ್ಲಿ ನಾಳೆ.
ತುಂಬಿ ಬರಲು,- ಬಹುದು ವೇಳೆ :
ಊದು ಕಹಳೆ ಹೊಡೆ ನಗಾರಿ,-
ನಾಳೆ ಬಾಳ್ವೆಯೆಂದು ಸಾರಿ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುರಲೀನಾದ
Next post ಸಾರ್ಥಕ ಗ್ರಂಥ ನನ್ನೂರು ನನ್ನವ್ವ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…