ಎಚ್ಚರಿಕೆ

ಎಚ್ಚರಿಕೆ

ಅಲಂಕಾರವು ಕೀಳಾದರೆ ತಪ್ಪಿದಾತನು ಸೊನೆಗಾರ
ಭಂಗಾರದ್ದೇನು ತಪ್ಪು?
ಮೂರ್ತಿ ಕೆಟ್ಟರೆ ದೋಷಕ್ಕೆ ಗುರಿ ಚಿತ್ರಗಾರ
ಮಣ್ಣೇನು ಮಾಡೀತು?
ಮನೆ ಡೊಂಕಾದರೆ ಕೆಡಿಸಿದವನು ಉಪ್ಪಾರ
ಕಟ್ಟೇನು ಮಾಡ್ಯಾವು?
ನಾನು ಗುಣಹೀನನಾದರೆ, ದೇವಾ
ನೀನು ಹೊಣೆಗಾರನು.

ಒಬ್ಬ ಸೊನಗಾರ ಕೆಲಸ ಕೆಡಿಸಿದರೆ ಮತ್ತೊಬ್ಬ ದೊರೆಯುವನೆಂದು ಜನರಿಗೆ ನಂಬಿಕೆ. ಆದರೆ ಸೃಷ್ಟಿಕರ್ತನು ಬೀದಿ-ಬೀದಿಗೆ ದೊರಕುವದುಂಟೆ? ದೇವಾ ನೀ ಮಾಡಿದ ತಪ್ಪನ್ನು ಮತ್ತಾರು ತಿದ್ದುವರು? ಜೀವಿಗಳನ್ನು ನಿರ್ಮಿಸುವಾಗ್ಗೆ ಎಚ್ಚರಿರಬೇಡವೆ? ನನ್ನಂಥ ಪಾಮರರನ್ನು ಜನಿಸಿಸಿ ನಿನ್ನ ಹೆಸರಿಗೆ ನೀನೇ ಕುಂದು ತಗಲಿಸುವದುಚಿತವೆ?

ಕುಂಬಾರನಿಂದ ಒಡಕ ಗಡಿಗೆಗಳನ್ನಾರೂ ಕೊಳ್ಳುವದಿಲ್ಲ. ಕೊಳಕು ಹಣ್ಣುಗಳು ಮಾರಾಟವಾಗುವದಿಲ್ಲ. ಒಡಕ ಗಡಿಗೆಗಳು ತಿರುಗಿ ಕುಂಬಾರನ ಮನೆಗೇ ಹೋಗುವವು. ಎಲೈ ಭವಚಕ್ರನಾಡಿಸುವ ಕುಂಬಾರನೇ! ನನ್ನಂಥ ನಿರ್ಗುಣಿಗಳು ತಿರುಗಿ ನಿನ್ನೆಡೆಗೆಯೇ ಬರುವರು ಎಚ್ಚರಿಕೆ.

ನನ್ನ ಪೂರ್ವ ಕರ್ಮದ ಫಲವೆಂದು ನೀನು ದೋಷ ತಪ್ಪಿಸಲು ಯತ್ನಿಸಬಹುದು, ಆದರೆ ಪೂರ್ವ ಕರ್ಮವನ್ನಾದರೂ ಮಾತಾಡಿಸಿದವರಾರು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃಷಿ ವಿಜ್ಞಾನಿಯಾಗುವುದಿಂದು ಬಲು ಸುಲಭ ಗೊತ್ತಾ?
Next post ಗಂಧವತಿ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…