ಕಡಲೇ ಒಮ್ಮೊಮ್ಮೆಯಾದರೂ ಬಾ

ಹೀಗೆ ಒಮ್ಮೊಮ್ಮೆಯಾದರೂ
ಎಲ್ಲ ಮಿತಿಗಳ ಮೀರಿ
ನನ್ನೆದೆಯ ದಡಕೆ
ಅಪ್ಪಳಿಸು ಬಾ ಕಡಲೇ.

ಶತಶತಮಾನಗಳಿಂದ
ಕಾದು ಕೆಂಡವಾಗಿರುವ
ನನ್ನೆದೆಯ ಸುಡುಮರಳ
ಕೊಂಚ ತಂಪಾಗಿಸಿಕೊಳ್ಳುತ್ತೇನೆ.

ನೀ ಹೊತ್ತು ತರುವ
ಕುಳಿರ್ಗಾಳಿಗೆ ಒಮ್ಮೆಯಾದರೂ ಅರಳಿ
ಮತ್ತೊಮ್ಮೆ ಪಕ್ಕಗಳಲ್ಲಿ
ಸಾಧ್ಯತೆಗಾಗಿ ಹೊರಳುತ್ತೇನೆ.

ನಿನ್ನೆದೆಯಲಿ ಮುಳುಗುವ
ನಿನ್ನದೆಯಿಂದ ಮೂಡುವ
ಹುಚ್ಚು ಸೂರ್ಯನ ಕಣ್ತುಂಬ ಹೀರಿ
ಹೊಸ ಭರವಸೆಗಳೊಂದಿಗೆ ಕಣ್ತೆರೆಯುತ್ತೇನೆ.

ನೀ ಅಪ್ಪಳಿಸಿದ ರಭಸಕೆ
ಎದ್ದ ಅಲೆಗಳಲಿ ನಾ
ಕಳೆದುಕೊಂಡದ್ದನ್ನೆಲ್ಲಾ
ಮತ್ತೆ ಹುಡುಕುತ್ತೇನೆ.

ನಿನ್ನ ವಿಸ್ತಾರಗಳ ಕಂಡು
ಧನ್ಯಳಾಗುತ್ತಾ ಪುಳಕಗೊಂಡು
ನನಗೆ ನಾನು ಅರ್ಥವಾಗುತ್ತೇನೆ
ಕಲ್ಲು ನಾ ಚಿಗುರುತ್ತೇನೆ.

ನಿನ್ನ ಉಪ್ಪುಪ್ಪು ನೀರಿನಲಿ
ಗಾಢ ಬಣ್ಣಗಳ ಮಾಡಿ
ಈ ತಟಸ್ಥ ಬದುಕಿಗೆರಚಿಕೊಳ್ಳುತ್ತೇನೆ
ಕೆಲಕ್ಷಣಗಳಾದರೂ ನಾನೂ ಕಡಲಾಗುತ್ತೇನೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉದ್ದನ್ನವರ ಮುಂದೆ ಕೀರ್ತನ
Next post ಮೆಂಟ್ಲು ಕೇಸು ಬಳ್ಳಾರಿ ರೆಡ್ಡಿನಾ? ಯಡ್ಡಿನಾ? ಕುಮ್ಮಿನಾ?

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

cheap jordans|wholesale air max|wholesale jordans|wholesale jewelry|wholesale jerseys