ಕಡಲೇ ಒಮ್ಮೊಮ್ಮೆಯಾದರೂ ಬಾ

ಹೀಗೆ ಒಮ್ಮೊಮ್ಮೆಯಾದರೂ
ಎಲ್ಲ ಮಿತಿಗಳ ಮೀರಿ
ನನ್ನೆದೆಯ ದಡಕೆ
ಅಪ್ಪಳಿಸು ಬಾ ಕಡಲೇ.

ಶತಶತಮಾನಗಳಿಂದ
ಕಾದು ಕೆಂಡವಾಗಿರುವ
ನನ್ನೆದೆಯ ಸುಡುಮರಳ
ಕೊಂಚ ತಂಪಾಗಿಸಿಕೊಳ್ಳುತ್ತೇನೆ.

ನೀ ಹೊತ್ತು ತರುವ
ಕುಳಿರ್ಗಾಳಿಗೆ ಒಮ್ಮೆಯಾದರೂ ಅರಳಿ
ಮತ್ತೊಮ್ಮೆ ಪಕ್ಕಗಳಲ್ಲಿ
ಸಾಧ್ಯತೆಗಾಗಿ ಹೊರಳುತ್ತೇನೆ.

ನಿನ್ನೆದೆಯಲಿ ಮುಳುಗುವ
ನಿನ್ನದೆಯಿಂದ ಮೂಡುವ
ಹುಚ್ಚು ಸೂರ್ಯನ ಕಣ್ತುಂಬ ಹೀರಿ
ಹೊಸ ಭರವಸೆಗಳೊಂದಿಗೆ ಕಣ್ತೆರೆಯುತ್ತೇನೆ.

ನೀ ಅಪ್ಪಳಿಸಿದ ರಭಸಕೆ
ಎದ್ದ ಅಲೆಗಳಲಿ ನಾ
ಕಳೆದುಕೊಂಡದ್ದನ್ನೆಲ್ಲಾ
ಮತ್ತೆ ಹುಡುಕುತ್ತೇನೆ.

ನಿನ್ನ ವಿಸ್ತಾರಗಳ ಕಂಡು
ಧನ್ಯಳಾಗುತ್ತಾ ಪುಳಕಗೊಂಡು
ನನಗೆ ನಾನು ಅರ್ಥವಾಗುತ್ತೇನೆ
ಕಲ್ಲು ನಾ ಚಿಗುರುತ್ತೇನೆ.

ನಿನ್ನ ಉಪ್ಪುಪ್ಪು ನೀರಿನಲಿ
ಗಾಢ ಬಣ್ಣಗಳ ಮಾಡಿ
ಈ ತಟಸ್ಥ ಬದುಕಿಗೆರಚಿಕೊಳ್ಳುತ್ತೇನೆ
ಕೆಲಕ್ಷಣಗಳಾದರೂ ನಾನೂ ಕಡಲಾಗುತ್ತೇನೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉದ್ದನ್ನವರ ಮುಂದೆ ಕೀರ್ತನ
Next post ಮೆಂಟ್ಲು ಕೇಸು ಬಳ್ಳಾರಿ ರೆಡ್ಡಿನಾ? ಯಡ್ಡಿನಾ? ಕುಮ್ಮಿನಾ?

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…