Home / ಕವನ / ಕವಿತೆ / ಬೆಡಗಿ

ಬೆಡಗಿ

ಸುಡು ನಿನ್ನ ಸಿಂಗರವ,
ನಿನ್ನ ಸೊಗವ.
ಬಿಡು ನಿನ್ನ ಬೆಡಗ ಹಾ-
ಳಾಗಿಸಿತು ಜಗವ!
ಆಳಾಗಿಸಿತು ನೂರು
ದೇಹಗಳನು,
ತೊಳಲಾಡಿಸಿತ್ತೆನಿತೊ
ಗೇಹಗಳನು!
ನಿನ್ನ ಮಖಮಲು ಮುಖವ
ಬಣ್ಣಿಸಿದ ವೆಂಪು,-
ಕಳೆಯಲದು ನಿಲ್ಲುವವು
ನೂರು ಸಂಪು!
ಓ ಸುವಾಸಿನಿ! ನೀನು
ತೈಲಿಸಿದ ಕೇಶ,-
ಅದಕೆ ಬರಿದಾಯ್ತು ಜನ
ಶಂಕರಿಯ ಕೋಶ!
ಸುಡು ನಿನ್ನ ಸಿಂಗರವ,
ನಿನ್ನ ನೊಗವ.
ಬಿಡು ನಿನ್ನ ಬೆಡಗ, ಹಾ-
ಳಾಗಿಸಿತು ಜಗವ!

ನಿನ್ನ ಧಮನಿಯಲಿರುವ
ರಾಜರಕ್ತ
ಅನ್ಯಾಯಗಳ ತೀರ್‍ಥ-
ವೆಂದು ವ್ಯಕ್ತ
ಕೆಲಸವಿಲ್ಲದೆ ರಾಣಿ-
ವಾಸದಲ್ಲಿ
ಕುಳಿತರಳಿಸಿದ ಮಂದ-
ಹಾಸದಲ್ಲಿ
ನಿನ್ನ ಕುಲಕೋಟಿಯಾ
ಹೆಂಗಳೆಯರು
ಕಂಡಿಹರು ಸ್ವರ್‍ಗವನ್ನು,-
ನೆಲಕಿಳಿಯರು!
ನೂರು ಹೆಣ್ಣಿನ ಹೆಣ್ಣು-
ತನವೆ ಹೋಗಿ,-
ಕೂಲಿ ಹೆಣ್ಣಾಗಿ ಬರಿ
ಯಂತ್ರವಾಗಿ
ಸಾಯುತಿರೆ ಕೂಡಿಟ್ಟ
ಹಣದ ಗಂಟು,-
ಅದರಿಂದ ನಿನ್ನ ಚೆಲು
ವಿಕೆಗೆ ಉಂಟು,-
ನರಕದಾ ಮುಗಿಲಿಂದ
ಬಂದ ಮಿಂಚು,-
ನಿನ್ನ ಕೆಂದುಟಿಯ ನಗೆ,
ರಕ್ಕಸರ ಹೊಂಚು!
ಸುಡು ನಿನ್ನ ಸಿಂಗರವ,
ನಿನ್ನ ಸೊಗವ.
ಬಿಡು ನಿನ್ನ ಬೆಡಗ ಹಾ-
ಳಾಗಿಸಿತು ಜಗವ.

ದಿವ್ಯ ಸುಂದರಿಯಹುದು
ನೀನು ಬಾಲೆ.
ಸೆರೆಗೊಳುವ ಸೆರೆ ನೀನು;
ಹೆಂಡ. ಹಾಲೆ ?
ನಿತ್ಯ ಸಂಕಟ ಪಡಲು
ನೂರು ನರಪ್ರಾಣಿ,-
ಮೆರೆಯಲೆಳಸುವಿಯಲ್ಲ,
ಆಗಿ ಇಂದ್ರಾಣಿ?
ಬಾ ಇತ್ತ ಶಪಿಸುತ್ತ
ನಿನ್ನ ಕುಲಕೋಟಿ,-
ಬಾ ಇತ್ತ ಸಂವದದ
ಸೆರೆಮನೆಯ ದಾಟಿ!
ನೂರು ಗುಡಿಸಲಗಳಲಿ
ಮೀರಿ ನರಳಾಟ,-
ಕಾಸಿಲ್ಲ-ಈಸಿಲ್ಲ-
ವೆಂದು ಹೊರಳಾಟ!
ದೇವ ಕೊಟ್ಟಿಹ ಚೆಲುವ-
ದೊಂದೆ ಸಾಕು,
ಚಲು ಗುಲಾಬಿಗೆ ಬಣ್ಣ –
ನೆಯದೇಕೆ ಬೇಕು?
ಮೀಸಲಿಡು ಆ ಹಣವ
ಕಾಸಿಲ್ಲದರಿಗೆ.
ಇಳಿಯಾಣ್ಮಗೀವುದಿದೆ,-
ಇದೆ ಸುಂಕ, ತೆರಿಗೆ!
ಸುಡು ನಿನ್ನ ಸಿಂಗರವ,
ನಿನ್ನ ನೊಗವ.
ಬಿಡು ನಿನ್ನ ಬೆಡಗ, ಹಾ-
ಳಾಗಿಸಿತು ಜಗವ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...