Home / ಕವನ / ಕವಿತೆ / ನೂಲು ಸುತ್ತುವ ಹಾಡು

ನೂಲು ಸುತ್ತುವ ಹಾಡು

ಸಣ್ಣ ಖಂಡಿಽಕ್ಹಿಡಿದು ಕನ್ನಿ ತಾ ಬರತಾಳಽಽ|
ಚೆನ್ನಮಲ್ಲೈನ ನೆನಽವೂತ ||
ಚೆನ್ನಮಲ್ಲೈನ ನೆನವೂತೀ ಕಳಸಕಽಽ|
ಛೆಂದಾಗಿ ನೂಲಾ ತೊಡಽಽಸವ್ವಾ ||೧||

ಹಸರ ಖಂಡಿಽಕ್ಹಿಡಿದು ಕುಸುಮಲ್ಲಿ ತಾ ಬರತಾಳಽಽ|
ಬಸವೇಸುರನಿಂಗನ ನೆನವೂತ||
ಬಸವೇಸುರನಿಂಗನ ನೆನವೂತೀ ಕಳೆಸಾಕಽಽ|
ಹಸನಾಗಿ ನೂಲಾ ತೊಡಽಽಸವ್ವಾ ||೨||

ಆ ನಾಡದ ಬಡಗ್ಯಾ ಮಾಡಽಬಲ್ಲದ ಮಣಿಯಽಽ|
ಮಾಡುತ ಮಾಣಿಽಕ ಜಡಽದಾರ ||
ಮಾಡುತ ಮಾಣಿಽಕ ಜಡಿಸಿ ತಂದಾ ಮಣಿಯಽಽ|
ಯಾವಲ್ಲಿ ಇಡವೂನ ಹಡದವ್ವಾ ||೩||

ಆ ನಾಡದ ಬಡಗ್ಯಾ ಮಾಡಽಬಲ್ಲದ ಮಣಿಯಽಽ|
ಕೆತ್ತೂತ ಮುತ್ತಾ ಜಡಽದಾರ||
ಕೆತ್ತೂತ ಮುತ್ತಾ ಜಡೆಸಿ ತಂದಾ ಮಣಿಯಽಽ|
ಯಾವಲ್ಲಿ ಇಡವೂನ ಹಡೆದವ್ವಾ ||೪||

ಅಲ್ಲಂಬ್ಹರಿವ್ಯಾಗ ಗಿಲ್ಲಂಬು ಮಗಿನ್ಹಾಕಿ|
ನಿಲ್ಲದಲೆ ನೀರ ಬೆರಽಸ್ಯಾರ ||
ನಿಲ್ಲದಲೆ ನೀರ ಬೆರಸ್ಯಾರ ತಂಗೆವನಽಽ|
ಫಿಲ್ಲ್ಯಾದ ಕಾಲ ಕೆಸರಾಗೆ ||೫||
*****

ಲಗ್ನದಲ್ಲಿ ವಿಧಿಪೂರ್ವಕವಾಗಿ ಸ್ನಾನಮಾಡಿಸುವ ಪ್ರಸಂಗಗಳು ಎರಡು ಸಾರೆ ಬರುತ್ತವೆ. ಒಮ್ಮೆ ಅರಿಸಿಣ ಹಚ್ಚುವಾಗ; ಇನ್ನೊಮ್ಮೆ ಅಕ್ಷತೆಯ ಕಾಲಕ್ಕೆ. ಆಗ ನಾಲ್ಕು ಮೂಲೆಗೆ ನಾಲ್ಕು ತಂಬಿಗೆಗಳನ್ನಿಟ್ಟು, ಅವುಗಳ ಸುತ್ತು ಮುತ್ತು ಮೇರೆಯಂತೆ ನೂಲು ಸುತ್ತಿ, ನಟ್ಟ ನಡುವೆ ಮಣೆಗಳನ್ನಿಟ್ಟು ಮದುಮಕ್ಕಳಿಗೆ ಎರೆಯುತ್ತಾರೆ. ಆಗಿನ ಕಾಲಕ್ಕೆ ನೂಲು ಸುತ್ತುವ ಹಾಡಿದು.

ಛಂದಸ್ಸು:— ತ್ರಿಪದಿ.

ಶಬ್ದ ಪ್ರಯೋಗಗಳು:- ಖಂಡಿಕಿ=ನೂಲಿನ ಕುಕ್ಕುಡಿ, ಹಸನ=ಸ್ವಚ್ಛ. ಅಲ್ಲ್‌ ಮತ್ತು ಗಿಲ್ಣ್=ನೀರಿನ ಸಪ್ಪಳ.

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...