Home / ಕವನ / ಕವಿತೆ / ನೂಲು ಸುತ್ತುವ ಹಾಡು

ನೂಲು ಸುತ್ತುವ ಹಾಡು

ಸಣ್ಣ ಖಂಡಿಽಕ್ಹಿಡಿದು ಕನ್ನಿ ತಾ ಬರತಾಳಽಽ|
ಚೆನ್ನಮಲ್ಲೈನ ನೆನಽವೂತ ||
ಚೆನ್ನಮಲ್ಲೈನ ನೆನವೂತೀ ಕಳಸಕಽಽ|
ಛೆಂದಾಗಿ ನೂಲಾ ತೊಡಽಽಸವ್ವಾ ||೧||

ಹಸರ ಖಂಡಿಽಕ್ಹಿಡಿದು ಕುಸುಮಲ್ಲಿ ತಾ ಬರತಾಳಽಽ|
ಬಸವೇಸುರನಿಂಗನ ನೆನವೂತ||
ಬಸವೇಸುರನಿಂಗನ ನೆನವೂತೀ ಕಳೆಸಾಕಽಽ|
ಹಸನಾಗಿ ನೂಲಾ ತೊಡಽಽಸವ್ವಾ ||೨||

ಆ ನಾಡದ ಬಡಗ್ಯಾ ಮಾಡಽಬಲ್ಲದ ಮಣಿಯಽಽ|
ಮಾಡುತ ಮಾಣಿಽಕ ಜಡಽದಾರ ||
ಮಾಡುತ ಮಾಣಿಽಕ ಜಡಿಸಿ ತಂದಾ ಮಣಿಯಽಽ|
ಯಾವಲ್ಲಿ ಇಡವೂನ ಹಡದವ್ವಾ ||೩||

ಆ ನಾಡದ ಬಡಗ್ಯಾ ಮಾಡಽಬಲ್ಲದ ಮಣಿಯಽಽ|
ಕೆತ್ತೂತ ಮುತ್ತಾ ಜಡಽದಾರ||
ಕೆತ್ತೂತ ಮುತ್ತಾ ಜಡೆಸಿ ತಂದಾ ಮಣಿಯಽಽ|
ಯಾವಲ್ಲಿ ಇಡವೂನ ಹಡೆದವ್ವಾ ||೪||

ಅಲ್ಲಂಬ್ಹರಿವ್ಯಾಗ ಗಿಲ್ಲಂಬು ಮಗಿನ್ಹಾಕಿ|
ನಿಲ್ಲದಲೆ ನೀರ ಬೆರಽಸ್ಯಾರ ||
ನಿಲ್ಲದಲೆ ನೀರ ಬೆರಸ್ಯಾರ ತಂಗೆವನಽಽ|
ಫಿಲ್ಲ್ಯಾದ ಕಾಲ ಕೆಸರಾಗೆ ||೫||
*****

ಲಗ್ನದಲ್ಲಿ ವಿಧಿಪೂರ್ವಕವಾಗಿ ಸ್ನಾನಮಾಡಿಸುವ ಪ್ರಸಂಗಗಳು ಎರಡು ಸಾರೆ ಬರುತ್ತವೆ. ಒಮ್ಮೆ ಅರಿಸಿಣ ಹಚ್ಚುವಾಗ; ಇನ್ನೊಮ್ಮೆ ಅಕ್ಷತೆಯ ಕಾಲಕ್ಕೆ. ಆಗ ನಾಲ್ಕು ಮೂಲೆಗೆ ನಾಲ್ಕು ತಂಬಿಗೆಗಳನ್ನಿಟ್ಟು, ಅವುಗಳ ಸುತ್ತು ಮುತ್ತು ಮೇರೆಯಂತೆ ನೂಲು ಸುತ್ತಿ, ನಟ್ಟ ನಡುವೆ ಮಣೆಗಳನ್ನಿಟ್ಟು ಮದುಮಕ್ಕಳಿಗೆ ಎರೆಯುತ್ತಾರೆ. ಆಗಿನ ಕಾಲಕ್ಕೆ ನೂಲು ಸುತ್ತುವ ಹಾಡಿದು.

ಛಂದಸ್ಸು:— ತ್ರಿಪದಿ.

ಶಬ್ದ ಪ್ರಯೋಗಗಳು:- ಖಂಡಿಕಿ=ನೂಲಿನ ಕುಕ್ಕುಡಿ, ಹಸನ=ಸ್ವಚ್ಛ. ಅಲ್ಲ್‌ ಮತ್ತು ಗಿಲ್ಣ್=ನೀರಿನ ಸಪ್ಪಳ.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...