ಸತ್ಯ ಸಾಕ್ಷಾತ್ಕಾರ

ಇಂದ್ರಿಯಗಳ ಆಟವ ನಿಲ್ಲಸಯ್ಯಾ
ಕ್ಷಣವೊಮ್ಮೆ ನಿಂತು
ಯೋಚಿಸಬಾರದೇನಯ್ಯಾ
ಬಣ್ಣದ ಲೋಕಕ್ಕೆ ಮಾರು ಹೋಗದಿರಯ್ಯಾ

ತನುವಿನ ಸೌಖ್ಯಕ್ಕೆ ನೂರೆಂಟು ಭೋಗ
ಮತ್ತೆ ಪಾಪಗಳ ಅಳಿಸದ ರೋಗ
ಲಾಲಸೆಗಳ ಪಾಠದಲ್ಲಿ ಕರಗುತ್ತ
ಅನೇಕ ಜನುಮಗಳಿಗೆ ಅಹ್ವಾನ

ಮನಸ್ಸು ಹರಿದ ದಾರಿಯಲಿ ಸಾಗಿ
ನಿನ್ನನೆಲ್ಲೊ ಬಿಟ್ಟು ಹೋದೇನು
ನನ್ನವನಿಗೆ ಅರಸುತ್ತ ಅರಸುತ್ತ
ಕರ್ಮಗಳ ನಡುವೆ ಬೆಂದೆಯೇನು!

ಅಷ್ಟ ಮದಗಳ ಧ್ವಂಸ ಗೊಳಿಸು
ಅನುಮಾನ ಅಹಂಕಾರ ಕಿತ್ತೆಸೆ
ಮನದಲ್ಲಿರಲಿ ದೃಢತೆ ವಿಶ್ವಾಸ
ಮಾಣಿಕ್ಯ ವಿಠಲನಾಗಿ ಮೆರೆಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜವಾಹರಲಾಲ ನೆಹರೂ
Next post ಪಾಪಿಯ ಪಾಡು – ೩

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…