Home / ಕವನ / ಕೋಲಾಟ / ತಾನಾನಾ ತಂದ್ರನಾನಾ

ತಾನಾನಾ ತಂದ್ರನಾನಾ

(ಕೆರ್‌ಯಾ ಯೇರಿಯ ಮೇನೇ)

ಕೆರ್‌ಯಾ ಯೇರಿಯ ಮೇನೇ ಕೆರ್‌ಯಾಯೇರಿಯ ಮೇನೇ
ಜಡ್ಯಾ ಕೊಂಬಿನ ಬಸವ ಹಾದಾಡಿ ಮೆಂದಾ ಹೊಡಿ ಹುಲ್ಲಾ || ೧ ||

ಹಾದಾಡಿ ಮೆಂದಾ ಹೊಡಿ ಹುಲ್ಲು ಬಸುವಪ್ಪ
ಕಡುಜೀಲ ಬನುಕೇ ನಡದೀದ || ೨ ||

ಕಡುಜೀಲ ಬನುದಲ್ಲಿ ಕಡುಜಾಣರ ಕಾವೀಲ
ಅಂಬೂ ಬಿಲ್ಲಿಟ್ಟೂ ಹೊಡದಾರೇ ತಾನಽ || ೩ ||

ಅಂಬೂ ಬಿಲ್ಲಿಟ್ಟೂ ಹೊಡಿದವ್ರೆ ಬಸುವಪ್ಪ
ಸಬಾ ಬಿದ್ದಿ ಭೂಮಿ ಮೇನೇ || ೪ ||

ಕಾಯಾ ಹೋಗಿತ ಸ್ವಾಮಿ ಬಳಿಗೇ | ಬಳೀಗೆ ಹೋಗುತನ
ಸ್ವಾಮ್ಯವ್ರು ದೇವಾರ ಪೂಜೆಗೆ ನಿಂತೀರೋ ತಾನಾನ || ೫ ||

‘ಯೇನು ಬಂದೆ ಬಸುವಪ್ಪ? ಯೆಂತು ಬಂದೆ ಬಸುವಪ್ಪ
ಬಂದಾ ಕಾರಣ ನನುಗೇಳು’ ತಾನಾನಾ || ೬ ||

‘ಯೇನು ಅಲ್ಲ ಯೇಲು ಸ್ವಾಮಿ, ಯೆಂತು ಅಲ್ಲ ಯೇಲು ಸ್ವಾಮೀ
ನರುಲೋಕ ನಾನೂ ನಲುಗ್ಲಾರೇ’ ತಾನಾನಾ || ೭ ||

‘ಜಡ್ಯಾಕೊಂಬಿನ ಬಸವ ಕೆರ್‌ಯಾಯೇರಿಯ ಮೇನೇ
ಹಾರಾಡಿ ಮೆಂದೇ ಹೂಡಿಹುಲ್ಲಾ ತಾನಾನಾ | ಹೂಡಿಹುಲ್ಲ ಯೇಲು ಸ್ವಾಮಿ’
ಕಡುಜೀಲ ಬನುಕೇ ನಡುದೀನೇ || ೮ ||

ಕಡುಜೀಲ ಬನುದಲ್ಲಿ ಕಡುಜಾಣರು ಕಾವೀಲ
ಅಂಬೂ ಬಿಲ್ಲಟ್ಟೀ ಹೊಡುದಾರೂ || ೯ ||

ಅಂಬೂ ಬಿಲ್ಲಿಟ್ಟಿ ಹೋಡುದಾರೂ
‘ಅಂಬೂ ಬಿಲ್ಲಿಟ್ಟೇ ಹೋಡುದಾರು ಯೆಲುಸ್ವಾಮೀ
ನನ ಸಬಾ ಬಿದ್ದಿತು ಭೂಮಿ ಮೇನೇ || ೧೦ ||

ಕಾಯಾ ಬಂದಿದೆ ಸ್ವಾಮಿ ಬಳಿಗೆ ಯೆಲು ಸ್ವಾಮೀ’
‘ನಿನ್ನ ಮಾತೀಗ್ ನಾ ಮರುಳಾದನಲ್ಲ ಗರೂಡಾ
ವಳ್ಳೇ ದೇವರ ಕೋಲೂ ಉಳಿವನ ಕೋಲು ಕೋಲೂ’ || ೧೧ ||

‘ಬಚವನಾ ಬಚವನ್ನಿರೇ ಬಚವನಾ ಪಾದಕೆ ಚರಣನ್ನಿರೇ
ಮೇಲೆ ಮುತ್ತಿನ ಚತ್ತುಗೇ ಅದು ನಮ್ಮ ಕಲ್ಲಾ ಪಾಂಡವರಾ ಬಚುವಾ || ೧೨ ||

ನರಲೋ ಕ ನಾನೂ ಸಲ್ಗನಾರೇ ತಾನಾನಾ’ | ಎಂದೇಳಿ
ಬಸಪ್ಪ ಬಿದ್ದಿ ಬಿದ್ದಿ ಹೊರುಳ್ತಾನೋ || ೧೩ ||

ಯೆಟ್ಟೊಂದು ಮಾತಾ ಹೇಳೀರು ಸ್ವಾಮ್ಯವ್ರು
ಬಸಪ್ಪ ಯೆಬ್ಸಿ ಕುಳ್‌ಸೀರು ತಾನಾ || ೧೪ ||

‘ಕೇಳು ಕೇಳೂ ಬಸುವಪ್ಪ, ನೀ ಕೇಳೋ ಬಸುವಪ್ಪ
ನರಲೋಕ ನೀನೂ ಸಲ್ಗಬೇಕೂ ತಾನಾನಾ || ೧೫ ||

ಕಾಮಕ್ಕೆ ಜನಾ ಕೊಡುತೇ, ಮೇವುಕೆ ಹೊಲನಾ ಕೊಡುತೇ
ಇಂದೇ ತೋ ಡಿದ ಬಾವೀ, ಇಂದೇ ನೀರು ಬಂದೀ || ೧೬ ||

ರಂಬ್ಯಾರು ಮಿಂದೂ ಮಡಿಯುಟ್ಟೂ ಉಟ್ಟಿ | ಮಡಿಯಾ ಕಟ್ಟೀ
ಗೋವೀನಡುಗೀಗೇ ಅನುಕೂಲ’ || ೧೭ ||

‘ಗಂದಾಲಕ್ಷತ ತನ್ನಿ ಗಿಂಡೀಲುದಕವ ತನ್ನೀ
ಬಾಳೇಯ ಹಣ್ಣಾ ಸೋಲು ತನ್ನಿ | ಸೋಲು ತನ್ನೀ ನಮ್ಮನೀಯಾ || ೧೮ ||

ಬಸವೀನ ಪೂಜ್ಯಾ ಕನುಕೂಲ’
‘ಕೊಟುಗೀಲಿ ಕೆಸುರಂದೀ ಬೆಟ್ಟದಲ್ಲಿರುಬೇಡ || ೧೯ ||

ಲಲ್ಲೈದದೆ ನಿನ್ನಾ ದುಸುಮಾನಾ
ಅಲ್ಲೇದರೆ ನಿನ್ನಾ ದುಸುಮಾನ ಸಿರಿಕೌಲೀ || ೨೦ ||

ಹೊತ್ತುಳ್ಳರೆ ಬಾರೇ ಕೊಟುಗೀಗೇ’
‘ಕಾಳೀಗ್ ಗಂದಾ ಸೀಡೀ ಬೋಳೀಗಕ್ಸತ ನೀಡೀ || ೨೧ ||

ಹಾಳೀಯಾ ಕರುವೇನ ಬಲುವಿಂದ್ರಾ ಲಪ್ಪಯ್ಯಾ
ಚಿನ್ನದ ಬಟ್ಟಾ ಇಡೂಬಾರೋ ’ || ೨೨ ||

‘ಹಿತ್ತಲ ಕಡುಗೀನಾ ಮೊಟ್ಟುತೀ ಹುಲ್ಲನೆ
ಮೆಟ್ಟದೇ ಬಾರೇ ಸೀರಿಕೌಲಿ ನಿನ್ನೊಡತೀ || ೨೩ ||

ಕಟ್ಟದೇ ಹಾಲಾ ಕರವದೂ
ಕೆಂದಲಾಕಳೆ ನಿನ್ನಾ ಭಾರಾ ಕೆಚ್ಚಲ ಕಂಡೂ || ೨೪ ||

ಕಂಡವರಾ ದೃಷ್ಟಿ ತರವಲ್ಲ | ತರುವಲ್ಲ ವಸುತಾಯೇ
ಹಿಂಡಿನ ಮರು ಸೇರೀ ಬರೂಬೇಕೇ || ೨೫ ||

ಹುಲ್ಲು ಸಾಲವಂದಿ ಕೊಟುಗೀಗೇ ಬರುದಿರಬೇಡಾ
ಹೊತ್ತುಳ್ಳೆ ಕೊಟ್ಟುಗೀಗೇ ಬರೂಬೇಕೇ || ೨೬ ||

ಬರುಬೇಕು ನಿನ್ವೊಡಿಯಾ ಹೊನ್ನಿಗೆ ವಂದ್ ಹೋ ರಿಯಾ ತರುಸೂವಾ
ಇಂದೇ ನಮ್ಮನಿಲೀ ಗೋ ವಿನಬ್ಬ ಅಂದೇ || ೨೭ ||

ಗೋವೀಗ್ ಹೋದ್ ವಡಿಯಾ ತಿರೂಗ್ಬಂದಾ
ಗೋವೀಗ್ ಹೋದ್ ವಡಿಯಾ ತಿರ್ಗೆಸುತ ಲಹ್ನ ಸೊಂಟಾನಾ || ೨೮ ||

ವ್ಯಾವಾಳದ ಗುರುತಾ ಅವಗಿಲ್ಲಾ
ಅತ್ತೀಯೆಲ್ಲಾಮೇನೇ ಹತಕೊಳ್ಗಕ್ಕಿಯನ್ನ || ೨೯ ||

ಹತ್ತೂ ನೂರಡಿಕೇ ಕೊಡೀಯೇಲೇ
ಹತ್ತೂ ನೂರಡಿಕೇ ಕೊಡೀಯೆಲೇ ಕೊರಳಿಗೆ ದಾಬ || ೩೦ ||

ಯೇಳೇ ಸಿರಿ ಕೌಲೀ ಉಳಿಲಕ್ಕು
ಆಲಾದೆಲೆಮೇಲೇ ಆರ್ ಕೊಳಗಕ್ಕಿ ರೊಟ್ಟೀ || ೩೧ ||

ಅರ್ ಹಿಂಗರ ಕೊನೇ ಪಡಿಯೆಲೇ ಕೊರಳಿಗೆ ಚಿನ್ನದ ಡಾಬಾ
‘ಯೇಳೇ ಪಸು ತಾಯೇ ಉಣಲಕ್ಕೂ || ೩೨ ||

ನರಲೋಕ ನೀನೂ ಸಲ್ಗ್‌ಬೇಕೂ’ ತಾನಾನಾ
‘ಕಾವುಕೂ ಜನ್ರೂ ಬೇಡ ಮೇವಾಕೂ ಹೊಲವೂ ಬೇಡ || ೩೩ ||

ನರಲೋಕ ನಾನೂ ಸಲುಗ್ನಾರೇ’ ತಾನಾನಾ
‘ಕಟ್ಟುಕೆ ದಾಬಾ ಕೊಡುತೆ ಉಳವಲ್ಲೀ ಕೊಟ್ಟೆಗೆಯ ಕೊಡುತೇ || ೩೪ ||

ವರಸಕೆ ವಂದು ಹಬ್ಬ ನಿನುಗ್ ಕೊಡುತೇ’ ತಾನಾನಾ
‘ಕಟ್ಟುಕೆ ದಾಬಾ ಬೇಡ, ಉಳುಕೆ ಕೊಟುಗೀ ಬೇಡ || ೩೫ ||

ವರುಸಕೆ ವಂದೆ ಹಬ್ಬ ನನಗು ಬೇಡ’ ತಾನಾನಾ
ಲಟ್ಟೊಂದು ಮಾತಾ ಹೇಳೂವಾ ತಾಕಿನ್ನೇ || ೩೬ ||

ಸ್ವಾಮ್ಯವ್ರಿಗೆ ಸಿಟ್ಟು ಬರುವದೂ ತಾನಾನಾ
ಸ್ವಾಮ್ಯವ್ರಿಗೆ ಸಿಟ್ಟು ಬಂದಿಲ ಯೇನು ಮಾಡಿರು || ೩೭ ||

ಬೆಳ್ಳಿಯ ಬೆತ್ತ ತಡುದವ್ರೇ | ಸ್ವಾಮ್ಯವ್ರು
ಬಸಪ್ಪಗೆ ಯೆಯ್ಡು ಹೊಡುದೀರೂ ತಾನಾನಾ || ೩೮ ||

“ಕೇಳು ಕೇಳೂ ಬಸುವಪ್ಪ, ನೀ ಕೇಳೊ
ಬಸುವಪ್ಪ, ನಾ ಹೇಳೀದ ಮಾತಾ ಕೇಳೂಬೇಕೂ’ ತಾನಾನಾ || ೩೯ ||

‘ಕೇಳು ಕೇಳಿ ನನು ಸ್ವಾಮೀ, ನೀವೇ ಕೇಳಿ ನನು ಸ್ವಾಮಿ
ನರುಲೋಕ ನಾನೂ ಸಲುಗ್ ಬತ್ತೇ’ ತಾನಾನಾ || ೪೦ ||

ಅಟ್ಟೊಂದು ಮಾತ ಹೇಳೀರು ಸ್ವಾಮೀರು
‘ವಾಲಿ ಇಟ್ಟ ಅಕ್ಕ, ಕರಿಬಾರೇ ತಾನಾನಾ | ಬಸುವಪ್ಪ || ೪೧ ||

ಶೀರೀ ಉಟ್ಟ ಅಕ್ಕ ಕಟುನಾರೇ’ ತಾನಾನಾ
ಅಟ್ಟೊಂದ್ ಮಾತಾ ಹೇಳಿಲರು ಸ್ವಾಮ್ಯಾವ್ರು
‘ನರಲೋ ಕ ಸಲುಗೀ ಬರುಬೇಕೂ’ ತಾನನಾ || ೪೨ ||
*****
ಹೇಳಿದವರು: ಸೌ. ನಾಗಮ್ಮ ಮಾಸ್ತಿ ನಾಯ್ಕ, ಹೆಗಡೆಯೂರು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...