ತಾನಾನಾ ತಂದ್ರನಾನಾ

(ಕೆರ್‌ಯಾ ಯೇರಿಯ ಮೇನೇ)

ಕೆರ್‌ಯಾ ಯೇರಿಯ ಮೇನೇ ಕೆರ್‌ಯಾಯೇರಿಯ ಮೇನೇ
ಜಡ್ಯಾ ಕೊಂಬಿನ ಬಸವ ಹಾದಾಡಿ ಮೆಂದಾ ಹೊಡಿ ಹುಲ್ಲಾ || ೧ ||

ಹಾದಾಡಿ ಮೆಂದಾ ಹೊಡಿ ಹುಲ್ಲು ಬಸುವಪ್ಪ
ಕಡುಜೀಲ ಬನುಕೇ ನಡದೀದ || ೨ ||

ಕಡುಜೀಲ ಬನುದಲ್ಲಿ ಕಡುಜಾಣರ ಕಾವೀಲ
ಅಂಬೂ ಬಿಲ್ಲಿಟ್ಟೂ ಹೊಡದಾರೇ ತಾನಽ || ೩ ||

ಅಂಬೂ ಬಿಲ್ಲಿಟ್ಟೂ ಹೊಡಿದವ್ರೆ ಬಸುವಪ್ಪ
ಸಬಾ ಬಿದ್ದಿ ಭೂಮಿ ಮೇನೇ || ೪ ||

ಕಾಯಾ ಹೋಗಿತ ಸ್ವಾಮಿ ಬಳಿಗೇ | ಬಳೀಗೆ ಹೋಗುತನ
ಸ್ವಾಮ್ಯವ್ರು ದೇವಾರ ಪೂಜೆಗೆ ನಿಂತೀರೋ ತಾನಾನ || ೫ ||

‘ಯೇನು ಬಂದೆ ಬಸುವಪ್ಪ? ಯೆಂತು ಬಂದೆ ಬಸುವಪ್ಪ
ಬಂದಾ ಕಾರಣ ನನುಗೇಳು’ ತಾನಾನಾ || ೬ ||

‘ಯೇನು ಅಲ್ಲ ಯೇಲು ಸ್ವಾಮಿ, ಯೆಂತು ಅಲ್ಲ ಯೇಲು ಸ್ವಾಮೀ
ನರುಲೋಕ ನಾನೂ ನಲುಗ್ಲಾರೇ’ ತಾನಾನಾ || ೭ ||

‘ಜಡ್ಯಾಕೊಂಬಿನ ಬಸವ ಕೆರ್‌ಯಾಯೇರಿಯ ಮೇನೇ
ಹಾರಾಡಿ ಮೆಂದೇ ಹೂಡಿಹುಲ್ಲಾ ತಾನಾನಾ | ಹೂಡಿಹುಲ್ಲ ಯೇಲು ಸ್ವಾಮಿ’
ಕಡುಜೀಲ ಬನುಕೇ ನಡುದೀನೇ || ೮ ||

ಕಡುಜೀಲ ಬನುದಲ್ಲಿ ಕಡುಜಾಣರು ಕಾವೀಲ
ಅಂಬೂ ಬಿಲ್ಲಟ್ಟೀ ಹೊಡುದಾರೂ || ೯ ||

ಅಂಬೂ ಬಿಲ್ಲಿಟ್ಟಿ ಹೋಡುದಾರೂ
‘ಅಂಬೂ ಬಿಲ್ಲಿಟ್ಟೇ ಹೋಡುದಾರು ಯೆಲುಸ್ವಾಮೀ
ನನ ಸಬಾ ಬಿದ್ದಿತು ಭೂಮಿ ಮೇನೇ || ೧೦ ||

ಕಾಯಾ ಬಂದಿದೆ ಸ್ವಾಮಿ ಬಳಿಗೆ ಯೆಲು ಸ್ವಾಮೀ’
‘ನಿನ್ನ ಮಾತೀಗ್ ನಾ ಮರುಳಾದನಲ್ಲ ಗರೂಡಾ
ವಳ್ಳೇ ದೇವರ ಕೋಲೂ ಉಳಿವನ ಕೋಲು ಕೋಲೂ’ || ೧೧ ||

‘ಬಚವನಾ ಬಚವನ್ನಿರೇ ಬಚವನಾ ಪಾದಕೆ ಚರಣನ್ನಿರೇ
ಮೇಲೆ ಮುತ್ತಿನ ಚತ್ತುಗೇ ಅದು ನಮ್ಮ ಕಲ್ಲಾ ಪಾಂಡವರಾ ಬಚುವಾ || ೧೨ ||

ನರಲೋ ಕ ನಾನೂ ಸಲ್ಗನಾರೇ ತಾನಾನಾ’ | ಎಂದೇಳಿ
ಬಸಪ್ಪ ಬಿದ್ದಿ ಬಿದ್ದಿ ಹೊರುಳ್ತಾನೋ || ೧೩ ||

ಯೆಟ್ಟೊಂದು ಮಾತಾ ಹೇಳೀರು ಸ್ವಾಮ್ಯವ್ರು
ಬಸಪ್ಪ ಯೆಬ್ಸಿ ಕುಳ್‌ಸೀರು ತಾನಾ || ೧೪ ||

‘ಕೇಳು ಕೇಳೂ ಬಸುವಪ್ಪ, ನೀ ಕೇಳೋ ಬಸುವಪ್ಪ
ನರಲೋಕ ನೀನೂ ಸಲ್ಗಬೇಕೂ ತಾನಾನಾ || ೧೫ ||

ಕಾಮಕ್ಕೆ ಜನಾ ಕೊಡುತೇ, ಮೇವುಕೆ ಹೊಲನಾ ಕೊಡುತೇ
ಇಂದೇ ತೋ ಡಿದ ಬಾವೀ, ಇಂದೇ ನೀರು ಬಂದೀ || ೧೬ ||

ರಂಬ್ಯಾರು ಮಿಂದೂ ಮಡಿಯುಟ್ಟೂ ಉಟ್ಟಿ | ಮಡಿಯಾ ಕಟ್ಟೀ
ಗೋವೀನಡುಗೀಗೇ ಅನುಕೂಲ’ || ೧೭ ||

‘ಗಂದಾಲಕ್ಷತ ತನ್ನಿ ಗಿಂಡೀಲುದಕವ ತನ್ನೀ
ಬಾಳೇಯ ಹಣ್ಣಾ ಸೋಲು ತನ್ನಿ | ಸೋಲು ತನ್ನೀ ನಮ್ಮನೀಯಾ || ೧೮ ||

ಬಸವೀನ ಪೂಜ್ಯಾ ಕನುಕೂಲ’
‘ಕೊಟುಗೀಲಿ ಕೆಸುರಂದೀ ಬೆಟ್ಟದಲ್ಲಿರುಬೇಡ || ೧೯ ||

ಲಲ್ಲೈದದೆ ನಿನ್ನಾ ದುಸುಮಾನಾ
ಅಲ್ಲೇದರೆ ನಿನ್ನಾ ದುಸುಮಾನ ಸಿರಿಕೌಲೀ || ೨೦ ||

ಹೊತ್ತುಳ್ಳರೆ ಬಾರೇ ಕೊಟುಗೀಗೇ’
‘ಕಾಳೀಗ್ ಗಂದಾ ಸೀಡೀ ಬೋಳೀಗಕ್ಸತ ನೀಡೀ || ೨೧ ||

ಹಾಳೀಯಾ ಕರುವೇನ ಬಲುವಿಂದ್ರಾ ಲಪ್ಪಯ್ಯಾ
ಚಿನ್ನದ ಬಟ್ಟಾ ಇಡೂಬಾರೋ ’ || ೨೨ ||

‘ಹಿತ್ತಲ ಕಡುಗೀನಾ ಮೊಟ್ಟುತೀ ಹುಲ್ಲನೆ
ಮೆಟ್ಟದೇ ಬಾರೇ ಸೀರಿಕೌಲಿ ನಿನ್ನೊಡತೀ || ೨೩ ||

ಕಟ್ಟದೇ ಹಾಲಾ ಕರವದೂ
ಕೆಂದಲಾಕಳೆ ನಿನ್ನಾ ಭಾರಾ ಕೆಚ್ಚಲ ಕಂಡೂ || ೨೪ ||

ಕಂಡವರಾ ದೃಷ್ಟಿ ತರವಲ್ಲ | ತರುವಲ್ಲ ವಸುತಾಯೇ
ಹಿಂಡಿನ ಮರು ಸೇರೀ ಬರೂಬೇಕೇ || ೨೫ ||

ಹುಲ್ಲು ಸಾಲವಂದಿ ಕೊಟುಗೀಗೇ ಬರುದಿರಬೇಡಾ
ಹೊತ್ತುಳ್ಳೆ ಕೊಟ್ಟುಗೀಗೇ ಬರೂಬೇಕೇ || ೨೬ ||

ಬರುಬೇಕು ನಿನ್ವೊಡಿಯಾ ಹೊನ್ನಿಗೆ ವಂದ್ ಹೋ ರಿಯಾ ತರುಸೂವಾ
ಇಂದೇ ನಮ್ಮನಿಲೀ ಗೋ ವಿನಬ್ಬ ಅಂದೇ || ೨೭ ||

ಗೋವೀಗ್ ಹೋದ್ ವಡಿಯಾ ತಿರೂಗ್ಬಂದಾ
ಗೋವೀಗ್ ಹೋದ್ ವಡಿಯಾ ತಿರ್ಗೆಸುತ ಲಹ್ನ ಸೊಂಟಾನಾ || ೨೮ ||

ವ್ಯಾವಾಳದ ಗುರುತಾ ಅವಗಿಲ್ಲಾ
ಅತ್ತೀಯೆಲ್ಲಾಮೇನೇ ಹತಕೊಳ್ಗಕ್ಕಿಯನ್ನ || ೨೯ ||

ಹತ್ತೂ ನೂರಡಿಕೇ ಕೊಡೀಯೇಲೇ
ಹತ್ತೂ ನೂರಡಿಕೇ ಕೊಡೀಯೆಲೇ ಕೊರಳಿಗೆ ದಾಬ || ೩೦ ||

ಯೇಳೇ ಸಿರಿ ಕೌಲೀ ಉಳಿಲಕ್ಕು
ಆಲಾದೆಲೆಮೇಲೇ ಆರ್ ಕೊಳಗಕ್ಕಿ ರೊಟ್ಟೀ || ೩೧ ||

ಅರ್ ಹಿಂಗರ ಕೊನೇ ಪಡಿಯೆಲೇ ಕೊರಳಿಗೆ ಚಿನ್ನದ ಡಾಬಾ
‘ಯೇಳೇ ಪಸು ತಾಯೇ ಉಣಲಕ್ಕೂ || ೩೨ ||

ನರಲೋಕ ನೀನೂ ಸಲ್ಗ್‌ಬೇಕೂ’ ತಾನಾನಾ
‘ಕಾವುಕೂ ಜನ್ರೂ ಬೇಡ ಮೇವಾಕೂ ಹೊಲವೂ ಬೇಡ || ೩೩ ||

ನರಲೋಕ ನಾನೂ ಸಲುಗ್ನಾರೇ’ ತಾನಾನಾ
‘ಕಟ್ಟುಕೆ ದಾಬಾ ಕೊಡುತೆ ಉಳವಲ್ಲೀ ಕೊಟ್ಟೆಗೆಯ ಕೊಡುತೇ || ೩೪ ||

ವರಸಕೆ ವಂದು ಹಬ್ಬ ನಿನುಗ್ ಕೊಡುತೇ’ ತಾನಾನಾ
‘ಕಟ್ಟುಕೆ ದಾಬಾ ಬೇಡ, ಉಳುಕೆ ಕೊಟುಗೀ ಬೇಡ || ೩೫ ||

ವರುಸಕೆ ವಂದೆ ಹಬ್ಬ ನನಗು ಬೇಡ’ ತಾನಾನಾ
ಲಟ್ಟೊಂದು ಮಾತಾ ಹೇಳೂವಾ ತಾಕಿನ್ನೇ || ೩೬ ||

ಸ್ವಾಮ್ಯವ್ರಿಗೆ ಸಿಟ್ಟು ಬರುವದೂ ತಾನಾನಾ
ಸ್ವಾಮ್ಯವ್ರಿಗೆ ಸಿಟ್ಟು ಬಂದಿಲ ಯೇನು ಮಾಡಿರು || ೩೭ ||

ಬೆಳ್ಳಿಯ ಬೆತ್ತ ತಡುದವ್ರೇ | ಸ್ವಾಮ್ಯವ್ರು
ಬಸಪ್ಪಗೆ ಯೆಯ್ಡು ಹೊಡುದೀರೂ ತಾನಾನಾ || ೩೮ ||

“ಕೇಳು ಕೇಳೂ ಬಸುವಪ್ಪ, ನೀ ಕೇಳೊ
ಬಸುವಪ್ಪ, ನಾ ಹೇಳೀದ ಮಾತಾ ಕೇಳೂಬೇಕೂ’ ತಾನಾನಾ || ೩೯ ||

‘ಕೇಳು ಕೇಳಿ ನನು ಸ್ವಾಮೀ, ನೀವೇ ಕೇಳಿ ನನು ಸ್ವಾಮಿ
ನರುಲೋಕ ನಾನೂ ಸಲುಗ್ ಬತ್ತೇ’ ತಾನಾನಾ || ೪೦ ||

ಅಟ್ಟೊಂದು ಮಾತ ಹೇಳೀರು ಸ್ವಾಮೀರು
‘ವಾಲಿ ಇಟ್ಟ ಅಕ್ಕ, ಕರಿಬಾರೇ ತಾನಾನಾ | ಬಸುವಪ್ಪ || ೪೧ ||

ಶೀರೀ ಉಟ್ಟ ಅಕ್ಕ ಕಟುನಾರೇ’ ತಾನಾನಾ
ಅಟ್ಟೊಂದ್ ಮಾತಾ ಹೇಳಿಲರು ಸ್ವಾಮ್ಯಾವ್ರು
‘ನರಲೋ ಕ ಸಲುಗೀ ಬರುಬೇಕೂ’ ತಾನನಾ || ೪೨ ||
*****
ಹೇಳಿದವರು: ಸೌ. ನಾಗಮ್ಮ ಮಾಸ್ತಿ ನಾಯ್ಕ, ಹೆಗಡೆಯೂರು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾನನವಿಲ್ಲದೆ ಆನೆಯೆಂತು? ಕೃಷಿಯೆಂತು?
Next post ಐತಿಹ್ಯದ ನಿರಚನೆ: ತೇರು

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys