Home / ಕವನ / ಕೋಲಾಟ / ಶಿವರಾತ್ರಿ ದಿನದಲ್ಲಿ (ಸುಗ್ಗಿ ಕೋಲಾಟದ ಪದ)

ಶಿವರಾತ್ರಿ ದಿನದಲ್ಲಿ (ಸುಗ್ಗಿ ಕೋಲಾಟದ ಪದ)

ಪಾಂಡೋರೊಂದು ಮುರುದಂಗಾ ಲಿಡೀದಾರೋ
ನಾರಾಣ ತಾಲಾವ ಹಿಡಿದಾನೋ || ೧ ||

ಪಾರಾವತಿ ಲುರುಗೆಜ್ಜೇನ ಹಿಡಿದಾಲೋ
ಮೂಡಿನೊಂದು ಮುಂದಾಗೀ ನಡೆದಾರೋ || ೨ ||

ಮೂಡಿಗೊಂದು ಮೊಕುವಾಕೇ ನಿಂತಾರೋ
ಪಾಂಡೋ ರೊಂದು ಮುರುದಂಗಾನೇ ಹೊಡಿದಾರೋ || ೩ ||

ನಾರಾೖಣ ತಾಲಾನೇ ಹೊಡೆದಾನೋ
ಪಾರಾವತಿ ಲುರುಗೆಜ್ಜೇನ ಕಟ್ಟಗಿಲೋ || ೪ ||

ದೇವತೆಗೋಲ ಕುಂಜಾನೇ ಹಿಡಿದಾರೋ
ಬಲಿಂದರಾಯ ಹೊಯ್ಲನೇ ಹೊಡೆದಾನೋ || ೫ ||

ಯೇಲೂ ಹಗಲೂ ಯೇಲು ದಾತರೇ ಕೊನಿದಾರೋ
ನೋಡ ಗುಡ್ಡೇ ಗುಡ್ಡೆ ಕಲ್ಲೇ ಯೆಲ್ಲಾವ ನಡ್ಸುವಾಗೇ || ೬ ||

ಗುಡ್ಡೆಮೇನೆ ಮರುಗಾದಿ ಗೋಳೆಲ್ಲಾ
ನೋಡೆ ಹುಲ್ಲೂನೀರು ತಾವೇಯ ಬಿಡುವಾಗೇ || ೭ ||

ಆಕಾಶಕೆ ದುಗುಲೇಯ ಹಾರುವಾಗೇ
ಪಾರವೋತಿ ಪರುಮೇಶ್ವರ ಬರೂವಾಗೇ || ೮ ||

ನೋಡಾಕಾಶಕೆ ದುಗುಲೇಯ ಹಾರುವಾಗೇ
ನೋಡ ಕಣ್ಣೀಗೆ ಹೊಡಿಯಾರು ಶಿರುವಾಗೇ || ೯ ||

ನೋಡಿದುವೇ ನಮ್ಮಾಗೆ ತರವಲ್ಲೋ
ನೋಡಿದವು ನಮಗೆ ತರವಲ್ಲೇ || ೧೦ ||

ಗೌಡಾರೊಂದು ಬೊಮ್ಮಣ್ಣನ ಕರೆಬೇಕೂ
ನಾವ್ ಬಟ್ಟಕೊಂದು ಜೋಯಿಸಾನ ಕೇಲುಬೇಕೂ || ೧೧ ||

ನಾವ್ ಕಾಲಾಕೊಂದು ಸೂರಾಡುಲೆ ಬರುವಾದೋ
ನಾ ಶುಗ್ಗೀ ಯೇಲು ಶಿವರಾತುರಿ ದಿನುದಲ್ಲೀ || ೧೨ ||
*****
ಹೇಳಿದವರು: ದೇವುಕುಪ್ಪ ಗೌಡ, ನೆಲ್ಲೆಕೇರಿ ಮೂರೂರು. ದಿ: ೧೫/೧೧/೧೯೭೧

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...