ಶಿವರಾತ್ರಿ ದಿನದಲ್ಲಿ (ಸುಗ್ಗಿ ಕೋಲಾಟದ ಪದ)

ಪಾಂಡೋರೊಂದು ಮುರುದಂಗಾ ಲಿಡೀದಾರೋ
ನಾರಾಣ ತಾಲಾವ ಹಿಡಿದಾನೋ || ೧ ||

ಪಾರಾವತಿ ಲುರುಗೆಜ್ಜೇನ ಹಿಡಿದಾಲೋ
ಮೂಡಿನೊಂದು ಮುಂದಾಗೀ ನಡೆದಾರೋ || ೨ ||

ಮೂಡಿಗೊಂದು ಮೊಕುವಾಕೇ ನಿಂತಾರೋ
ಪಾಂಡೋ ರೊಂದು ಮುರುದಂಗಾನೇ ಹೊಡಿದಾರೋ || ೩ ||

ನಾರಾೖಣ ತಾಲಾನೇ ಹೊಡೆದಾನೋ
ಪಾರಾವತಿ ಲುರುಗೆಜ್ಜೇನ ಕಟ್ಟಗಿಲೋ || ೪ ||

ದೇವತೆಗೋಲ ಕುಂಜಾನೇ ಹಿಡಿದಾರೋ
ಬಲಿಂದರಾಯ ಹೊಯ್ಲನೇ ಹೊಡೆದಾನೋ || ೫ ||

ಯೇಲೂ ಹಗಲೂ ಯೇಲು ದಾತರೇ ಕೊನಿದಾರೋ
ನೋಡ ಗುಡ್ಡೇ ಗುಡ್ಡೆ ಕಲ್ಲೇ ಯೆಲ್ಲಾವ ನಡ್ಸುವಾಗೇ || ೬ ||

ಗುಡ್ಡೆಮೇನೆ ಮರುಗಾದಿ ಗೋಳೆಲ್ಲಾ
ನೋಡೆ ಹುಲ್ಲೂನೀರು ತಾವೇಯ ಬಿಡುವಾಗೇ || ೭ ||

ಆಕಾಶಕೆ ದುಗುಲೇಯ ಹಾರುವಾಗೇ
ಪಾರವೋತಿ ಪರುಮೇಶ್ವರ ಬರೂವಾಗೇ || ೮ ||

ನೋಡಾಕಾಶಕೆ ದುಗುಲೇಯ ಹಾರುವಾಗೇ
ನೋಡ ಕಣ್ಣೀಗೆ ಹೊಡಿಯಾರು ಶಿರುವಾಗೇ || ೯ ||

ನೋಡಿದುವೇ ನಮ್ಮಾಗೆ ತರವಲ್ಲೋ
ನೋಡಿದವು ನಮಗೆ ತರವಲ್ಲೇ || ೧೦ ||

ಗೌಡಾರೊಂದು ಬೊಮ್ಮಣ್ಣನ ಕರೆಬೇಕೂ
ನಾವ್ ಬಟ್ಟಕೊಂದು ಜೋಯಿಸಾನ ಕೇಲುಬೇಕೂ || ೧೧ ||

ನಾವ್ ಕಾಲಾಕೊಂದು ಸೂರಾಡುಲೆ ಬರುವಾದೋ
ನಾ ಶುಗ್ಗೀ ಯೇಲು ಶಿವರಾತುರಿ ದಿನುದಲ್ಲೀ || ೧೨ ||
*****
ಹೇಳಿದವರು: ದೇವುಕುಪ್ಪ ಗೌಡ, ನೆಲ್ಲೆಕೇರಿ ಮೂರೂರು. ದಿ: ೧೫/೧೧/೧೯೭೧

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಿತೊಡಾ ಮರಕು ಗೊಬ್ಬರಕು ಅಂತರವದೇನು?
Next post ರೂಪವಿಸ್ಮಯ ಮತ್ತು ರೂಪವಿಸ್ಮೃತಿ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys