ತಂದಾನ ತೈದಾನೋ

ತಾನನಂದ್ರ ನಾನೋ ತಾನತಂದ್ರ ನಾನೋ
ತಂದಾನ ತೈದಾನೋ ತಾನಾನಾ || ೧ ||

ಶ್ವಾಮಿ ಇಂದ್ರ ಮೇನೋ ಭೂಮಿಯ ನೆನೆದಾನೋ
ಶ್ವಾಮಿ ಶಂಕರನಾ ನೆನೆವೇನೋ || ೨ ||

ಶ್ವಾಮಿ ಶಂಕರನಾ ನೆನವ ಗುಂಬಳತಾಯೇ ಭೂಮಿ
ಬಲ್ಲವರೇ ಹಾಡಾ ತೊಡಗಿರುವಾ || ೩ ||

ಬಲ್ಲವ್ರ ಹೇಳಿದ ಹಾಡೂ ಬಣ್ಣನೆ ವರಮುಂದಾ
ಯೆಣ್ಣೇಶೀ ಕೇಳಿ ಜನರೆಲ್ಲಾ
ಯೆಣ್ಣೇಶೀ ಕೇಳಿ ಜನ್ರರೆಪೊಗ್ಡೆ ಹೂಡೀ || ೪ ||

ಜನ್ರ ಕಟ್ಟಿರೂ ಯರ್ಡು ಯೆತ್ತಾ
ಯರಡ ಯೆತ್ತಿನ ಮೇಲೇ ಹೇರಿ ಬರುತದೇ ಬೆಲಿಯಲೇ || ೫ ||

ಹೇರಿ ಬರುತದೇ ಬೆಲಿಯಲ್ ಗೋಕನ ಶೂಲೆರೇ
ದುಡ್ಡಿಗೆ ವಂದು ವೀಲೆ ಮೆಲುವಾರೇ? ಮೆಲ್ದೂಕ್ ಗೋಕನ ಶೂಲೇರೂ
ತಾಶಿಗ್ವೊಂದು ಪತ್ರಾ ಬರೆವೋರೂ… ಬರೆವೋರೊ || ೬ ||

ಗಾಲಲೀ ಮೊಲ್ಯೇ ಬೆಲೆವೋಲೇ… ಬೆಲವರೆ ಗೊಕನ್ ಶೂಲೆರೂ
ತೋ ಲೇ ಗಾಲೀ ಬೀಶೂವೋರೇ || ೭ ||
*****
ಹೇಳಿದವರು: ಕುಪ್ಪ ಮಾರುಗೌಡ, ಕೂಜಳ್ಳಿ, ೫೫ ವರ್ಷ, ೧/೩/೭೭.

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತೆ ಗುಣಿಸಿದೊಡೆಂತು ಶೂನ್ಯದೊಳು? ಕೂಡಲರಿಯದೆ
Next post ಭವ ನೀಗುವ ಬಗೆ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…