ಗುರುವಿನ ಸಿರಿಪಾದಕೆ ಶರಣೆನ್ನಿರೊ

ಜೈ ತನ್ನನ್ನೇ ತಂದಾನೋ ತಾನೋ ತಂದಾನೋ ತಂದಾನಲೋ
ತಂದಾನೋ ತಂದಾನೋ ದೇವರ ತಂದೋ ನಾನು
ಗುರುವೇ ಗುರುವೇ ಮತ್ತೆ ಗುರುಪಾದ ಯೆಣ್ಣುವೋ
ಗುರುನ ಸಿರಪಾದಕೆ ಶರಣೆನ್ನಿರೋ || ೧ ||

ಹಾಲುಂಡ ಹ್ಯಾಲುಂಡ ಬೇಡುಂದು ದೇವಳ್ಳಿಗನೋ
ದೇವರ ವಳ್ಳೇದು ನಮ್ಮ ಸಿದುರಾಮಾ
ದೇವರ ವಳ್ಳೇದು ನಮ್ಮ ಸಿದುರಾಮಾ ವಡೆಯನ ಪೂಜೇಲೋ
ಪೂಜೇಲೇ ವಳ್ಳೀದ ನಮ್ಮ ಗಣಪಾನೋ || ೨ ||

ಅಣ್ಣಯ್ಯನ ಕುದರಿಗೆ ಹಸರವ ಹಲ್ಯಾನೋ
ಸಿದುರಾಮ ವಡಿಯರ ಬಡಿಪಾದ
ಏ ಕುಳ್ಳಾ ಅಂದರೆ ಭೂಮಿಯಲ್ಲಿ ಹಾರವ ಇಂದರೆ ಗಿಡವೂಲ್ಲ || ೩ ||

ನೀ ಕೇಳೇ ಗರುಡ ಪಕ್ಷ ನೀ ಕೇಳೆ ಗರುಡ
ಮೂರೆಂಬ ಮೊಟ್ಟೆವನು ಹಾಕಬರುರೊ
ಏ ಈಸ್ವರ ವೇನು ಮಾಡ್ಯ ಈಸ್ವರ ಲೇನು ಮಾಡ್ಯಾ? || ೪ ||

ವಂದು ಮೊಟ್ಟೆ ತೆಗದಿ ವಡೂದಾನ ಕೋಲೇ
ಭೂಮಿ ಮಂಡಲವನ್ನು ಪಡುದಾನ ಕೋಲೇ
ಏ ಈಸ್ವರ ಲೇನು ಮಾಡ್ಯ ಈಸ್ವರ ಲೇನು ಮಾಡ್ಯಾ || ೫ ||

ಸುತ್ತೇಳು ಸಮುದಿರ ಪಡುದಾನ ಈಸ್ವರ ದೇವ
ಮಾರನ ಮೇಟವನ ಪಡುದಾನ ಕೋಲೇ ಈಸ್ವರ ದೇವಾ
ಈಸೂರ ದೇವೇನು ಮಾಡ್ಯ ಈಸೂರ ದೇವೇನು ಮಾಡ್ಯ || ೬ ||

ಬಸವೇಸರಗಾದರೆ ಪಡುದಾನು ಕೋಲೆ
ನಿನಗಿನ್ನು ದೊಡ್ಡವ್ನ ಯಾರೂ ಯೆಲ್ಲಾದೆ ನೀನು
ನೀನೇ ಸಿವನಾ ದೊಡ್ಡವ ಕೋಲು || ೭ ||
*****
ಹೇಳಿದವರು: ಶ್ರೀ ಬುದ್ಯಾ ಗುಣನಾಯ್ಕ, ಅರಗಾ ತಾ: ಕಾರವಾರ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಮ್ಮಾದಿ ಪುರುಷರ ಸಂಪ್ರದಾಯವೆಂತಿತ್ತು ಗೊತ್ತಾ?
Next post ಕುವೆಂಪು ಕಂಡ ಅಡುಗೆಕೋಣೆ ಎಂಬ ಜಗತ್ತು

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…