Home / ಕವನ / ಕೋಲಾಟ / ಗುರುವಿನ ಸಿರಿಪಾದಕೆ ಶರಣೆನ್ನಿರೊ

ಗುರುವಿನ ಸಿರಿಪಾದಕೆ ಶರಣೆನ್ನಿರೊ

ಜೈ ತನ್ನನ್ನೇ ತಂದಾನೋ ತಾನೋ ತಂದಾನೋ ತಂದಾನಲೋ
ತಂದಾನೋ ತಂದಾನೋ ದೇವರ ತಂದೋ ನಾನು
ಗುರುವೇ ಗುರುವೇ ಮತ್ತೆ ಗುರುಪಾದ ಯೆಣ್ಣುವೋ
ಗುರುನ ಸಿರಪಾದಕೆ ಶರಣೆನ್ನಿರೋ || ೧ ||

ಹಾಲುಂಡ ಹ್ಯಾಲುಂಡ ಬೇಡುಂದು ದೇವಳ್ಳಿಗನೋ
ದೇವರ ವಳ್ಳೇದು ನಮ್ಮ ಸಿದುರಾಮಾ
ದೇವರ ವಳ್ಳೇದು ನಮ್ಮ ಸಿದುರಾಮಾ ವಡೆಯನ ಪೂಜೇಲೋ
ಪೂಜೇಲೇ ವಳ್ಳೀದ ನಮ್ಮ ಗಣಪಾನೋ || ೨ ||

ಅಣ್ಣಯ್ಯನ ಕುದರಿಗೆ ಹಸರವ ಹಲ್ಯಾನೋ
ಸಿದುರಾಮ ವಡಿಯರ ಬಡಿಪಾದ
ಏ ಕುಳ್ಳಾ ಅಂದರೆ ಭೂಮಿಯಲ್ಲಿ ಹಾರವ ಇಂದರೆ ಗಿಡವೂಲ್ಲ || ೩ ||

ನೀ ಕೇಳೇ ಗರುಡ ಪಕ್ಷ ನೀ ಕೇಳೆ ಗರುಡ
ಮೂರೆಂಬ ಮೊಟ್ಟೆವನು ಹಾಕಬರುರೊ
ಏ ಈಸ್ವರ ವೇನು ಮಾಡ್ಯ ಈಸ್ವರ ಲೇನು ಮಾಡ್ಯಾ? || ೪ ||

ವಂದು ಮೊಟ್ಟೆ ತೆಗದಿ ವಡೂದಾನ ಕೋಲೇ
ಭೂಮಿ ಮಂಡಲವನ್ನು ಪಡುದಾನ ಕೋಲೇ
ಏ ಈಸ್ವರ ಲೇನು ಮಾಡ್ಯ ಈಸ್ವರ ಲೇನು ಮಾಡ್ಯಾ || ೫ ||

ಸುತ್ತೇಳು ಸಮುದಿರ ಪಡುದಾನ ಈಸ್ವರ ದೇವ
ಮಾರನ ಮೇಟವನ ಪಡುದಾನ ಕೋಲೇ ಈಸ್ವರ ದೇವಾ
ಈಸೂರ ದೇವೇನು ಮಾಡ್ಯ ಈಸೂರ ದೇವೇನು ಮಾಡ್ಯ || ೬ ||

ಬಸವೇಸರಗಾದರೆ ಪಡುದಾನು ಕೋಲೆ
ನಿನಗಿನ್ನು ದೊಡ್ಡವ್ನ ಯಾರೂ ಯೆಲ್ಲಾದೆ ನೀನು
ನೀನೇ ಸಿವನಾ ದೊಡ್ಡವ ಕೋಲು || ೭ ||
*****
ಹೇಳಿದವರು: ಶ್ರೀ ಬುದ್ಯಾ ಗುಣನಾಯ್ಕ, ಅರಗಾ ತಾ: ಕಾರವಾರ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...