ಗುರುವಿನ ಸಿರಿಪಾದಕೆ ಶರಣೆನ್ನಿರೊ

ಜೈ ತನ್ನನ್ನೇ ತಂದಾನೋ ತಾನೋ ತಂದಾನೋ ತಂದಾನಲೋ
ತಂದಾನೋ ತಂದಾನೋ ದೇವರ ತಂದೋ ನಾನು
ಗುರುವೇ ಗುರುವೇ ಮತ್ತೆ ಗುರುಪಾದ ಯೆಣ್ಣುವೋ
ಗುರುನ ಸಿರಪಾದಕೆ ಶರಣೆನ್ನಿರೋ || ೧ ||

ಹಾಲುಂಡ ಹ್ಯಾಲುಂಡ ಬೇಡುಂದು ದೇವಳ್ಳಿಗನೋ
ದೇವರ ವಳ್ಳೇದು ನಮ್ಮ ಸಿದುರಾಮಾ
ದೇವರ ವಳ್ಳೇದು ನಮ್ಮ ಸಿದುರಾಮಾ ವಡೆಯನ ಪೂಜೇಲೋ
ಪೂಜೇಲೇ ವಳ್ಳೀದ ನಮ್ಮ ಗಣಪಾನೋ || ೨ ||

ಅಣ್ಣಯ್ಯನ ಕುದರಿಗೆ ಹಸರವ ಹಲ್ಯಾನೋ
ಸಿದುರಾಮ ವಡಿಯರ ಬಡಿಪಾದ
ಏ ಕುಳ್ಳಾ ಅಂದರೆ ಭೂಮಿಯಲ್ಲಿ ಹಾರವ ಇಂದರೆ ಗಿಡವೂಲ್ಲ || ೩ ||

ನೀ ಕೇಳೇ ಗರುಡ ಪಕ್ಷ ನೀ ಕೇಳೆ ಗರುಡ
ಮೂರೆಂಬ ಮೊಟ್ಟೆವನು ಹಾಕಬರುರೊ
ಏ ಈಸ್ವರ ವೇನು ಮಾಡ್ಯ ಈಸ್ವರ ಲೇನು ಮಾಡ್ಯಾ? || ೪ ||

ವಂದು ಮೊಟ್ಟೆ ತೆಗದಿ ವಡೂದಾನ ಕೋಲೇ
ಭೂಮಿ ಮಂಡಲವನ್ನು ಪಡುದಾನ ಕೋಲೇ
ಏ ಈಸ್ವರ ಲೇನು ಮಾಡ್ಯ ಈಸ್ವರ ಲೇನು ಮಾಡ್ಯಾ || ೫ ||

ಸುತ್ತೇಳು ಸಮುದಿರ ಪಡುದಾನ ಈಸ್ವರ ದೇವ
ಮಾರನ ಮೇಟವನ ಪಡುದಾನ ಕೋಲೇ ಈಸ್ವರ ದೇವಾ
ಈಸೂರ ದೇವೇನು ಮಾಡ್ಯ ಈಸೂರ ದೇವೇನು ಮಾಡ್ಯ || ೬ ||

ಬಸವೇಸರಗಾದರೆ ಪಡುದಾನು ಕೋಲೆ
ನಿನಗಿನ್ನು ದೊಡ್ಡವ್ನ ಯಾರೂ ಯೆಲ್ಲಾದೆ ನೀನು
ನೀನೇ ಸಿವನಾ ದೊಡ್ಡವ ಕೋಲು || ೭ ||
*****
ಹೇಳಿದವರು: ಶ್ರೀ ಬುದ್ಯಾ ಗುಣನಾಯ್ಕ, ಅರಗಾ ತಾ: ಕಾರವಾರ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಮ್ಮಾದಿ ಪುರುಷರ ಸಂಪ್ರದಾಯವೆಂತಿತ್ತು ಗೊತ್ತಾ?
Next post ಕುವೆಂಪು ಕಂಡ ಅಡುಗೆಕೋಣೆ ಎಂಬ ಜಗತ್ತು

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys