ಸೋಮೇಗೌಡ

ಕತ್ತಲಾಗಿತ್ತು. ದನಕರುಗಳನ್ನು ಆಟ್ಟಿಕೊಂಡು ಆರಂಬಗಾರರೆಲ್ಲರೂ ಹೊಲ ಗದ್ದೆಗಳಿಂದ ಆಗತಾನೇ ಹಿಂದಿರುಗಿ ಬರುತ್ತಿದ್ದರು. ಪಟೇಲ ಸೋಮೇಗೌಡನು ಮಳೆಬೆಳೆ ವಿಚಾರವಾಗಿ ಮಾತನಾಡುತ್ತ ಚಾವಡಿಯಲ್ಲಿ ಕುಳಿತಿದ್ದನು. ಆಗ ಯಾರೋ ಕುದುರೆಯ ಮೇಲೆ ಕುಳಿತವರು “ಈ ಊರಿನ ಪಟೇಲನು ಯಾರು?” ಎಂದು ವಿಚಾರಿಸಿಕೊಂಡು ಬಂದರು. ಗೌಡನು ತಾನೇ ಮುಂದೆ ಬಂದು “ನೀವು ಯಾರಪ್ಪಾ?” ಎಂದು ಕೇಳಿದನು. ಬಂದವರು “ಅಯ್ಯಾ! ನಾನೊಬ್ಬ ದಾರಿಗನು. ಹಾದಿ ತಪ್ಪಿ ಬಂದಿರುವೆನು. ಈ ರಾತ್ರಿ ತಂಗುವುದಕ್ಕೆ ನನಗೆ ಕೊಂಚ ತಾವನ್ನು ಕೊಡಬೇಕು” ಎಂದರು. ಗೌಡನು “ಅದಕ್ಕೇನಪ್ಪ! ಬಾ!” ಎಂದು ಮನೆಗೆ ಕರೆದುಕೊಂಡು ಹೋದನು.

ಮನೆಯೊಳಗೆ ದೀಪದ ಬೆಳಕಿಗೆ ಹೋಗುತ್ತಲೇ ಬಂದಿರುವವರು ಯಾರು ಎಂಬುದು ಗೌಡನಿಗೆ ತಿಳಿಯಿತು. ಅವನು ಕೂಡಲೆ ಕಾಲಿಗೆ ಬಿದ್ದು “ನನ್ನ ಮನೆ ದೇವರು ಬಂದಿತು; ನನ್ನ ಮನೆ ದೇವರು!” ಎಂದು ಉಬ್ಬಿಹೋದನು; ಅವರ ಕಾಲಿಗೆ ಬಿಸಿನೀರು ಎರೆದನು. ಹಾಲು ಹಣ್ಣು ತಂದೊಪ್ಪಿಸಿದನು. ಬೆಚ್ಚಗೆ ಇರುವೆಡೆಯಲ್ಲಿ ಹಾಸಿ, ಮಲಗಿಸಿದನು. ಮನೆಯ ಮಂದಿ ಮಕ್ಕಳೆಲ್ಲರೂ ಬಂದು ಉಪಚರಿಸಿದರು. ಗೌಡನು ಕುದುರೆಗೆ ಚನ್ನಾಗಿ ಮೈತಿಕ್ಕಿಸಿ, ಬೇಯಿಸಿದ ಹುರುಳಿಯನ್ನು ಇಟ್ಟು, ಹೊಸಹುಲ್ಲನ್ನು ಹಾಕಿ ಆದರಿಸಿದನು. ಬಂದಿದ್ದವರು ಮಹಾರಾಜರು.

ಬೆಳಗಾಗುವ ವೇಳೆಗೆ ದಂಡು ದಾಳಿಯವರೆಲ್ಲರೂ ದೊರೆಗಳನ್ನು ಹುಡುಕಿಕೊಂಡು ಬಂದು ಗೌಡನ ಮನೆಯ ಬಾಗಿಲಲ್ಲಿ ನಿಂತಿದ್ದರು. ದೊರೆಗಳು ಎದ್ದು ಈಚೆಗೆ ಬರುತ್ತಲೆ ಎಲ್ಲರೂ ಒಬ್ಬೊಬ್ಬರಾಗಿ ಬಂದು ಕಾಣಿಸಿಕೊಂಡು ಕೈ ಮುಗಿದರು.

ದೊರೆಗಳು ಗೌಡನನ್ನು ಹತ್ತಿರಕ್ಕೆ ಕರೆದು, “ಗೌಡ! ನೀನು ನಮಗೆ ಬಲು ಉಪಕಾರ ಮಾಡಿದೆ” ಎಂದು ಬಹಳವಾಗಿ ಹೊಗಳಿದರು. ಗೌಡನು “ಬಿಡು ನಮ್ಮಪ್ಪ! ನೀನು ನಮಗೆಲ್ಲ ಹೆತ್ತತಾಯಿಗಿಂತೆ ಹೆಚ್ಚು. ಸಮಯ ಬಂದರೆ ಪ್ರಾಣ ಕೂಡಾ ನಿನ್ನ ಪಾದಕ್ಕೆ ಒಬ್ಬಸಬೇಡವೇ? ಅಂಥಾದ್ದರಲ್ಲಿ ಇದೇನು ಹೆಚ್ಚು?” ಎಂದನು. ದೊರೆಗಳು ಅವನ ರಾಜಭಕ್ತಿಗೆ ಮೆಚ್ಚಿ ಆ ಹಳ್ಳಿಯನ್ನೇ ಅವನಿಗೆ ಮಾನ್ಯವಾಗಿ ಕೊಟ್ಟರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇದ್ದಲ್ಲೇ ಸ್ವರ್‍ಗ
Next post ತನ್ನ ನಡೆನುಡಿ ಪರಮಸತ್ಯ ಎಂದೇ ನಲ್ಲೆ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…