ಸೋಮೇಗೌಡ

ಕತ್ತಲಾಗಿತ್ತು. ದನಕರುಗಳನ್ನು ಆಟ್ಟಿಕೊಂಡು ಆರಂಬಗಾರರೆಲ್ಲರೂ ಹೊಲ ಗದ್ದೆಗಳಿಂದ ಆಗತಾನೇ ಹಿಂದಿರುಗಿ ಬರುತ್ತಿದ್ದರು. ಪಟೇಲ ಸೋಮೇಗೌಡನು ಮಳೆಬೆಳೆ ವಿಚಾರವಾಗಿ ಮಾತನಾಡುತ್ತ ಚಾವಡಿಯಲ್ಲಿ ಕುಳಿತಿದ್ದನು. ಆಗ ಯಾರೋ ಕುದುರೆಯ ಮೇಲೆ ಕುಳಿತವರು “ಈ ಊರಿನ ಪಟೇಲನು ಯಾರು?” ಎಂದು ವಿಚಾರಿಸಿಕೊಂಡು ಬಂದರು. ಗೌಡನು ತಾನೇ ಮುಂದೆ ಬಂದು “ನೀವು ಯಾರಪ್ಪಾ?” ಎಂದು ಕೇಳಿದನು. ಬಂದವರು “ಅಯ್ಯಾ! ನಾನೊಬ್ಬ ದಾರಿಗನು. ಹಾದಿ ತಪ್ಪಿ ಬಂದಿರುವೆನು. ಈ ರಾತ್ರಿ ತಂಗುವುದಕ್ಕೆ ನನಗೆ ಕೊಂಚ ತಾವನ್ನು ಕೊಡಬೇಕು” ಎಂದರು. ಗೌಡನು “ಅದಕ್ಕೇನಪ್ಪ! ಬಾ!” ಎಂದು ಮನೆಗೆ ಕರೆದುಕೊಂಡು ಹೋದನು.

ಮನೆಯೊಳಗೆ ದೀಪದ ಬೆಳಕಿಗೆ ಹೋಗುತ್ತಲೇ ಬಂದಿರುವವರು ಯಾರು ಎಂಬುದು ಗೌಡನಿಗೆ ತಿಳಿಯಿತು. ಅವನು ಕೂಡಲೆ ಕಾಲಿಗೆ ಬಿದ್ದು “ನನ್ನ ಮನೆ ದೇವರು ಬಂದಿತು; ನನ್ನ ಮನೆ ದೇವರು!” ಎಂದು ಉಬ್ಬಿಹೋದನು; ಅವರ ಕಾಲಿಗೆ ಬಿಸಿನೀರು ಎರೆದನು. ಹಾಲು ಹಣ್ಣು ತಂದೊಪ್ಪಿಸಿದನು. ಬೆಚ್ಚಗೆ ಇರುವೆಡೆಯಲ್ಲಿ ಹಾಸಿ, ಮಲಗಿಸಿದನು. ಮನೆಯ ಮಂದಿ ಮಕ್ಕಳೆಲ್ಲರೂ ಬಂದು ಉಪಚರಿಸಿದರು. ಗೌಡನು ಕುದುರೆಗೆ ಚನ್ನಾಗಿ ಮೈತಿಕ್ಕಿಸಿ, ಬೇಯಿಸಿದ ಹುರುಳಿಯನ್ನು ಇಟ್ಟು, ಹೊಸಹುಲ್ಲನ್ನು ಹಾಕಿ ಆದರಿಸಿದನು. ಬಂದಿದ್ದವರು ಮಹಾರಾಜರು.

ಬೆಳಗಾಗುವ ವೇಳೆಗೆ ದಂಡು ದಾಳಿಯವರೆಲ್ಲರೂ ದೊರೆಗಳನ್ನು ಹುಡುಕಿಕೊಂಡು ಬಂದು ಗೌಡನ ಮನೆಯ ಬಾಗಿಲಲ್ಲಿ ನಿಂತಿದ್ದರು. ದೊರೆಗಳು ಎದ್ದು ಈಚೆಗೆ ಬರುತ್ತಲೆ ಎಲ್ಲರೂ ಒಬ್ಬೊಬ್ಬರಾಗಿ ಬಂದು ಕಾಣಿಸಿಕೊಂಡು ಕೈ ಮುಗಿದರು.

ದೊರೆಗಳು ಗೌಡನನ್ನು ಹತ್ತಿರಕ್ಕೆ ಕರೆದು, “ಗೌಡ! ನೀನು ನಮಗೆ ಬಲು ಉಪಕಾರ ಮಾಡಿದೆ” ಎಂದು ಬಹಳವಾಗಿ ಹೊಗಳಿದರು. ಗೌಡನು “ಬಿಡು ನಮ್ಮಪ್ಪ! ನೀನು ನಮಗೆಲ್ಲ ಹೆತ್ತತಾಯಿಗಿಂತೆ ಹೆಚ್ಚು. ಸಮಯ ಬಂದರೆ ಪ್ರಾಣ ಕೂಡಾ ನಿನ್ನ ಪಾದಕ್ಕೆ ಒಬ್ಬಸಬೇಡವೇ? ಅಂಥಾದ್ದರಲ್ಲಿ ಇದೇನು ಹೆಚ್ಚು?” ಎಂದನು. ದೊರೆಗಳು ಅವನ ರಾಜಭಕ್ತಿಗೆ ಮೆಚ್ಚಿ ಆ ಹಳ್ಳಿಯನ್ನೇ ಅವನಿಗೆ ಮಾನ್ಯವಾಗಿ ಕೊಟ್ಟರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇದ್ದಲ್ಲೇ ಸ್ವರ್‍ಗ
Next post ತನ್ನ ನಡೆನುಡಿ ಪರಮಸತ್ಯ ಎಂದೇ ನಲ್ಲೆ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

cheap jordans|wholesale air max|wholesale jordans|wholesale jewelry|wholesale jerseys