ಇದ್ದಲ್ಲೇ ಸ್ವರ್‍ಗ

ವಸಂತ ಋತು
ಮನದೇಚ್ಛೆ ಅನುಭವಿಸಲು
ಕಾಡಿಗೆ ಹೋಗಿ ಕುಳಿತುಕೊಳ್ಳಬಯಸಿದೆ
ನಾಡು ಹೇಳಿತು
ಕಾಡಿನ ಮೃಗಗಳು ಭಯಂಕರ

ನಾಡಿನಲ್ಲೇ ಕುಳಿತೆ ಇದ್ದಷ್ಟು ಕಣ್ಣುಂಬಿಕೊಳ್ಳಲು
ಕಾಡುಪ್ರಾಣಿಗಳು ನಕ್ಕವು
ನಮಗಿಂತಲೂ ಭಯಾನಕ
ರಾಜಕೀಯದವುಗಳು, ಜಾತಿ ಮತದವುಗಳು.

ಕಾಡುನಾಡು ತೊರೆದು
ಸಮುದ್ರತೀರದ ಮರಳಿನ
ಮೇಲುರುಳಿದರೆ ಸುನಾಮಿ
ಚಂಡಮಾರುತಗಳಬ್ಬರಗಳು
ಬಡಿದೋಡಿಸಿದವು

ಆಕಾಶದೆಡೆಗೆ ನೋಡಿ ಕೈಮುಗಿದೆ-
ಮೋಡದೊಳಗಿನ ಸೂರ್‍ಯ ಚಂದ್ರರು
ಬಿಸಿಲು ಬೆಳದಿಂಗಳ ಕೋಲೂರುತ
ನೋಡಿರಿಲ್ಲಿಯೂ ನಿಮ್ಮದೇ ವಿಷಮಂಡಲ
ಮೇಲೇರಿ ನರಕಸದೃಶ ವಾತಾವರಣ

‘ಇದ್ದಲ್ಲಿಯೇ ಸ್ವರ್‍ಗ’ ಹೇಳಿ
ನಕ್ಕವು ನಕ್ಷತ್ರಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಹಸ್ಯ
Next post ಸೋಮೇಗೌಡ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys