Home / ಕವನ / ಕವಿತೆ / ಹರಿಶ್ಚಂದ್ರ ರಾಜ್ಯವಿಯೋಗ

ಹರಿಶ್ಚಂದ್ರ ರಾಜ್ಯವಿಯೋಗ

(ಮತ್ತೇಭ ವಿಕ್ರೀಡಿತ)

ಅಡಿಯಂ ಮೆಲ್ಲನಿಡುತ್ತೆ, ಕಂದು ಮೊಗಮಂ ಕೀಳೋದು, ಕಣ್ಣೀರ್ಗಳಿಂ|
ಮಿಡಿದುಂ, ತಾಮೊಡವರ್ಪೆವೆಂದು ನೃಪನಂ ಬೆಂಬತ್ತಿ ಬಂದಿರ್ಪರಂ|
ಜಡಿದುಂ ಜಾಡಿಸಿ, ಪಿಂದಕಟ್ಟಿ ಪುರಕಂ, ಗಾಧೇಯನುಂ ಮೂವರಂ|
ಕಡುಗಲ್ತೀವಿದರಣ್ಯಮಂ ಪುಗಿಸಿದಂ – ಕೈಗೂಡಿಸಲ್ ಪಂತವಂ ||೧||

ಮನುವಿಂದಿನ್ನೆವರಂ ಮಹಾವಿಭವದಿಂ ಸಾಮ್ರಾಜ್ಯಮಂಗೈದ ಪ|
ತ್ತನಮಂ ನಿಟ್ಟಿಸುತೊರ್ಮೆ ನಿಂದರಿನಿಸುಂ; ಮೇಣೊರ್ಮೆಯೋಕೋರ್ವರುಂ|
ನನೆಗೂಸಂ ನೆರೆ ನೋಡಿ ನೋಡಿ, ನುಡಿದರ್ ನೇತ್ರಂಗಳಿಂ ಮತ್ತೆ ಮಾ
ನಿನಿ ತನ್ನಂಬಕದಿಂದೆ ಬಿಳ್ದ ಪನಿಮುತ್ತಂ ಮಾಜಿದಳ್ ಸೀರೆಯಿಂ ||೨||

“ಎಲೆ! ಪ್ರಾಣೇಶ್ವರಿ! ತಕ್ಕುದಲ್ತು ದುಗುಡಂ ಪ್ರಸ್ತಾನದಾರಂಭದೊಳ್|
ಪಲವುಂ ದಂದುಗಮಂತು ರೋಗರುಜೆಯುಂ, ಸಂಕಷ್ಟ ಕಷ್ಟಂಗಳುಂ|
ಸತಿ ಎಮ್ಮುದರಣಾರ್ಥಮಾಗಿ, ಪ್ರಭು ತಾಂ ಕೈಗಾಯ್ದ ಸೌಭಾಗ್ಯಮಂ|
ದೊಲಿದುಂ ತಾಳ್ವುದು – ಭಕ್ತರಕ್ಷಣದೊಳುಂ ‘ದೈವೀ ವಿಚಿತ್ರಾಗತೀ!’” ||೩||

ಎನಸುಂ ಸಂತವಿಡುತ್ತೆ ಚಂದ್ರಮತಿಯಂ, ಮುದ್ದಾಡುತಂ ಬಾಲನಂ,|
ಜನಪಂ ಕೊಂಡು ತಳರ್ದನೆಲ್ಲ ನೆಲಮುಂ ಕಣ್ಮುಂದೆ ಪರ್ಬಿತ್ತು ದೇ|
ವನ ಹಸ್ತಾಬ್ಜದ ಛಾಯೆಯಿರ್ಪುದೆನುತಂ, ನಲ್ಲಳ್ಗೆ ಕೈಗೊಟ್ಟು, ಮೆ|
ಲ್ಲನೆ ಪೋದಂ, ತಡಗಾಲ ಪಜ್ಜೆ ತೊಡರಲ್, ಶಂಕವಂ ರಾಜ್ಯದಿಂ| ||೪||
*****
(ಸುವಾಸಿನಿ ಏಪ್ರಿಲ್ ೧೯೦೩, ಪುಸ್ತಕ ೨, ಅಂಕ ೧೦, ಪುಟ ೨೧೭)

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...