ಹರಿಶ್ಚಂದ್ರ ರಾಜ್ಯವಿಯೋಗ

(ಮತ್ತೇಭ ವಿಕ್ರೀಡಿತ)

ಅಡಿಯಂ ಮೆಲ್ಲನಿಡುತ್ತೆ, ಕಂದು ಮೊಗಮಂ ಕೀಳೋದು, ಕಣ್ಣೀರ್ಗಳಿಂ|
ಮಿಡಿದುಂ, ತಾಮೊಡವರ್ಪೆವೆಂದು ನೃಪನಂ ಬೆಂಬತ್ತಿ ಬಂದಿರ್ಪರಂ|
ಜಡಿದುಂ ಜಾಡಿಸಿ, ಪಿಂದಕಟ್ಟಿ ಪುರಕಂ, ಗಾಧೇಯನುಂ ಮೂವರಂ|
ಕಡುಗಲ್ತೀವಿದರಣ್ಯಮಂ ಪುಗಿಸಿದಂ – ಕೈಗೂಡಿಸಲ್ ಪಂತವಂ ||೧||

ಮನುವಿಂದಿನ್ನೆವರಂ ಮಹಾವಿಭವದಿಂ ಸಾಮ್ರಾಜ್ಯಮಂಗೈದ ಪ|
ತ್ತನಮಂ ನಿಟ್ಟಿಸುತೊರ್ಮೆ ನಿಂದರಿನಿಸುಂ; ಮೇಣೊರ್ಮೆಯೋಕೋರ್ವರುಂ|
ನನೆಗೂಸಂ ನೆರೆ ನೋಡಿ ನೋಡಿ, ನುಡಿದರ್ ನೇತ್ರಂಗಳಿಂ ಮತ್ತೆ ಮಾ
ನಿನಿ ತನ್ನಂಬಕದಿಂದೆ ಬಿಳ್ದ ಪನಿಮುತ್ತಂ ಮಾಜಿದಳ್ ಸೀರೆಯಿಂ ||೨||

“ಎಲೆ! ಪ್ರಾಣೇಶ್ವರಿ! ತಕ್ಕುದಲ್ತು ದುಗುಡಂ ಪ್ರಸ್ತಾನದಾರಂಭದೊಳ್|
ಪಲವುಂ ದಂದುಗಮಂತು ರೋಗರುಜೆಯುಂ, ಸಂಕಷ್ಟ ಕಷ್ಟಂಗಳುಂ|
ಸತಿ ಎಮ್ಮುದರಣಾರ್ಥಮಾಗಿ, ಪ್ರಭು ತಾಂ ಕೈಗಾಯ್ದ ಸೌಭಾಗ್ಯಮಂ|
ದೊಲಿದುಂ ತಾಳ್ವುದು – ಭಕ್ತರಕ್ಷಣದೊಳುಂ ‘ದೈವೀ ವಿಚಿತ್ರಾಗತೀ!’” ||೩||

ಎನಸುಂ ಸಂತವಿಡುತ್ತೆ ಚಂದ್ರಮತಿಯಂ, ಮುದ್ದಾಡುತಂ ಬಾಲನಂ,|
ಜನಪಂ ಕೊಂಡು ತಳರ್ದನೆಲ್ಲ ನೆಲಮುಂ ಕಣ್ಮುಂದೆ ಪರ್ಬಿತ್ತು ದೇ|
ವನ ಹಸ್ತಾಬ್ಜದ ಛಾಯೆಯಿರ್ಪುದೆನುತಂ, ನಲ್ಲಳ್ಗೆ ಕೈಗೊಟ್ಟು, ಮೆ|
ಲ್ಲನೆ ಪೋದಂ, ತಡಗಾಲ ಪಜ್ಜೆ ತೊಡರಲ್, ಶಂಕವಂ ರಾಜ್ಯದಿಂ| ||೪||
*****
(ಸುವಾಸಿನಿ ಏಪ್ರಿಲ್ ೧೯೦೩, ಪುಸ್ತಕ ೨, ಅಂಕ ೧೦, ಪುಟ ೨೧೭)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಧುನಿಕ ಕೃಷಿಯನಂತೆ ವೈಜ್ಞಾನಿಕವೆಂದೊಡೆಂತು?
Next post Aeschylus ನ ತ್ರಿವಳಿ ನಾಟಕ ಮಾಲೆ Oresteia

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…