ಜೇನು ಹುಳು

ಹಸನು ಗೂಡನು, ಮಯಣಬೀಡನು
ಎಸೆವ ಹುಳುಗಳ ನೋಡೆಲೊ.
ಬಿಸಿಲು ಕಾಲದೆ, ಗೇದು ಸೋಲದೆ,
ಒಸೆಯುತಿವೆ ಎಚ್ಚರದಲಿ.

ಹುಳಕೆ ದೇವನು ಬುದ್ಧಿ ಈವನು
ಕೆಲಸ ಹುಳು ಸರಿಗೈವುದು;
ಚೆಲುವ ಗೂಡನು ನರನು ಮಾಡನು
ಹುಳುವು ಕಟ್ಟಿದ ಹಾಗೆಯೇ.

ಒಳಗೆ ಸುಳಿವುದು, ಹೊರಗೆ ನಲಿವುದು
ಹುಳುವು ಪರಿವಿಡಿಯಿಂದಲಿ;
ನೆಲೆಯ ಕಾಂಬುದು, ಜೇನ ತಿಂಬುದು,
ಕೆಲಸ ತಿಳಿವುದು ತನ್ನಯಾ.

ಅತ್ತಮೊರೆವುದು, ಇತ್ತಬರುವುದು,
ಮತ್ತೆ ಹಾರ್‍ವುದು ಹೂವಿಗೆ;
ಸುತ್ತ ಅಲೆಯದೆ, ಹೊತ್ತು ಕಳೆಯದೆ,
ಎತ್ತಿ ಒಯ್ವುದು ಹನಿಯನು.

ಅಂದು ಚೈತ್ರವು ಬರೆ ವಿಚಿತ್ರವು;
ಒಂದೆ ಹನಿ ಹನಿಯಾದರೂ
ಹಿಂದು ನೋಡದೆ, ಹುಳುಗಳಾಡದೆ
ತಂದು ಮಧು ಕೂಡಿಸುವವು.

ಒಡನೆ ಕೆಲಸದೆ ನಾನು ಅಲಸದೆ
ನೆಡುವೆ ನನ್ನೀ ಮನವನು,
ಹುಡುಕಿ ಎಲ್ಲವ, ಸವಿಯ ಬೆಲ್ಲವ
ಪಡೆವೆ ತುಂಬಿಯ ಹಾಗೆಯೇ.
*****
(ಕವಿಶಿಷ್ಯ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೇಷ ಭಾಷೆಯೊಳಷ್ಟೇ ಅಕ್ಷರದಚ್ಚೊತ್ತಿದರೆ ಸಾಕೇ?
Next post Stendhalನ “The Scarlet and the Black” ಸ್ವಾರ್ಥಜೀವನದ ಚಿತ್ರಣ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…