Home / ಕವನ / ಕವಿತೆ / ಇಳೆ-ಮಳೆ

ಇಳೆ-ಮಳೆ

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ
ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ.
-ಜಾನಪದ ಗೀತೆ


ಇವಳೊಂದು ಪ್ರತಿಮೆ ಇವನೊಂದು ಪ್ರತಿಮೆ
ಇವಳಿಗಾಗಿ ಇವನೋ ಇವನಿಗಾಗಿ ಇವಳೋ
ಋತು ಋತುವಿಗೂ ಬೇರೆ ಬೇರೆ ರೂಪ ಇವನದೇ ಬೆಳೆ
ಇವನಿಗಾಗಿ ಕಾದು ಕಾದು ಕಾಯುತ್ತಿರುವ ಇವಳೇ ಇಳೆ.
ಇಳಾ ಎಂದರು ಧರಿತ್ರೀ ಎಂದರು.
ಸುಳ್ಳು ಸುಳ್ಳೇ ಕ್ಷಮಯಾ
ಧರಿತ್ರಿ ಎಂದೂ ಅಂದುಕೊಂಡಿದ್ದರು. ಇವನ ಹೆಸರು
ಗಳೋ ಅಪರಿಮಿತ ಸ್ವಾತಿ, ಉತ್ತರಾ,
ಧನಿಷ್ಠಾ, ಮುಂಗಾರೇ ಇವನ ಮೊದಲ ರೂಪ, ಉಳಿದುದೆಲ್ಲಾ ಇವನದೇ ಬೇರೆ
ಬೇರೆ ಕೋಪ ತಾಪ.
ಇವನಾರ್‍ಭಟಕೆ ನಡುಗಿದರೂ
ಸಡಗರಗೊಂಡು ಮೆರೆಯುವ
ಇವಳು ತಪಿಸಿದ್ದಳು ತಾಪಿಸಿದ್ದಳು. ತನ್ನ ಸುತ್ತಮುತ್ತ
ಬಿರುಕು ಬಿಟ್ಟಿದ್ದಳು. ಮಕ್ಕಳ ತಲೆಗೂದಲ ಎಲೆ ಎಲೆ
ಉದುರಿಸಿದ್ದಳು. ಬಿಳಿ ಸೀರೆ ಉಡಿಸಿದ್ದಳು.
ಬೋಳು ಬೋಳಾಗಿಸಿದ್ದಳು
ಅಳಿಸಿದ್ದಳು. ಕಾಡಿಸಿದ್ದಳು ಹಾಗೇ ಕಾಯಿಸಿದ್ದಳು.


ಕಾದಿದ್ದ ಇವಳನು ಕಂಡ ಅವನು ಬಂದೇ ಬಂದ.
ಇಂಚಿಂಚು ನೆಲದಲ್ಲಿ ತನ್ನ ಬೇರಿಳಿಸಿ ರಸ್ತೆ ರಸ್ತೆ ಹರಿದು
ಹೊಂಡವಾಗಿಸಿ ಸುಮ್ಮನೇ ಸುರಿದು
ಸುರಿದ, ಅಂತರ್‍ಜಲವಾಗಿ
ನೀರಾಗಿ ಕೊಚ್ಚೆಯಾಗಿ ರಾಡಿಯಾಗಿ ಅಲಿಕಲ್ಲಾಗಿ ಹಿಮ
ಪಾತವಾಗಿ ಮೆರೆದ ತನ್ನ ಎರಡೂ ಮುಖ ತೋರಿದ.


ಕಾದಿದ್ದ ಕೆಂಡವಾಗಿದ್ದ ಜ್ವರವೇರಿದ್ದ
ಅವಳನು ತಣಿಸಲೋ
ದಣಿಸಲೋ ದಂಡಿಸಲೋ ಎಂಬಂತೆ ಒಂದೇ
ಸಮನೇ ಸುರಿದ.
ಒನಕೆ ಮಳೆ ಜಡಿತ, ಆ ಕ್ಷಣಕೆ ಸಂತೃಪ್ತಿ.
ತೇಗಿ ತೇವವಾದ
ಅವಳು ಕಣ್ಣೆವೆ ತೆರೆಯುವಷ್ಟರಲ್ಲಿ
ಮತ್ತೆ ಒಣಗಿ ಬಾಯಾ
ರಿದಳು ಇವಳ ಹಣೆಬರಹ ಇವಳದು ಇದೇ ಗೋಳು.


ತಣಿಸಿದರೆ ಸಾಯುವ ಮತ್ತೆ ಹುಟ್ಟುವ
ಇವಳ ಈ ದಾಹ ಇಂಗದ ಬಾಯ ತುಂಬಲು
ಋತು ಋತುವಿಗೂ ಬರುವ ಮಳೆರಾಯ
ಬಾರೋ ಬಾರೋ ನೀರಿಲ್ಲ ನೀರಿಲ್ಲ
ಕಾದಿದ ಧರೆಯಲ್ಲಾ
*****
-ಪ್ರಜಾವಾಣಿ ದೀಪಾವಳಿ ವಿಶೇಷಾಂಕ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...