Home / ಕವನ / ಕವಿತೆ / ಇಳೆ-ಮಳೆ

ಇಳೆ-ಮಳೆ

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ
ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ.
-ಜಾನಪದ ಗೀತೆ


ಇವಳೊಂದು ಪ್ರತಿಮೆ ಇವನೊಂದು ಪ್ರತಿಮೆ
ಇವಳಿಗಾಗಿ ಇವನೋ ಇವನಿಗಾಗಿ ಇವಳೋ
ಋತು ಋತುವಿಗೂ ಬೇರೆ ಬೇರೆ ರೂಪ ಇವನದೇ ಬೆಳೆ
ಇವನಿಗಾಗಿ ಕಾದು ಕಾದು ಕಾಯುತ್ತಿರುವ ಇವಳೇ ಇಳೆ.
ಇಳಾ ಎಂದರು ಧರಿತ್ರೀ ಎಂದರು.
ಸುಳ್ಳು ಸುಳ್ಳೇ ಕ್ಷಮಯಾ
ಧರಿತ್ರಿ ಎಂದೂ ಅಂದುಕೊಂಡಿದ್ದರು. ಇವನ ಹೆಸರು
ಗಳೋ ಅಪರಿಮಿತ ಸ್ವಾತಿ, ಉತ್ತರಾ,
ಧನಿಷ್ಠಾ, ಮುಂಗಾರೇ ಇವನ ಮೊದಲ ರೂಪ, ಉಳಿದುದೆಲ್ಲಾ ಇವನದೇ ಬೇರೆ
ಬೇರೆ ಕೋಪ ತಾಪ.
ಇವನಾರ್‍ಭಟಕೆ ನಡುಗಿದರೂ
ಸಡಗರಗೊಂಡು ಮೆರೆಯುವ
ಇವಳು ತಪಿಸಿದ್ದಳು ತಾಪಿಸಿದ್ದಳು. ತನ್ನ ಸುತ್ತಮುತ್ತ
ಬಿರುಕು ಬಿಟ್ಟಿದ್ದಳು. ಮಕ್ಕಳ ತಲೆಗೂದಲ ಎಲೆ ಎಲೆ
ಉದುರಿಸಿದ್ದಳು. ಬಿಳಿ ಸೀರೆ ಉಡಿಸಿದ್ದಳು.
ಬೋಳು ಬೋಳಾಗಿಸಿದ್ದಳು
ಅಳಿಸಿದ್ದಳು. ಕಾಡಿಸಿದ್ದಳು ಹಾಗೇ ಕಾಯಿಸಿದ್ದಳು.


ಕಾದಿದ್ದ ಇವಳನು ಕಂಡ ಅವನು ಬಂದೇ ಬಂದ.
ಇಂಚಿಂಚು ನೆಲದಲ್ಲಿ ತನ್ನ ಬೇರಿಳಿಸಿ ರಸ್ತೆ ರಸ್ತೆ ಹರಿದು
ಹೊಂಡವಾಗಿಸಿ ಸುಮ್ಮನೇ ಸುರಿದು
ಸುರಿದ, ಅಂತರ್‍ಜಲವಾಗಿ
ನೀರಾಗಿ ಕೊಚ್ಚೆಯಾಗಿ ರಾಡಿಯಾಗಿ ಅಲಿಕಲ್ಲಾಗಿ ಹಿಮ
ಪಾತವಾಗಿ ಮೆರೆದ ತನ್ನ ಎರಡೂ ಮುಖ ತೋರಿದ.


ಕಾದಿದ್ದ ಕೆಂಡವಾಗಿದ್ದ ಜ್ವರವೇರಿದ್ದ
ಅವಳನು ತಣಿಸಲೋ
ದಣಿಸಲೋ ದಂಡಿಸಲೋ ಎಂಬಂತೆ ಒಂದೇ
ಸಮನೇ ಸುರಿದ.
ಒನಕೆ ಮಳೆ ಜಡಿತ, ಆ ಕ್ಷಣಕೆ ಸಂತೃಪ್ತಿ.
ತೇಗಿ ತೇವವಾದ
ಅವಳು ಕಣ್ಣೆವೆ ತೆರೆಯುವಷ್ಟರಲ್ಲಿ
ಮತ್ತೆ ಒಣಗಿ ಬಾಯಾ
ರಿದಳು ಇವಳ ಹಣೆಬರಹ ಇವಳದು ಇದೇ ಗೋಳು.


ತಣಿಸಿದರೆ ಸಾಯುವ ಮತ್ತೆ ಹುಟ್ಟುವ
ಇವಳ ಈ ದಾಹ ಇಂಗದ ಬಾಯ ತುಂಬಲು
ಋತು ಋತುವಿಗೂ ಬರುವ ಮಳೆರಾಯ
ಬಾರೋ ಬಾರೋ ನೀರಿಲ್ಲ ನೀರಿಲ್ಲ
ಕಾದಿದ ಧರೆಯಲ್ಲಾ
*****
-ಪ್ರಜಾವಾಣಿ ದೀಪಾವಳಿ ವಿಶೇಷಾಂಕ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...