Home / ಕವನ / ಕವಿತೆ / ಇಳೆ-ಮಳೆ

ಇಳೆ-ಮಳೆ

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ
ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ.
-ಜಾನಪದ ಗೀತೆ


ಇವಳೊಂದು ಪ್ರತಿಮೆ ಇವನೊಂದು ಪ್ರತಿಮೆ
ಇವಳಿಗಾಗಿ ಇವನೋ ಇವನಿಗಾಗಿ ಇವಳೋ
ಋತು ಋತುವಿಗೂ ಬೇರೆ ಬೇರೆ ರೂಪ ಇವನದೇ ಬೆಳೆ
ಇವನಿಗಾಗಿ ಕಾದು ಕಾದು ಕಾಯುತ್ತಿರುವ ಇವಳೇ ಇಳೆ.
ಇಳಾ ಎಂದರು ಧರಿತ್ರೀ ಎಂದರು.
ಸುಳ್ಳು ಸುಳ್ಳೇ ಕ್ಷಮಯಾ
ಧರಿತ್ರಿ ಎಂದೂ ಅಂದುಕೊಂಡಿದ್ದರು. ಇವನ ಹೆಸರು
ಗಳೋ ಅಪರಿಮಿತ ಸ್ವಾತಿ, ಉತ್ತರಾ,
ಧನಿಷ್ಠಾ, ಮುಂಗಾರೇ ಇವನ ಮೊದಲ ರೂಪ, ಉಳಿದುದೆಲ್ಲಾ ಇವನದೇ ಬೇರೆ
ಬೇರೆ ಕೋಪ ತಾಪ.
ಇವನಾರ್‍ಭಟಕೆ ನಡುಗಿದರೂ
ಸಡಗರಗೊಂಡು ಮೆರೆಯುವ
ಇವಳು ತಪಿಸಿದ್ದಳು ತಾಪಿಸಿದ್ದಳು. ತನ್ನ ಸುತ್ತಮುತ್ತ
ಬಿರುಕು ಬಿಟ್ಟಿದ್ದಳು. ಮಕ್ಕಳ ತಲೆಗೂದಲ ಎಲೆ ಎಲೆ
ಉದುರಿಸಿದ್ದಳು. ಬಿಳಿ ಸೀರೆ ಉಡಿಸಿದ್ದಳು.
ಬೋಳು ಬೋಳಾಗಿಸಿದ್ದಳು
ಅಳಿಸಿದ್ದಳು. ಕಾಡಿಸಿದ್ದಳು ಹಾಗೇ ಕಾಯಿಸಿದ್ದಳು.


ಕಾದಿದ್ದ ಇವಳನು ಕಂಡ ಅವನು ಬಂದೇ ಬಂದ.
ಇಂಚಿಂಚು ನೆಲದಲ್ಲಿ ತನ್ನ ಬೇರಿಳಿಸಿ ರಸ್ತೆ ರಸ್ತೆ ಹರಿದು
ಹೊಂಡವಾಗಿಸಿ ಸುಮ್ಮನೇ ಸುರಿದು
ಸುರಿದ, ಅಂತರ್‍ಜಲವಾಗಿ
ನೀರಾಗಿ ಕೊಚ್ಚೆಯಾಗಿ ರಾಡಿಯಾಗಿ ಅಲಿಕಲ್ಲಾಗಿ ಹಿಮ
ಪಾತವಾಗಿ ಮೆರೆದ ತನ್ನ ಎರಡೂ ಮುಖ ತೋರಿದ.


ಕಾದಿದ್ದ ಕೆಂಡವಾಗಿದ್ದ ಜ್ವರವೇರಿದ್ದ
ಅವಳನು ತಣಿಸಲೋ
ದಣಿಸಲೋ ದಂಡಿಸಲೋ ಎಂಬಂತೆ ಒಂದೇ
ಸಮನೇ ಸುರಿದ.
ಒನಕೆ ಮಳೆ ಜಡಿತ, ಆ ಕ್ಷಣಕೆ ಸಂತೃಪ್ತಿ.
ತೇಗಿ ತೇವವಾದ
ಅವಳು ಕಣ್ಣೆವೆ ತೆರೆಯುವಷ್ಟರಲ್ಲಿ
ಮತ್ತೆ ಒಣಗಿ ಬಾಯಾ
ರಿದಳು ಇವಳ ಹಣೆಬರಹ ಇವಳದು ಇದೇ ಗೋಳು.


ತಣಿಸಿದರೆ ಸಾಯುವ ಮತ್ತೆ ಹುಟ್ಟುವ
ಇವಳ ಈ ದಾಹ ಇಂಗದ ಬಾಯ ತುಂಬಲು
ಋತು ಋತುವಿಗೂ ಬರುವ ಮಳೆರಾಯ
ಬಾರೋ ಬಾರೋ ನೀರಿಲ್ಲ ನೀರಿಲ್ಲ
ಕಾದಿದ ಧರೆಯಲ್ಲಾ
*****
-ಪ್ರಜಾವಾಣಿ ದೀಪಾವಳಿ ವಿಶೇಷಾಂಕ

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...