ಇಳೆ-ಮಳೆ

ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ
ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ.
-ಜಾನಪದ ಗೀತೆ


ಇವಳೊಂದು ಪ್ರತಿಮೆ ಇವನೊಂದು ಪ್ರತಿಮೆ
ಇವಳಿಗಾಗಿ ಇವನೋ ಇವನಿಗಾಗಿ ಇವಳೋ
ಋತು ಋತುವಿಗೂ ಬೇರೆ ಬೇರೆ ರೂಪ ಇವನದೇ ಬೆಳೆ
ಇವನಿಗಾಗಿ ಕಾದು ಕಾದು ಕಾಯುತ್ತಿರುವ ಇವಳೇ ಇಳೆ.
ಇಳಾ ಎಂದರು ಧರಿತ್ರೀ ಎಂದರು.
ಸುಳ್ಳು ಸುಳ್ಳೇ ಕ್ಷಮಯಾ
ಧರಿತ್ರಿ ಎಂದೂ ಅಂದುಕೊಂಡಿದ್ದರು. ಇವನ ಹೆಸರು
ಗಳೋ ಅಪರಿಮಿತ ಸ್ವಾತಿ, ಉತ್ತರಾ,
ಧನಿಷ್ಠಾ, ಮುಂಗಾರೇ ಇವನ ಮೊದಲ ರೂಪ, ಉಳಿದುದೆಲ್ಲಾ ಇವನದೇ ಬೇರೆ
ಬೇರೆ ಕೋಪ ತಾಪ.
ಇವನಾರ್‍ಭಟಕೆ ನಡುಗಿದರೂ
ಸಡಗರಗೊಂಡು ಮೆರೆಯುವ
ಇವಳು ತಪಿಸಿದ್ದಳು ತಾಪಿಸಿದ್ದಳು. ತನ್ನ ಸುತ್ತಮುತ್ತ
ಬಿರುಕು ಬಿಟ್ಟಿದ್ದಳು. ಮಕ್ಕಳ ತಲೆಗೂದಲ ಎಲೆ ಎಲೆ
ಉದುರಿಸಿದ್ದಳು. ಬಿಳಿ ಸೀರೆ ಉಡಿಸಿದ್ದಳು.
ಬೋಳು ಬೋಳಾಗಿಸಿದ್ದಳು
ಅಳಿಸಿದ್ದಳು. ಕಾಡಿಸಿದ್ದಳು ಹಾಗೇ ಕಾಯಿಸಿದ್ದಳು.


ಕಾದಿದ್ದ ಇವಳನು ಕಂಡ ಅವನು ಬಂದೇ ಬಂದ.
ಇಂಚಿಂಚು ನೆಲದಲ್ಲಿ ತನ್ನ ಬೇರಿಳಿಸಿ ರಸ್ತೆ ರಸ್ತೆ ಹರಿದು
ಹೊಂಡವಾಗಿಸಿ ಸುಮ್ಮನೇ ಸುರಿದು
ಸುರಿದ, ಅಂತರ್‍ಜಲವಾಗಿ
ನೀರಾಗಿ ಕೊಚ್ಚೆಯಾಗಿ ರಾಡಿಯಾಗಿ ಅಲಿಕಲ್ಲಾಗಿ ಹಿಮ
ಪಾತವಾಗಿ ಮೆರೆದ ತನ್ನ ಎರಡೂ ಮುಖ ತೋರಿದ.


ಕಾದಿದ್ದ ಕೆಂಡವಾಗಿದ್ದ ಜ್ವರವೇರಿದ್ದ
ಅವಳನು ತಣಿಸಲೋ
ದಣಿಸಲೋ ದಂಡಿಸಲೋ ಎಂಬಂತೆ ಒಂದೇ
ಸಮನೇ ಸುರಿದ.
ಒನಕೆ ಮಳೆ ಜಡಿತ, ಆ ಕ್ಷಣಕೆ ಸಂತೃಪ್ತಿ.
ತೇಗಿ ತೇವವಾದ
ಅವಳು ಕಣ್ಣೆವೆ ತೆರೆಯುವಷ್ಟರಲ್ಲಿ
ಮತ್ತೆ ಒಣಗಿ ಬಾಯಾ
ರಿದಳು ಇವಳ ಹಣೆಬರಹ ಇವಳದು ಇದೇ ಗೋಳು.


ತಣಿಸಿದರೆ ಸಾಯುವ ಮತ್ತೆ ಹುಟ್ಟುವ
ಇವಳ ಈ ದಾಹ ಇಂಗದ ಬಾಯ ತುಂಬಲು
ಋತು ಋತುವಿಗೂ ಬರುವ ಮಳೆರಾಯ
ಬಾರೋ ಬಾರೋ ನೀರಿಲ್ಲ ನೀರಿಲ್ಲ
ಕಾದಿದ ಧರೆಯಲ್ಲಾ
*****
-ಪ್ರಜಾವಾಣಿ ದೀಪಾವಳಿ ವಿಶೇಷಾಂಕ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಾಂಛನ
Next post ಬೇಡ ಅಮ್ಮ ಬೇಡ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…