ಕೆಂಪಿರುವೆಗಳು

ಬೆಳಿಗ್ಗೆ ಬೆಳಿಗ್ಗೆ ಪೇಪರ್ ಓದುವುದೆಂದರೆ
ಟಿ. ವಿ. ನೋಡುವುದೆಂದರೆ
ಮೈಮೇಲೆ ಕೆಂಪಿರುವೆಗಳನ್ನು ಬಿಟ್ಟುಕೊಂಡಂತೆ
ಪೇಪರ್ ಪುಟಗಳು ತೆಗೆದರೆ
ಟಿ.ವಿ. ಚಾನೆಲ್‌ಗಳು ಒತ್ತಿದರೆ ಸಾಕು-
ಘನಂದಾರಿ ಕೆಲಸ ಮಾಡುತ್ತೇನೆನ್ನುವವರ
ಆರೋಪ ಪ್ರತ್ಯಾರೋಪ ಕೂಗಾಟ.
ಕಸ, ನೆಲ, ನೀರಿಗೆ ತಿಪ್ಪೆಸಾರಿಸುವಾಟ

ಜಾತಿಮತಗಳೊಳಗೆ ಬೆಂಕಿ ಬಂದೂಕಗಳ ಸದ್ದು
ಹೊಸಕಿಹಾಕಿದ ಹೆಣ್ಣುಗಳ ಒಡಲಾಳದ ಉರಿ
ಮೋಸದಮಾತು ಮಂತ್ರದೊಳಗೆ ತಂತ್ರ
ನೇಣು-ರಸ್ತೆ ತುಂಬ ರಕ್ತ
ಹಣವಂತನ ಮೋಸದ ಹೂಡಿಕೆಯಾಟ
ಕೊನೆಗೊಂದಷ್ಟು ಆಟಕ್ಕುಂಟು ಲೆಕ್ಕಕ್ಕಿಲ್ಲ.

ಹೀಗೆ ಬೆಳಗಿನ ಎಳೆಬಿಸಿಲು ಬಿರುಸಾಗಿ
ತಣ್ಣನೆಯ ಗಾಳಿ ಗಬ್ಬೆದ್ದು
ತಲೆ ತುರಿಕಿಗೆ ಹುಣ್ಣುಗಳು ಹುಟ್ಟುತೊಡಗಿ
ನೆಮ್ಮದಿಯೇ ದಿಕ್ಕಾಪಾಲು ಮಾಡುವ
ಪತ್ರಿಕೆಗಳು ಬೆಳಿಗ್ಗೆ ಬೆಳಿಗ್ಗೆ ಓದಲೇಬಾರದು.
ಟಿ.ವಿ. ಯಂತೂ ನೋಡಲೇಬಾರದು.
ಆದರೂ ಕಣ್ಣಾಡಿಸಲೇ ಬೇಕೆಂದಾದರೆ
ಓದಿ ನೋಡಿ-
ಕೆಂಪಿರುವೆಗಳ ಕಚ್ಚಾಟಕೆ ವಿಷಬೊಬ್ಬೆಗಳೆದ್ದು
ಕೋಮಾದೆಡೆಗೆ ಇಳಿಯತೊಡಗಿದರೆ
ತಕ್ಷಣ ಸ್ನಾನದ ಮನೆಗೆ ನಡೆದು ಬಿಡಿ;
ಇಲ್ಲವೆ ರಾತ್ರಿ ಕೊನೆಯ ಘಳಿಗೆಗೆ ಓದಿ
ಸುಮ್ಮನೆ ಚದ್ದರ ಹೊದ್ದು ಮಲಗಿದರಾಯ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಧನ
Next post ರಂಗಣ್ಣನ ಕನಸಿನ ದಿನಗಳು – ೨೬

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…