ಕೆಂಪಿರುವೆಗಳು

ಬೆಳಿಗ್ಗೆ ಬೆಳಿಗ್ಗೆ ಪೇಪರ್ ಓದುವುದೆಂದರೆ
ಟಿ. ವಿ. ನೋಡುವುದೆಂದರೆ
ಮೈಮೇಲೆ ಕೆಂಪಿರುವೆಗಳನ್ನು ಬಿಟ್ಟುಕೊಂಡಂತೆ
ಪೇಪರ್ ಪುಟಗಳು ತೆಗೆದರೆ
ಟಿ.ವಿ. ಚಾನೆಲ್‌ಗಳು ಒತ್ತಿದರೆ ಸಾಕು-
ಘನಂದಾರಿ ಕೆಲಸ ಮಾಡುತ್ತೇನೆನ್ನುವವರ
ಆರೋಪ ಪ್ರತ್ಯಾರೋಪ ಕೂಗಾಟ.
ಕಸ, ನೆಲ, ನೀರಿಗೆ ತಿಪ್ಪೆಸಾರಿಸುವಾಟ

ಜಾತಿಮತಗಳೊಳಗೆ ಬೆಂಕಿ ಬಂದೂಕಗಳ ಸದ್ದು
ಹೊಸಕಿಹಾಕಿದ ಹೆಣ್ಣುಗಳ ಒಡಲಾಳದ ಉರಿ
ಮೋಸದಮಾತು ಮಂತ್ರದೊಳಗೆ ತಂತ್ರ
ನೇಣು-ರಸ್ತೆ ತುಂಬ ರಕ್ತ
ಹಣವಂತನ ಮೋಸದ ಹೂಡಿಕೆಯಾಟ
ಕೊನೆಗೊಂದಷ್ಟು ಆಟಕ್ಕುಂಟು ಲೆಕ್ಕಕ್ಕಿಲ್ಲ.

ಹೀಗೆ ಬೆಳಗಿನ ಎಳೆಬಿಸಿಲು ಬಿರುಸಾಗಿ
ತಣ್ಣನೆಯ ಗಾಳಿ ಗಬ್ಬೆದ್ದು
ತಲೆ ತುರಿಕಿಗೆ ಹುಣ್ಣುಗಳು ಹುಟ್ಟುತೊಡಗಿ
ನೆಮ್ಮದಿಯೇ ದಿಕ್ಕಾಪಾಲು ಮಾಡುವ
ಪತ್ರಿಕೆಗಳು ಬೆಳಿಗ್ಗೆ ಬೆಳಿಗ್ಗೆ ಓದಲೇಬಾರದು.
ಟಿ.ವಿ. ಯಂತೂ ನೋಡಲೇಬಾರದು.
ಆದರೂ ಕಣ್ಣಾಡಿಸಲೇ ಬೇಕೆಂದಾದರೆ
ಓದಿ ನೋಡಿ-
ಕೆಂಪಿರುವೆಗಳ ಕಚ್ಚಾಟಕೆ ವಿಷಬೊಬ್ಬೆಗಳೆದ್ದು
ಕೋಮಾದೆಡೆಗೆ ಇಳಿಯತೊಡಗಿದರೆ
ತಕ್ಷಣ ಸ್ನಾನದ ಮನೆಗೆ ನಡೆದು ಬಿಡಿ;
ಇಲ್ಲವೆ ರಾತ್ರಿ ಕೊನೆಯ ಘಳಿಗೆಗೆ ಓದಿ
ಸುಮ್ಮನೆ ಚದ್ದರ ಹೊದ್ದು ಮಲಗಿದರಾಯ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಧನ
Next post ರಂಗಣ್ಣನ ಕನಸಿನ ದಿನಗಳು – ೨೬

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys