ರುಚಿಯನ್ನು ಕೆರಳಿಸಲು ಕಟುಮಸಾಲೆಗಳಿಂದ

ರುಚಿಯನ್ನು ಕೆರಳಿಸಲು ಕಟುಮಸಾಲೆಗಳಿಂದ
ಬೊಡ್ಡು ನಾಲಿಗೆಯನ್ನು ಚುರುಕುಗೊಳಿಸುವ ಹಾಗೆ,
ಮೈಯ ರಕ್ಷಿಸಲು ಗೊತ್ತಿರದ ಬೇನೆಗಳಿಂದ
ಅತಿ ಎನಿಸುವಷ್ಟು ಔಷಧ ತಿನ್ನಿಸುವ ಹಾಗೆ,
ನಿನ್ನ ಗುಣ ಪ್ರೀತಿ ಮಾಧುರ್‍ಯ ಯಥೇಷ್ಟ ಸವಿದು
ಚುರುಕು ಸಂಬಾರಗಳ ಕೆಣಕನ್ನಪೇಕ್ಷಿಸಿದೆ;
ಸುಖವುಂಡು ಪಟ್ಟ ಸಂತೃಪ್ತಿಯಲಿ ಬಸವಳಿದು
ತದ್ವಿರುದ್ದ ಸ್ಥಿತಿಯ ಬಯಸಿದೆ ಅಗತ್ಯವಿರದೆ.
ಇಲ್ಲದ ಅನಿಷ್ಟಗಳ ಸುಳ್ಳೆ ಕಲ್ಪಿಸಿಕೊಂಡು
ಅಲ್ಲದ್ದ ಮಾಡಿದೆ, ಶುದ್ದ ಆರೋಗ್ಯವನೆ
ಒಡ್ಡಿದೆ ಚಿಕಿತ್ಸೆಗೆ, ಅಲ್ಲಸಲ್ಲದ್ದುಂಡು
ಗುಣಪಡಿಸ ಹೊರಟೆ ಪರಿಶುದ್ದವಾದದ್ದನ್ನೆ.
ಅನುಭವಿಸಿ ಕಡೆಗೆ ನಿಜವಾದ ಪಾಠವ ಕಲಿತೆ
ನಿನಗೆ ಬೇಸರಿಸಿ ಮದ್ದುಣಲು ವಿಷ ಎಂದಂತೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 118
Like as to make our appetites more keen

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಂಗಣ್ಣನ ಕನಸಿನ ದಿನಗಳು – ೧೯
Next post ಅಕ್ಕ

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

cheap jordans|wholesale air max|wholesale jordans|wholesale jewelry|wholesale jerseys