ಮೋಸ ಹೋಗದಿರು

ದೇವರ ತಾಣವೆಲ್ಲಿ! ಎಂದು ಅರಸುತ್ತ
ಪಯಣವಿದು ಸಾಗುತ್ತಿದೆ ದೇವರೆಡೆಗೆ
ಬದುಕು ಇದು ಭವಪಾಶದತ್ತ ಸಾಗುವಾಗ
ಆತ್ಮವಿದು ವಾಲುತ್ತಿದೆ ತನ್ನ ಒಡೆಯನಡೆಗೆ

ಸುಖ ಸುಖ ಸುಖವೆಂದು ಅನವರತವು
ಹೋರಾಡುತ್ತಿರುವೆ ಆಸೆಗಳೊಂದಿಗೆ ನೀನು
ಆಸೆಗಳೆ ನಿನ್ನ ಮೃತ್ಯ ಕೂಪಗಳಾಗಿ
ಯೋಜಿಸುತ್ತಿವೆ ನಿನ್ನ ಪ್ರಪಾತಕ್ಕೆಳೆಯಲು

ಬಂಧು ಮಿತ್ರರೆಲ್ಲರೂ ನಿನ್ನ ನಂಬಿದವರು
ಸ್ವಾರ್ಥದಿಂದ ಅವರು ನಿನ್ನವರಾಗಿಹರು
ನೀನು ಅವರನ್ನು ಕಾಪಾಡದಿರೆ ಆಯ್ತು
ನಿನ್ನನ್ನೆ ಆಚೆತಳ್ಳಲು ಸಾಲಾಗಿ ನಿಂತಿಹರು

ಸಾಧು ಸಂತರ ಸೇವೆಗೆ ಹಗಲಿರುಳು ಶ್ರಮಿಸು
ನಿನ್ನ ಪಥಚಾಲಕರೆ ಅವರು ಸತ್ಯ
ಇಲ್ಲಿರುವೆದೆಲ್ಲ ಬರೀ ಮಾಯೆ ಮೋಹ
ಬರೀ ಸೊನ್ನೆ ಬಿದ್ದು ಹೋಗಲು ದೇಹ

ಸಹಕರಿಸಲು ನಿಂತಿರುವೆ ಇಂದ್ರಿಯಗಳೊಂದಿಗೆ
ದುಡಿಸುಕೊಳ್ಳು ನಿನ್ನ ಪಾರಮಾರ್ಥಕ್ಕೆ
ನಾಳಿನ ಭಾಗ್ಯಕ್ಕೆ ಇವರೆಲ್ಲ ಕಾರಣರಾಗಲಿ
ನೀನು ಮಾಣಿಕ್ಯ ವಿಠಲನಾಗಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೧೦
Next post ಹಸಿರ ಬಾಂದಳದ ನಡುವೆ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys