ಅರ್ಥವಿಲ್ಲದ್ದು

ಆಚಾರ ಹೀನನ ಮಾತು ಅರ್ಥವಿಲ್ಲದು
ಅದನು ನಂಬಿ ಅವನನ್ನ ಅನುಸರಿಸದಿರು
ಆಯ್ದುಕೊ ನಿತ್ಯವೂ ಸ್ವಾರ್ಥವಿಲ್ಲದು
ನಿನ್ನ ಬದುಕು ದೊಂಬರಾಟ ಮಾಡದಿರು

ಒಂದೊಂದು ಕ್ಷಣದಲ್ಲೂ ವ್ಯಾಕುಲತೆ ಇರಲಿ
ಅದು ದೇವರಿಗಾಗಿ ಚಡಪಡಿಕೆ ಇರಲಿ
ಹಗಲಿರುಳು ಧ್ಯಾನಿಸು ಬರೀ ಧ್ಯಾನಿಸು
ಅಲ್ಲಿ ಕಾಣು ಬರೀ ಹರಿಯದೇ ಕನಸು

ಐಹಿಕ ಸುಖಗಳೆಲ್ಲ ಕ್ಷಣದ ತೃಪ್ತಿ
ಆತ್ಮ ಸಾಕ್ಷಾತ್ಕಾರ ನಿತ್ಯ ಸಂತೃಪ್ತಿ
ಒಮ್ಮೆ ಪರಮಾತ್ಮನ ದರ್ಶನವಾದರೂ
ಕೋಟಿ ಜನುಮಗಳ ಪಾಪದೂರ

ಆತ್ಮ ಹಾಕಿದ ಹೆಜ್ಜೆಗೆ ಹಿಂಬಾಲಿಸು
ಶುದ್ಧ ಮನಸ್ಸು ಆತ್ಮದ ಛಾಯೆ
ಸತಿ ಸುತ ಆಸೆಗಳ ಮನದಿಂದಮಾಸು
ಮಾಣಿಕ್ಯ ವಿಠಲನಿಗೆ ಭಾವಹಾಸು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೫೩
Next post ತಾಯ ಮಡಿಲು

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys