ಪ್ರಜಾರಾಜ್ಯ

ಪ್ರಜಾರಾಜ್ಯ ಬಂತು ಬಂತು, ಸಕಲಪ್ರಜಾರಾಜ್ಯ !
ಪ್ರಜೆಗಳಿಗೇ ಇಲ್ಲಗೊತ್ತು: ‘ಯಾರದು ಈ ರಾಜ್ಯ!’


ಆಯ್ಕೆಯ ದಿನ ಬಂದಾಕ್ಷಣ ಸವಿಯ ಭಕ್ಷ್ಯ-ಭೋಜ್ಯ
ಪ್ರಜರ ಬಾಯ್ಗೆ ಬೀಳ್ವುದು ನಿಜ, ಅದಕೆ ಪ್ರಜಾರಾಜ್ಯ !
ಆಯ್ಕೆ ಮುಗಿದ ಮರುದಿನವೇ ಪ್ರಜೆಗಳೆಲ್ಲ ತ್ಯಾಜ್ಯ !
ಪ್ರಜರ ಬಾಳೆ ಆಳುವವರ ತೆರೆದ ಬಾಯ್ಗೆ ಭಾಜ್ಯ !


ಲಂಚಮುಕ್ಕುವವರ ಉಕ್ಕು, ಪ್ರಜಾರಾಜ್ಯವೆ ?
ಕಳ್ಳಪೇಟೆಯವರ ಬೇಟೆ, ಪ್ರಜಾರಾಜ್ಯವೆ ?
ಮಾತೆ ಮಾತು, ಕೃತಿಗೆ ತೂತು ! ಸುಖವು ಸಾಧ್ಯವೆ?
ಆದರು ಇದು ಪ್ರಜಾರಾಜ್ಯ ! ಅಹಹ, ಚೋದ್ಯವೆ !


ತನ್ನ ನಂಟ ಮಾಡುವ ಅನ್ಯಾಯವೆಲ್ಲ ನ್ಯಾಯ !
ಇನ್ನೆಲ್ಲರು ಬಿಡಲು ಬೇಕು ನ್ಯಾಯಕಾಗಿ ಬಾಯ !
ಆಡಳಿತದ ಆಸನಕ್ಕೆ ಬೇರೆ ಯಾರು ಕೈಯ –
ಹಚ್ಚದೆಯೇ ದುಡಿಯಬೇಕು, ಪ್ರಜಾರಾಜ್ಯಧ್ಯೆಯ !


ಭರತ ಭೂಮಿಯೆಲ್ಲ ಬಾಯಿಮಾತಿನಲ್ಲಿ ಒಂದೇ !
ಕೊರೆಯುತಿಹವು ಕಿವಿಗಳನ್ನು ಪರಸ್ಪರರ ನಿಂದೆ !
ಜಾತಿಜಗಳ, ನುಡಿ-ಗಡಿಗಳ ಜಗಳಗಳೇ ಮುಂದೆ,
ಜಗದೀಶಾ ನೀನೆ ಕಾಯೊ ಪ್ರಜಾರಾಜ್ಯ ತಂದೆ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ ನಿನ್ನ ನಾನು
Next post ಚೈತ್ಯಾಲಯ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…