Home / ಲೇಖನ / ವ್ಯಕ್ತಿ / ಡಾ. ಇಂದೇರ್ ಬಿರ್‌ಗಿಲ್

ಡಾ. ಇಂದೇರ್ ಬಿರ್‌ಗಿಲ್

ದಿನ ಬೆಳಗಾಗದರೊಳಗಾಗಿ ಡಾ|| ಇಂದೇರ್ ಬಿರ್‌ಗಿಲ್ ವಿಶ್ವವಿಖ್ಯಾತಿ ಗಳಿಸಿರುವರು.

ತೀರಾ ಉಲ್ಬಣಗೊಂಡ ಕಿಡ್ನಿ ಕ್ಯಾನ್ಸರ್‌ ರೋಗಿಗಳಿಗೆ ರೋಬಾಟ್ ಸರ್ಜರಿಗಳನ್ನು ಬಲು ಯಶಸ್ವಿಯಾಗಿ ನೆರವೇರಿಸುವ ಮೂಲಕ ಹೆಸರುವಾಸಿಯಾಗಿರುವರು.

ಡಾ|| ಇಂದೇರ್ ಬಿರ್‌ಗಿಲ್- ಮೂಲತಃ ಭವ್ಯ ಭಾರತೀಯರು. ಆದರೀಗ ಅಮೆರಿಕನ್ ಸರ್‍ಜನ್. ಇಲ್ಲಿನ ತಂಡದ ನೇತೃತ್ವ ವಹಿಸಿರುವರು. ಈವತ್ತು ಇವರೆಲ್ಲ ಮಹತ್ವದ ಸಾಧನೆ ಮಾಡಿರುವರು.

ಲಾಸ್ ಏಂಜೆಲಿಸ್‌ನ ಯು‌ಎಸ್‌ಸಿ ಇನ್‌ಸ್ಟಿಟ್ಯೂಟ್ ಆಫ್ ಯುರೋಲಜಿಯ (ಯು‌ಎಸ್‌ಸಿ ಮೂತ್ರಶಾಸ್ತ್ರ ಸಂಸ್ಥೆ) ವೈದ್ಯರ ತಂಡವು ಅತ್ಯಂತ ದೀರ್ಘವಾದ ಈ ಸರ್ಜರಿಯನ್ನು ಏಳು ಸಣ್ಣ ಸಣ್ಣ ಛೇದನಗಳು ಮತ್ತು ನಾಲ್ಕು ರೊಬೋಟ್ ಉಪಕರಣಗಳನ್ನು ಮಾತ್ರ ಬಳಸಿ ಮಾಡಿರುವುದು.

ಹೃದಯವನ್ನು ಮರು ಸಂಪರ್ಕಿಸುವ ಪ್ರಮುಖ ರಕ್ತನಾಳದಲ್ಲಿ ಕ್ಯಾನ್ಸರ್ ಪರಿಣಾಮವಾಗಿ ಮೂರನೆಯ ಹಂತದ ಹೆಪ್ಪುಗಟ್ಟುವಿಕೆ ಸಂಭವಿಸಿದ್ದರಿಂದ ಈ ಸರ್ಜರಿ ಅನಿವಾರ್‍ಯವಾಗಿತ್ತು. ಸಾಮಾನ್ಯವಾಗಿ ಇನ್‌ಫೆರಿಯರ್‌ವೀನಾ ಕಾವಾ (ಐವಿಸಿ) ಥ್ರೊಂಬೆಕ್ಟೊಮಿ ಎಂಬುದಾಗಿ ಕರೆಯಲಾಗುವ ಈ ಕ್ಲಿಷ್ಟ ಸರ್‍ಜರಿಯನ್ನು ದೊಡ್ಡ ಗಾಯ ಮಾಡಿ ಮಾಡಬೇಕಾಗುತ್ತದೆಂದು- ಇಂದೇರ್ ಬಿರ್‌ಗಿಲ್ ಸರ್ಜನ್ ಎಲ್ಲರ ಪರವಾಗಿ ಖಚಿತಪಡಿಸಿರುವರು.

ಮೂತ್ರನಾಳದ ಕ್ಯಾನ್ಸರ್ ಚಿಕಿತ್ಸೆಗಾಗಿ ಮಾಡಲಾಗುವ ಈ ಕ್ಲಿಷ್ಟ ಸರ್ಜರಿಯು ಮೂತ್ರನಾಳ ಸಂಬಂಧಿ ಒಪನ್ ಸರ್ಜರಿಗಳಲ್ಲೇ ಅತ್ಯಂತ ಸವಾಲಿನದಾಗಿದೆ. ಇಂಥಾದೊಂದು ಸರ್ಜರಿಯನ್ನು ಕೇವಲ ೭ ಸಣ್ಣ ಗಾಯ, ೪ ರೊಬೋಟ್ ಉಪಕರಣ ಬಳಸಿ ಮಾಡಿರುವುದು ಬಹು ದೊಡ್ಡ ಸಾಧನೆ ಎನ್ನಲಾಗಿದೆ.

ಇದೇ ತಂಡವು ಈ ತನಕ ಮೂತ್ರನಾಳದ ಕ್ಯಾನ್ಸರ್ ಹಾಗೂ ೩ನೆಯ ಹಂತದ ಥ್ರೋಯಿ ತಲುಪಿದ ೯ ರೋಗಿಗಳಿಗೆ ಈ “ರೊಬೋಟ್ ಐವಿಸಿ ಥ್ರೋಬೊಕ್ಟೊವಿ” ನಡೆಸಿದೆಯೆಂದು ಹೇಳಿರುವರು. ಇವರೆಲ್ಲ ಏಳು ತಿಂಗಳುಗಳ ಬಳಿಕ ಗಮನಿಸಿದಾಗ ಇವೆಲ್ಲರೂ ತಮ್ಮ ತಮ್ಮ ಸಮಸ್ಯೆಯಿಂದ ಪಾರಾಗಿದ್ದು, ರೋಗ ಲಕ್ಷಣವೇ ಕಾಣಿಸದಿರುವುದು ಚಿಕಿತ್ಸೆ ಯಶಸ್ವಿಯಾಗಿರುವುದಕ್ಕೆ ಹಿರಿಸಾಕ್ಷಿಯಾಗಿರುವರೆಂದು ವೈದ್ಯರಾದ ಡಾ| ಇಂದೇರ್ ಬಿರ್‌ಗಿಲ್ ಹೇಳಿರುವರು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...