ಡಾ. ಇಂದೇರ್ ಬಿರ್‌ಗಿಲ್

ಡಾ. ಇಂದೇರ್ ಬಿರ್‌ಗಿಲ್

ದಿನ ಬೆಳಗಾಗದರೊಳಗಾಗಿ ಡಾ|| ಇಂದೇರ್ ಬಿರ್‌ಗಿಲ್ ವಿಶ್ವವಿಖ್ಯಾತಿ ಗಳಿಸಿರುವರು.

ತೀರಾ ಉಲ್ಬಣಗೊಂಡ ಕಿಡ್ನಿ ಕ್ಯಾನ್ಸರ್‌ ರೋಗಿಗಳಿಗೆ ರೋಬಾಟ್ ಸರ್ಜರಿಗಳನ್ನು ಬಲು ಯಶಸ್ವಿಯಾಗಿ ನೆರವೇರಿಸುವ ಮೂಲಕ ಹೆಸರುವಾಸಿಯಾಗಿರುವರು.

ಡಾ|| ಇಂದೇರ್ ಬಿರ್‌ಗಿಲ್- ಮೂಲತಃ ಭವ್ಯ ಭಾರತೀಯರು. ಆದರೀಗ ಅಮೆರಿಕನ್ ಸರ್‍ಜನ್. ಇಲ್ಲಿನ ತಂಡದ ನೇತೃತ್ವ ವಹಿಸಿರುವರು. ಈವತ್ತು ಇವರೆಲ್ಲ ಮಹತ್ವದ ಸಾಧನೆ ಮಾಡಿರುವರು.

ಲಾಸ್ ಏಂಜೆಲಿಸ್‌ನ ಯು‌ಎಸ್‌ಸಿ ಇನ್‌ಸ್ಟಿಟ್ಯೂಟ್ ಆಫ್ ಯುರೋಲಜಿಯ (ಯು‌ಎಸ್‌ಸಿ ಮೂತ್ರಶಾಸ್ತ್ರ ಸಂಸ್ಥೆ) ವೈದ್ಯರ ತಂಡವು ಅತ್ಯಂತ ದೀರ್ಘವಾದ ಈ ಸರ್ಜರಿಯನ್ನು ಏಳು ಸಣ್ಣ ಸಣ್ಣ ಛೇದನಗಳು ಮತ್ತು ನಾಲ್ಕು ರೊಬೋಟ್ ಉಪಕರಣಗಳನ್ನು ಮಾತ್ರ ಬಳಸಿ ಮಾಡಿರುವುದು.

ಹೃದಯವನ್ನು ಮರು ಸಂಪರ್ಕಿಸುವ ಪ್ರಮುಖ ರಕ್ತನಾಳದಲ್ಲಿ ಕ್ಯಾನ್ಸರ್ ಪರಿಣಾಮವಾಗಿ ಮೂರನೆಯ ಹಂತದ ಹೆಪ್ಪುಗಟ್ಟುವಿಕೆ ಸಂಭವಿಸಿದ್ದರಿಂದ ಈ ಸರ್ಜರಿ ಅನಿವಾರ್‍ಯವಾಗಿತ್ತು. ಸಾಮಾನ್ಯವಾಗಿ ಇನ್‌ಫೆರಿಯರ್‌ವೀನಾ ಕಾವಾ (ಐವಿಸಿ) ಥ್ರೊಂಬೆಕ್ಟೊಮಿ ಎಂಬುದಾಗಿ ಕರೆಯಲಾಗುವ ಈ ಕ್ಲಿಷ್ಟ ಸರ್‍ಜರಿಯನ್ನು ದೊಡ್ಡ ಗಾಯ ಮಾಡಿ ಮಾಡಬೇಕಾಗುತ್ತದೆಂದು- ಇಂದೇರ್ ಬಿರ್‌ಗಿಲ್ ಸರ್ಜನ್ ಎಲ್ಲರ ಪರವಾಗಿ ಖಚಿತಪಡಿಸಿರುವರು.

ಮೂತ್ರನಾಳದ ಕ್ಯಾನ್ಸರ್ ಚಿಕಿತ್ಸೆಗಾಗಿ ಮಾಡಲಾಗುವ ಈ ಕ್ಲಿಷ್ಟ ಸರ್ಜರಿಯು ಮೂತ್ರನಾಳ ಸಂಬಂಧಿ ಒಪನ್ ಸರ್ಜರಿಗಳಲ್ಲೇ ಅತ್ಯಂತ ಸವಾಲಿನದಾಗಿದೆ. ಇಂಥಾದೊಂದು ಸರ್ಜರಿಯನ್ನು ಕೇವಲ ೭ ಸಣ್ಣ ಗಾಯ, ೪ ರೊಬೋಟ್ ಉಪಕರಣ ಬಳಸಿ ಮಾಡಿರುವುದು ಬಹು ದೊಡ್ಡ ಸಾಧನೆ ಎನ್ನಲಾಗಿದೆ.

ಇದೇ ತಂಡವು ಈ ತನಕ ಮೂತ್ರನಾಳದ ಕ್ಯಾನ್ಸರ್ ಹಾಗೂ ೩ನೆಯ ಹಂತದ ಥ್ರೋಯಿ ತಲುಪಿದ ೯ ರೋಗಿಗಳಿಗೆ ಈ “ರೊಬೋಟ್ ಐವಿಸಿ ಥ್ರೋಬೊಕ್ಟೊವಿ” ನಡೆಸಿದೆಯೆಂದು ಹೇಳಿರುವರು. ಇವರೆಲ್ಲ ಏಳು ತಿಂಗಳುಗಳ ಬಳಿಕ ಗಮನಿಸಿದಾಗ ಇವೆಲ್ಲರೂ ತಮ್ಮ ತಮ್ಮ ಸಮಸ್ಯೆಯಿಂದ ಪಾರಾಗಿದ್ದು, ರೋಗ ಲಕ್ಷಣವೇ ಕಾಣಿಸದಿರುವುದು ಚಿಕಿತ್ಸೆ ಯಶಸ್ವಿಯಾಗಿರುವುದಕ್ಕೆ ಹಿರಿಸಾಕ್ಷಿಯಾಗಿರುವರೆಂದು ವೈದ್ಯರಾದ ಡಾ| ಇಂದೇರ್ ಬಿರ್‌ಗಿಲ್ ಹೇಳಿರುವರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಾಸ್ತ್ರಿಗಳ ಮಗ – ೨
Next post ಮರವೊಂದು ಬಿದ್ದಿದೆ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys