Home / ಕವನ / ಕವಿತೆ / ಬರುವ ಸೂರ್ಯ

ಬರುವ ಸೂರ್ಯ

ಪೂರ್ವ ನಾರಿಯು ರವಿಗೆ ಆರತಿ ಬೆಳಗಿ ನಿಂದಿಹ ಚಲುವದೊ
ಕೆಂಪು ಸೀರೆಗೆ ಚಿನ್ನದೆಳೆಗಳ ಬಣ್ಣ ಬಣ್ಣದ ಒಡಲದೊ
ಕಾಳರಾತ್ರಿಯ ಜೈಸಿ ರಕ್ತದಿ ಮೈಯ ತೊಳೆಯುತ ಬಹನದೊ
ಬೆಂಕಿಯುಂಡೆಯೊ ಎನುವ ಕಾಂತಿಯ ಸೂಸಿ ನೇಸರ ಬರವದೊ.

ನಿಂದ ಸಂಧ್ಯಾರಾಣಿಯಪ್ಪಿದ ಚೆಲುವ ಕಿರಣದ ಕರದಲಿ
ಮುನಿದ ಕಮಲಿನಿಗಿತ್ತು ಮುತ್ತನು ನಲಿಸಿ ನಗಿಸಿದ ಒಲವಿಲಿ.
ವಿಹಗ ಗಾಯನದಿಂದ ಸ್ವಾಗತವಿತ್ತು ಕರೆವುವು ಮುದದಲಿ
ವೇದಘೋಷದಿ ಪೂಜಿಸುವ ಜಗವನ್ನು ನೋಡುವ ನಗುತಲಿ.

ತಳಿರು ಪೂ ಪಣ್ಗಾಯಿಯರ್ಪಿಸಿ ಗಿಡಮರಂಗಳು ಕರೆವುವು.
ಪಾಲ್ಗರೆದು ಕ್ಷೀರಾಭಿಷೇಕದಿ ಸುರಭಿಗಣ ಮೈದೋಳವುವು.
ಹಿಂದೆ ಬಂದನು ಬಂದು ಹೋದನು ಇನ್ನು ಬಾರನು ಎನ್ನುವ
ಜಗಕೆ ಅಭಯವ ನೀಡಿ ಬರುತಿರೆ ಪೂಜೆಗಯ್ವರು ನವನವ.

ಸೂರ್ಯದರ್ಶನ ಮಾಡಿ ಶಾಂತಿಯ ಪೊಂದಿ ಚಂದ್ರಮ ಮರೆಯಲಿ
ನಗವನಿಳಿದನು ಕಾಣದಾದನು ಉಡುಗಣಂಗಳ ಜೊತಯಲಿ.
ಶಬ್ದವಡಗಿದ ಜಗವ ಮುಟ್ಟುವ ಕಿರಣಕರಗಳ ನೀಡುತ
ಒಪು ಮೂಡಿತು ಕಪ್ಪು ಬಾಡಿತು ತಪ್ಪು ಸಡಲಿತು ಮರೆಯುತ.

ರಾಣಿಯರು ಸಿಂಗರಿಸಿ ಮಕುಟವನಿರಿಸಿ ಕೂರಿಸಿ ರಥದಲಿ
ಕಳುಹಿದರು ಸಂಪ್ರೀತಿಯಿಂದಲಿ ಜಗದ ಯಾತ್ರೆಗೆ ಮುದದಲಿ.
ಒಲಿದು ಬಂದನು ಹಸುರನೆರಚುತ ಬೆಳೆವ ಸೂರ್ಯನು ನಭದಲಿ
ಒರೆಸಿ ಮಬ್ಬನು ಜ್ಞಾನ ಜ್ಯೋತಿಯನೂಡಿ ಸರ್ವರ ಮನದಲಿ.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...