Home / ಕವನ / ಕವಿತೆ / ಬರುವ ಸೂರ್ಯ

ಬರುವ ಸೂರ್ಯ

ಪೂರ್ವ ನಾರಿಯು ರವಿಗೆ ಆರತಿ ಬೆಳಗಿ ನಿಂದಿಹ ಚಲುವದೊ
ಕೆಂಪು ಸೀರೆಗೆ ಚಿನ್ನದೆಳೆಗಳ ಬಣ್ಣ ಬಣ್ಣದ ಒಡಲದೊ
ಕಾಳರಾತ್ರಿಯ ಜೈಸಿ ರಕ್ತದಿ ಮೈಯ ತೊಳೆಯುತ ಬಹನದೊ
ಬೆಂಕಿಯುಂಡೆಯೊ ಎನುವ ಕಾಂತಿಯ ಸೂಸಿ ನೇಸರ ಬರವದೊ.

ನಿಂದ ಸಂಧ್ಯಾರಾಣಿಯಪ್ಪಿದ ಚೆಲುವ ಕಿರಣದ ಕರದಲಿ
ಮುನಿದ ಕಮಲಿನಿಗಿತ್ತು ಮುತ್ತನು ನಲಿಸಿ ನಗಿಸಿದ ಒಲವಿಲಿ.
ವಿಹಗ ಗಾಯನದಿಂದ ಸ್ವಾಗತವಿತ್ತು ಕರೆವುವು ಮುದದಲಿ
ವೇದಘೋಷದಿ ಪೂಜಿಸುವ ಜಗವನ್ನು ನೋಡುವ ನಗುತಲಿ.

ತಳಿರು ಪೂ ಪಣ್ಗಾಯಿಯರ್ಪಿಸಿ ಗಿಡಮರಂಗಳು ಕರೆವುವು.
ಪಾಲ್ಗರೆದು ಕ್ಷೀರಾಭಿಷೇಕದಿ ಸುರಭಿಗಣ ಮೈದೋಳವುವು.
ಹಿಂದೆ ಬಂದನು ಬಂದು ಹೋದನು ಇನ್ನು ಬಾರನು ಎನ್ನುವ
ಜಗಕೆ ಅಭಯವ ನೀಡಿ ಬರುತಿರೆ ಪೂಜೆಗಯ್ವರು ನವನವ.

ಸೂರ್ಯದರ್ಶನ ಮಾಡಿ ಶಾಂತಿಯ ಪೊಂದಿ ಚಂದ್ರಮ ಮರೆಯಲಿ
ನಗವನಿಳಿದನು ಕಾಣದಾದನು ಉಡುಗಣಂಗಳ ಜೊತಯಲಿ.
ಶಬ್ದವಡಗಿದ ಜಗವ ಮುಟ್ಟುವ ಕಿರಣಕರಗಳ ನೀಡುತ
ಒಪು ಮೂಡಿತು ಕಪ್ಪು ಬಾಡಿತು ತಪ್ಪು ಸಡಲಿತು ಮರೆಯುತ.

ರಾಣಿಯರು ಸಿಂಗರಿಸಿ ಮಕುಟವನಿರಿಸಿ ಕೂರಿಸಿ ರಥದಲಿ
ಕಳುಹಿದರು ಸಂಪ್ರೀತಿಯಿಂದಲಿ ಜಗದ ಯಾತ್ರೆಗೆ ಮುದದಲಿ.
ಒಲಿದು ಬಂದನು ಹಸುರನೆರಚುತ ಬೆಳೆವ ಸೂರ್ಯನು ನಭದಲಿ
ಒರೆಸಿ ಮಬ್ಬನು ಜ್ಞಾನ ಜ್ಯೋತಿಯನೂಡಿ ಸರ್ವರ ಮನದಲಿ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...