ಒಂದು ಎಚ್ಚರಿಕೆ

ಬಹೀರಮುಖ ಜಗತ್ತನ್ನು ಮರೆ
ಅಂತರ ಮುಖನಾಗಿ ನೀನು ಚಲಿಸು
ಹೊರಗಿನ ಸೌಂದರ್‍ಯ ಕ್ಷಣಿಕ
ಒಳಗಿನ ಸ್ವರೂಪವೆ ಧನ್ಯ

ಮನಸ್ಸನ್ನು ಬಗ್ಗಿಸಿ ಹಿಡಿಯಬೇಕು
ಹೆಜ್ಜೆ ಹೆಜ್ಜೆ ಅದಕ್ಕೆ ತಿದ್ದಬೇಕು
ಅದು ಇಚ್ಛಿಸಿದಂತೆ ನಿ ಬಯಸದಿರು
ನಿನ್ನ ಇಚ್ಛೆ ಕಾಣಲು ಮನ ತವಕಿಸಬೇಕು

ಹೊರಗಿನ ಆಡಂಬರಗಳಿಗೆ ನೋಡದಿರು
ಪರರನ್ನು ಮೆಚ್ಚಿಸಲು ವರ್‍ತಿಸದಿರು
ನಿನ್ನ ಕಷ್ಟ ಸುಖಕ್ಕೆಲ್ಲ ಯಾರು ಹೊಣೆ?
ಅವರನ್ನು ರೂಪಿಸಲು ನೀ ನಾರು?

ಬದುಕಿನ ಈ ಕ್ಷಣ ಕ್ಷಣಗಳು ನಾಶದತ್ತ
ಶರೀರ ಸುಖ ಬಯಸಿ ವಿನಾಶಿಯಾಗಲಿದೆ
ನೀನು ಮಾತ್ರ ನಿತ್ಯ ಅವಿನಾಶಿ
ನಿನ್ನ ಧರ್‍ಮವೆ ನಿನ್ನ ಕಾಯಲಿದೆ

ನೀನು ಈಗಲೇ ಅಚಲನಾಗಿರು
ನಾಳೆಯೆಂಬುದೆಲ್ಲ ಬರೀ ಗೊಳ್ಳು
ಈ ಕ್ಷಣಗಳು ಈಗ ಅತ್ಯಮೂಲ್ಯ
ಮಾಣಿಕ್ಯ ವಿಠಲನಾಗಿ ಪಾವನಗೊಳ್ಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೩೯
Next post ಜನ್ಮಭೂಮಿ

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…