ಒಂದು ಎಚ್ಚರಿಕೆ

ಬಹೀರಮುಖ ಜಗತ್ತನ್ನು ಮರೆ
ಅಂತರ ಮುಖನಾಗಿ ನೀನು ಚಲಿಸು
ಹೊರಗಿನ ಸೌಂದರ್‍ಯ ಕ್ಷಣಿಕ
ಒಳಗಿನ ಸ್ವರೂಪವೆ ಧನ್ಯ

ಮನಸ್ಸನ್ನು ಬಗ್ಗಿಸಿ ಹಿಡಿಯಬೇಕು
ಹೆಜ್ಜೆ ಹೆಜ್ಜೆ ಅದಕ್ಕೆ ತಿದ್ದಬೇಕು
ಅದು ಇಚ್ಛಿಸಿದಂತೆ ನಿ ಬಯಸದಿರು
ನಿನ್ನ ಇಚ್ಛೆ ಕಾಣಲು ಮನ ತವಕಿಸಬೇಕು

ಹೊರಗಿನ ಆಡಂಬರಗಳಿಗೆ ನೋಡದಿರು
ಪರರನ್ನು ಮೆಚ್ಚಿಸಲು ವರ್‍ತಿಸದಿರು
ನಿನ್ನ ಕಷ್ಟ ಸುಖಕ್ಕೆಲ್ಲ ಯಾರು ಹೊಣೆ?
ಅವರನ್ನು ರೂಪಿಸಲು ನೀ ನಾರು?

ಬದುಕಿನ ಈ ಕ್ಷಣ ಕ್ಷಣಗಳು ನಾಶದತ್ತ
ಶರೀರ ಸುಖ ಬಯಸಿ ವಿನಾಶಿಯಾಗಲಿದೆ
ನೀನು ಮಾತ್ರ ನಿತ್ಯ ಅವಿನಾಶಿ
ನಿನ್ನ ಧರ್‍ಮವೆ ನಿನ್ನ ಕಾಯಲಿದೆ

ನೀನು ಈಗಲೇ ಅಚಲನಾಗಿರು
ನಾಳೆಯೆಂಬುದೆಲ್ಲ ಬರೀ ಗೊಳ್ಳು
ಈ ಕ್ಷಣಗಳು ಈಗ ಅತ್ಯಮೂಲ್ಯ
ಮಾಣಿಕ್ಯ ವಿಠಲನಾಗಿ ಪಾವನಗೊಳ್ಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೩೯
Next post ಜನ್ಮಭೂಮಿ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…