Home / ಕವನ / ತತ್ವಪದ / ಒಂದು ಎಚ್ಚರಿಕೆ

ಒಂದು ಎಚ್ಚರಿಕೆ

ಬಹೀರಮುಖ ಜಗತ್ತನ್ನು ಮರೆ
ಅಂತರ ಮುಖನಾಗಿ ನೀನು ಚಲಿಸು
ಹೊರಗಿನ ಸೌಂದರ್‍ಯ ಕ್ಷಣಿಕ
ಒಳಗಿನ ಸ್ವರೂಪವೆ ಧನ್ಯ

ಮನಸ್ಸನ್ನು ಬಗ್ಗಿಸಿ ಹಿಡಿಯಬೇಕು
ಹೆಜ್ಜೆ ಹೆಜ್ಜೆ ಅದಕ್ಕೆ ತಿದ್ದಬೇಕು
ಅದು ಇಚ್ಛಿಸಿದಂತೆ ನಿ ಬಯಸದಿರು
ನಿನ್ನ ಇಚ್ಛೆ ಕಾಣಲು ಮನ ತವಕಿಸಬೇಕು

ಹೊರಗಿನ ಆಡಂಬರಗಳಿಗೆ ನೋಡದಿರು
ಪರರನ್ನು ಮೆಚ್ಚಿಸಲು ವರ್‍ತಿಸದಿರು
ನಿನ್ನ ಕಷ್ಟ ಸುಖಕ್ಕೆಲ್ಲ ಯಾರು ಹೊಣೆ?
ಅವರನ್ನು ರೂಪಿಸಲು ನೀ ನಾರು?

ಬದುಕಿನ ಈ ಕ್ಷಣ ಕ್ಷಣಗಳು ನಾಶದತ್ತ
ಶರೀರ ಸುಖ ಬಯಸಿ ವಿನಾಶಿಯಾಗಲಿದೆ
ನೀನು ಮಾತ್ರ ನಿತ್ಯ ಅವಿನಾಶಿ
ನಿನ್ನ ಧರ್‍ಮವೆ ನಿನ್ನ ಕಾಯಲಿದೆ

ನೀನು ಈಗಲೇ ಅಚಲನಾಗಿರು
ನಾಳೆಯೆಂಬುದೆಲ್ಲ ಬರೀ ಗೊಳ್ಳು
ಈ ಕ್ಷಣಗಳು ಈಗ ಅತ್ಯಮೂಲ್ಯ
ಮಾಣಿಕ್ಯ ವಿಠಲನಾಗಿ ಪಾವನಗೊಳ್ಳು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...