Home / ಕವನ / ಕವಿತೆ / ಕಸವೂ ನಕ್ಷತ್ರವೂ

ಕಸವೂ ನಕ್ಷತ್ರವೂ


ಬಯಲಿನಲಿ ಕೂತು
ಆಕಾಶಕ್ಕೆ ಕಣ್ಣು.
ಬೆಳ್ಳಂಬೆಳಗೇ ತಾರೆಗಳ ಹುಡುಕಿ
ಕಿತ್ತು ಪೋಣಿಸಿ
ಮಾಲೆ ಮಾಡುತ್ತ
ಮಡಿಲು ತುಂಬಿಕೊಳುವುದರಲೇ ಮಗ್ನ
ಈ ಬಯಲ ಬುದ್ಧ.


ಗುಡಿಸಿದ ರಾಶಿ ಬೀದಿ ಕಸ
ತನ್ನ ಪುಟ್ಟ ಬೊಗಸೆಗೆ ತುಂಬಿ
ದಿನವೂ ಪುಟ ಪುಟನೆ ಓಡಿ ಬಂದು
ಅವನ ಪಾದ ಬುಡಕ್ಕೆ ಸುರುವಿ
ತಾರೆಗಳ ಮಾಲೆ ಕಟ್ಟುತಾ
ಮೋಹಕ್ಕೆ ಬಿದ್ದವನ ಮೈತಡವಿ
ಎಬ್ಬಿಸಿ
ಇಹಕ್ಕೆ ಕಣ್ಬಿಡಿಸಿ
ಕಲ್ಲು ಹೂವು ಮುಳ್ಳು ಕಾಗದದ ಚೂರು…..
ಒಂದೊಂದೇ
ಅವಶೇಷ ಎತ್ತಿ ಹಿಡಿದು
ಪ್ರತಿ ಕಸದ ಇತಿಹಾಸ ವರ್ತಮಾನ
ಬಿಡಿ ಇಡಿಯಾಗಿ ಏರಿಳಿತದ ದನಿಯಲ್ಲೇ
ಕಥೆ ಬಿಡಿಸಿಡುತ್ತದೆ
ಈ ಬೀದಿ ಗುಡಿಸುವ ಜೀವ.


ಸಾಣೆಗೆ ಸಿಕ್ಕದ ಚೂಪುಗಲ್ಲು
ತುಳಿದು ಬಾಡಿಸಿದ ಹೂವು
ಚುಚ್ಚಲು ಕಾದಿರುವ ಮುಳ್ಳು
ಒಡೆದ ಬಳೆ ಚೂರು
ರಕ್ತದ ಕಲೆಯ ಬಟ್ಟೆ ಚಿಂದಿ
ಒಡೆದ ಭ್ರೂಣದ ಪಳೆಯುಳಿಕೆ…..
ಕಸದ ಮಣ್ಣಿನ ತುಂಬಾ ನೋವು.
ಅವನ ಪಾದಕ್ಕೆ ಕಸ ಸುರುವಿ
ಕಣ್ಣೀರಲೇ ಕೈ ತೊಳೆದರೂ
ಅವಳ ಪುಟ್ಟ ಬೊಗಸೆಯೊಂದು
ಸದಾ ಸುಡುವ ಕುಲುಮೆ.


ಅವನಿಗೆ ಕತೆ ಹೇಳುತ್ತಾ ಹೇಳುತ್ತಾ
ಕಸವಾಗಿಸಿದವರ ನಿರ್ದಯತೆಗೆ
ಕುದಿಯುತ್ತಾ ಸಿಡಿಯುತ್ತಾ
ಬಿಕ್ಕುತ್ತಾ ಉಮ್ಮಳಿಸಿ ಅಳುತ್ತಾಳೆ.


ಅವಳ ಮನ ನೇವರಿಸಿ ಸಂತೈಸುವ
ಬಯಲ ಬುದ್ಧ
ತಲೆನೇವರಿಸುತ್ತಾ
ಹೆಗಲ ಮೇಲಿನ ಚುಂಗಿನಲಿ
ಕಣ್ಣೀರೊರೆಸುತ್ತಾ
ಪ್ರತಿ ಕಸದ ಕಥೆಗೂ
ತಾನೇ ಅದಾಗಿ,
ಭವಿಷ್ಯ ನೂಲುತ್ತಾನೆ ಕರುಳ ನೂಲಿನಲಿ.


ಮುಟ್ಟುತ್ತಾ ಮುಟ್ಟುತ್ತಾ
ಕಸದ ಕಲ್ಲು ನಯವಾಗಿಸುತ್ತಾ
ಚೂಪು ಮುಳ್ಳಿನ ಮೊನೆ ಮುರಿಯುತ್ತಾ
ಬಳೆ ಚೂರು ಗುಂಡಗೆ ಅಂಟಿಸುತ್ತಾ….
ಈ ಬಯಲ ಬುದ್ಧ
ಮುರಿದ ಹೂವಿನ ದಳಗಳ
ದೇಟಿಗೆ ಜೋಡಿಸುತ್ತಾ… ಇರುತ್ತ.


ಇರುತ್ತಾ,
ಈ ಬೀದಿ ಗುಡಿಸುವ ಜೀವ
ಅವನ ಪಾದಕ್ಕೆ
ಕಸ ಸುರುವುತ್ತಾ
ಕತೆ ಹೇಳುತ್ತಾ
ಅವನ ತಾರೆಗಳ
ಮಡಿಲಿಗೆಳೆದುಕೊಂಡು
ತಾನೂ
ಮಾಲೆ ಕಟ್ಟುತ್ತಾಳೆ!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...