Home / ಕವನ / ಕವಿತೆ / ಹುಡುಕಾಟ

ಹುಡುಕಾಟ

ಯಾಕೆ ಹುಡುಕಬೇಕು ಹೇಳು ಗೆಳತಿ,
ಶಾಪಗ್ರಸ್ತರಾಗಿ ಕಲ್ಲಾಗಿ ಮಲಗಿದವರ
ಬೆಂಕಿಯಲಿ ಹಾರಿದವರ, ಭೂಮಿಯಲ್ಲಿ ಸೇರಿದವರ,
ಚುಕ್ಕಿಯಾಗಿ ಬಾನಲ್ಲಿ ಲೀನವಾದವರ?
ಯಾಕೆ ಹುಡುಕಬೇಕು ಹೇಳು, ನಮ್ಮಾದರ್ಶಗಳ ಅವರಲಿ
ರಾಮರಾವಣರಿಲ್ಲದ, ಕೃಷ್ಣ ಧರ್ಮರಾಯರಿಲ್ಲದ
ಈ ಕಲಿಯುಗದಲಿ?
ಪತಿಯ ಶಾಪಕ್ಕೊಳಗಾಗಿ
ರಾಮನ ಕಾಲಸ್ಪರ್ಶಕೆ ಕಾದು ಕಲ್ಲಾಗಿ ಮಲಗುವ
ಅಹಲ್ಯೆಯರು ನಾವಲ್ಲ;
ಕೈ ಹಿಡಿದವ ಶಂಕಿಸಿದನೆಂದು
ಕಾಡಿಗೆ ಹೋಗುವ ಬೆಂಕಿಗೆ ಹಾರುವ
ಸೀತೆಯರು ನಾವಲ್ಲ;
ಪತಿಯೇ ಪರದೈವವೆಂದು ತನ್ನತನವ ಮರೆತು
ಅವನ ನೆರಳಾಗಿ ಬಾಳುವ
ಅಳಿದ ಮೇಲೆ ನಕ್ಷತ್ರವಾಗಿ ಬಾನಲ್ಲಿ ಮೆರೆಯುವ
ಋಷಿ ಪತ್ನಿಯರೂ ನಾವಲ್ಲ;
ಕುರುಡು ಪತಿಗೆ ಒಡನಾಡಿಯೆಂದು
ಕೃತಕ ಕುರುಡುತನಕ್ಕೊಳಗಾಗಿ ನೂರು ಮಕ್ಕಳ ಹಡೆದು
ಅವರ ದುರ್ಯೋಧನ ದುಶ್ಯಾಸನರಾಗ ಬಿಡುವ
ಗಾಂಧಾರಿಯರು ನಾವಲ್ಲ;
ಕೈಹಿಡಿದವನಿಂದ ಸಂತಾನವಿಲ್ಲವೆಂದು
ದೇವತೆಗಳ ಮೊರೆಹೋಗಿ ಪುತ್ರೋತ್ಸವ ನಡೆಸುವ
ಕುಂತಿ ಮಾದ್ರಿಯರೂ ನಾವಲ್ಲ;
ಹಂಚಿ ತಿನಬೇಕೆಂಬ ತಾಯಿಮಾತ ದಿಟ ಮಾಡ ಹೊರಟು
ಪಂಚ ಪಾಂಡವರ ಸತಿಯಾಗಿ
ಹೃದಯದೊಳಗಿನ ಪ್ರೇಮಗೀತೆಗೆ ತಿಲಾಂಜಲಿ ಇತ್ತ
ಪಾಂಚಾಲಿಯರೂ ನಾವಲ್ಲ.
ಅವರೆಲ್ಲ ವಾಲ್ಮೀಕಿ ಕುಮಾರವ್ಯಾಸರ
ಲೇಖನಿಯಿಂದ ಹುಟ್ಟಿ ಬಂದವರು, ಕಲ್ಪನೆಯ ಕೂಸುಗಳು
ಅಲ್ಲಲ್ಲಿ ಕಥೆಯಲ್ಲಿ ಸೇರಿ ಹೋದವರು!
ಮತ್ತೇಕೆ ಹುಡುಕಬೇಕು ಹೇಳು ಗೆಳತಿ
ನಮ್ಮಾದರ್ಶಗಳ ಅವರಲ್ಲಿ
ಅವರಾತ್ಮ ಅಂತರಾಳದಲಿ ಅಡಗಿದ್ದ
ಅಂತಃಶಕ್ತಿಯ ಮರೆತು ಕುಳಿತವರಲ್ಲಿ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...