Home / ಕವನ / ಕವಿತೆ / ಹೋಗಲೆಲ್ಲಿ ಜನ ಸಾಮಾನ್ಯರು?

ಹೋಗಲೆಲ್ಲಿ ಜನ ಸಾಮಾನ್ಯರು?

ಬರುತ್ತಿದ್ದಾರೆ ಜಾಗ್ರತೆ
ಹಗಲು ದರೋಡೆಕೋರರು
ಜನ ಸಾಮಾನ್ಯರ ಸುಲಿಗೆ ಮಾಡೋ
ಕಲಿಯುಗದ ಬಕಾಸುರರು.

ಮನೆಕಟ್ಟುವಾಗ ಬರುತ್ತಾರೆ
ಕಾರ್ಪೊರೇಶನ್‌ನ ಸುಲಿಗೆದಾರರು,
ಕಟ್ಟಿದ ಮೇಲೆ ಬರುತ್ತಾರೆ
ತೆರಿಗೆ ಹೇರುವ ಲಂಚಾವತಾರಿಗಳು.

ರಸ್ತೆಗಿಳಿದರೆ ಬರುತ್ತಾರೆ ಸರಗಳ್ಳರು
ವಾಹನಗಳ ನಿಯಂತ್ರಿಸುವವರು
ಪರಿಸರ ರಕ್ಷಣೆಗೆ ನಿಂತವರು
ಲೆಕ್ಕವಿಲ್ಲದೆ ಬೊಕ್ಕಸ ತುಂಬುವ ಅ-ರಕ್ಷಕರು.

ರಾಜಧಾನಿಯಲಿ ದೇಶದ ಬೊಕ್ಕಸ ನುಂಗುವವರು
ಶೇರು ಮಾರುಕಟ್ಟೆಯಲಿ
ಹಣಕಾಸಿನ ವ್ಯವಸ್ಥೆಯನು ತಲೆಕೆಳಗು ಮಾಡುವವರು
ಜನಸಾಮಾನ್ಯರ ರಕ್ತ ಹೀರುವ ಜೀರುಂಡೆಗಳು.

ದೇಶದ ತುಂಬೆಲ್ಲ ಉಗ್ರಗಾಮಿಗಳು
ಎಲ್.ಟಿ.ಟಿ. ಪಡೆಯುವರು
ತಮ್ಮನ್ನೇ ಬಲಿಕೊಡಲು ಸಿದ್ಧರಾಗಿರುವರು.
ಕೋಮುಗಲಭೆ ಹುಟ್ಟಿಸುವ ಜಾತಿಮತದ ಭೂತ ಹಿಡಿದವರು.

ಪೇಪರು ತುಂಬ ಕಾಡುಗಳ್ಳರು,
ದಂತ ಚೋರರು, ನರಹಂತಕರು,
ಜನರ ಕದ್ದು ಜೋಳಿಗೆ ತುಂಬುವ ವೀರಪ್ಪನಂತವರು
ಕೈಗೆ ಸಿಗದೆ ನುಸುಳಿ ಹೋಗುವ ಕಳ್ಳ ಸುಳ್ಳರು.

ಇವೆರಲ್ಲರ ಹಿಂದೆ ಇರುತ್ತಾರೆ
ಕೊಟ್ಟುಕೊಂಬುವ ಲೆಕ್ಕ ಬರವ
ಬೆಕ್ಕು ಸಂನ್ಯಾಸಿ ದೇಶಭಕ್ತರು
ಬೀಜಾಸುರನ ಸಂತತಿಯ ರಾಜಕಾರಣಿಗಳು.
ಬೇಲಿಯೆ ಹೊಲವ ಮೇದರೆ
ಹೋಗಲೆಲ್ಲಿ ಜನಸಾಮಾನ್ಯರು?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...