ಒಡಹುಟ್ಟಿದವರು

ಒಮ್ಮೆ ಹುಟ್ಟುತ್ತೇವೆ
ಒಬ್ಬತಾಯಿಯ ಗರ್ಭದಿಂದ
ಅಣ್ಣ ತಮ್ಮಂದಿರಾಗಿ, ಅಕ್ಕತಂಗಿಯರಾಗಿ,
ಇನ್ನೊಮ್ಮೆ ಸಿಗುವುದೇ ಈ ಯೋಗ?
ಮರೆತೇ ಬಿಡುತ್ತೇವೆ
ಜಗಳಾಡುತ್ತೇವೆ.
ಒಂದೇ ಬಟ್ಟಲಲ್ಲಿ ಉಂಡು
ಒಂದೇ ಮನೆಯಲ್ಲಿ ಬೆಳೆದೂ
ಒಬ್ಬರಿಗೊಬ್ಬರು ಅಪರಿಚಿತರಾಗುತ್ತೇವೆ;
ದಾಯಾದಿಗಳಾಗುತ್ತೇವೆ.
ಒಂದೇ ನೆಲದಲ್ಲಿ ಬೆಳೆದೂ
ಒಬ್ಬರಿಗೊಬ್ಬರು ವೈರಿಗಳಾಗುತ್ತೇವೆ,
ಜಾತಿ ಭೂತದ ಕೈಯಲ್ಲಿ ಸಿಕ್ಕು ಜಗ್ಗಾಡುತ್ತೇವೆ
ಒಬ್ಬರನ್ನೊಬ್ಬರು ತರಿದು ಚೆಲ್ಲಾಡುತ್ತೇವೆ.
ತಾಯಿಮಡಿಲ ರಕ್ತ ಸಿಕ್ತ ಮಾಡುತ್ತೇವೆ
ಚರಿತ್ರೆ ಕಲಿಸಿದ ಪಾಠ ಮರೆತೇ ಬಿಡುತ್ತೇವೆ!
ಎಲ್ಲ ಕಾಲದಲ್ಲೂ
ದುರಂತ ಮುಕ್ತಾಯದ
ಕಥೆ ಬರೆಯುತ್ತೇವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಳಿಗಾಲದಂತಿದ್ದ ನಿನ್ನ ಅಗಲಿಕೆ ಹೇಗೆ
Next post ಪೋಸ್ಟ್‌ ಗ್ರ್‍ಯಾಡುಯೇಶನ್

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…