ಇರುವೆ

ಇರುವೆ ಇರುವೆ ಎಲ್ಲಿರುವೆ?
ನೆಲದಲಿ ಹುತ್ತದಲಿ ನಾನಿರುವೆ

ಸಣ್ಣನೆ ಕಪ್ಪನೆ ಇರುವೆ
ನಿನಗೆ ಆಪರಿ ವೇಗವೇ?
ಮೈಯಲಿ ಬುಳು ಬುಳು ಓಡುವೆ
ಕಚ್ಚದೆ ಕರುಣೆಯ ತೋರುವೆ

ರಾಜ ರಾಣಿ ಜೊತೆಗೆ ಸವಾರಿ
ಅನ್ನವ ಅರಸುತ ಹೊರಡುವಿರಿ
ಶಿಸ್ತಿನ ಶಿಪಾಯಿ ತರಹ ನಿಮ್ ಪರಿ
ನೋಡಿ ಅರಗಾಗುವವು ವೈರಿ ಪಡೆ

ನಿಮ್ಮಯ ತೂಕಕ್ಕಿಂತ ಹೆಚ್ಚಿನ ಭಾರ
ಹೊತ್ತು ನೀವು ಎಲ್ಲಿಗೋ ನಡೆವಿರಿ
ನಿಮ್ಮಯ ಬದುಕು ಮೂರು ತಿಂಗಳು
ಆರು ತಿಂಗಳಿನ ಅನ್ನದ ತಿರುಳು?

ನಿಮ್ಮಯ ಬುದ್ಧಿ ನಮಗಿದ್ದಿದ್ದರೆ
ಫೇಲು ಮಾತು ನಮ್ಮಲ್ಲಿರಲಿಲ್ಲ
ಸತತೋದ್ಯೋಗ ನಮದಾಗಿದ್ದರೆ
ನಮ್ಮ ದೇಶ ಹೀಗಿರುತ್ತಿರಲಿಲ್ಲ

ಕೆಂಪು ಕೆಂಪನೇ ಕಂಜಿರುವ
ತಲೆ ತಗ್ಗಿಸಿಯೇ ನೀ ನಡೆವೆ
ಶಿಸ್ತು ಸಂಯಮ ನಿಮಗಿಲ್ಲವೇ?
ಸುಮ್ಮನೇ ಕಚ್ಚಿ ನೋಯಿಸುವೆ

ಕಪ್ಪನೆಯ ಗೊದ್ದ, ಕಟ್ಟಿರುವೆ
ಎರೆಮಣ್ಣಲ್ಲವೇ ನಿನ್ನಯ ಠಾವು?
ದಪ್ಪನೆ ಕಣ್ಣು ಉದ್ದ ಮೀಸೆಯ
ಮುಟ್ಟಲು ಖಂಡಿತ ಹೆದರುವೆನು

ಬಿದ್ದರೆ ಸಾಕು ಬೆಲ್ಲದ ವಾಸನೆ
ನುಗ್ಗಿ ಬರುವಿರಿ ಆನೆಯೋಪಾದಿ
ಮೀಸ ಕುಣಿಸುತ ಮುಕುರುವಿರಿ
ಮಕರಂದವ ಹೀರಿ ಸಾಯುವಿರಿ

ಮುಟ್ಟಿದರೆ ಮುನಿಗಳೇ ನೀವು
ಕಚಕ್ಕನೆ ಕಚ್ಚಲು ಭಾರಿ ನೋವು
ಬೇರ್ಪಟ್ಟರೂ ರುಂಡ ಮುಂಡಗಳು
ನಂದವು ನಿಮ್ಮಯ ಸೇಡಿನ ಕಿಡಿಗಳು

ಹಾರುವ ಹೋರುವ ಪುಕ್ಕದ ಇರುವೆ
ಗಿಡಗಳಲಲ್ಲವೇ ನಿಮ್ಮಯ ಇರವು
ಹಾರುತಲೇ ಮೇಲೆ ಕೆಳಗೆ ಬೀಳುವೆ
ಆ ಕೋಪಕೆ ನಮ್ಮನು ಕಚ್ಚಿಬಿಡುವೆ

ಸತ್ತ ವಾಸನೆ ಬಡಿದರೆ ನಿಮಗೆ
ಜಾತ್ರೆ-ಸಂತೆಗಳ ನೆನಪಾಗುವುದು
ನಿಮ್ಮಯ ಆ ಗುಣ ನಮಗೇಕಿಲ್ಲವೋ
ಇದ್ದರೆ ದಾರಿದ್ರ್ಯ ಇರಲಿಲ್ಲವೇನೋ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...