ಇರುವೆ

ಇರುವೆ ಇರುವೆ ಎಲ್ಲಿರುವೆ?
ನೆಲದಲಿ ಹುತ್ತದಲಿ ನಾನಿರುವೆ

ಸಣ್ಣನೆ ಕಪ್ಪನೆ ಇರುವೆ
ನಿನಗೆ ಆಪರಿ ವೇಗವೇ?
ಮೈಯಲಿ ಬುಳು ಬುಳು ಓಡುವೆ
ಕಚ್ಚದೆ ಕರುಣೆಯ ತೋರುವೆ

ರಾಜ ರಾಣಿ ಜೊತೆಗೆ ಸವಾರಿ
ಅನ್ನವ ಅರಸುತ ಹೊರಡುವಿರಿ
ಶಿಸ್ತಿನ ಶಿಪಾಯಿ ತರಹ ನಿಮ್ ಪರಿ
ನೋಡಿ ಅರಗಾಗುವವು ವೈರಿ ಪಡೆ

ನಿಮ್ಮಯ ತೂಕಕ್ಕಿಂತ ಹೆಚ್ಚಿನ ಭಾರ
ಹೊತ್ತು ನೀವು ಎಲ್ಲಿಗೋ ನಡೆವಿರಿ
ನಿಮ್ಮಯ ಬದುಕು ಮೂರು ತಿಂಗಳು
ಆರು ತಿಂಗಳಿನ ಅನ್ನದ ತಿರುಳು?

ನಿಮ್ಮಯ ಬುದ್ಧಿ ನಮಗಿದ್ದಿದ್ದರೆ
ಫೇಲು ಮಾತು ನಮ್ಮಲ್ಲಿರಲಿಲ್ಲ
ಸತತೋದ್ಯೋಗ ನಮದಾಗಿದ್ದರೆ
ನಮ್ಮ ದೇಶ ಹೀಗಿರುತ್ತಿರಲಿಲ್ಲ

ಕೆಂಪು ಕೆಂಪನೇ ಕಂಜಿರುವ
ತಲೆ ತಗ್ಗಿಸಿಯೇ ನೀ ನಡೆವೆ
ಶಿಸ್ತು ಸಂಯಮ ನಿಮಗಿಲ್ಲವೇ?
ಸುಮ್ಮನೇ ಕಚ್ಚಿ ನೋಯಿಸುವೆ

ಕಪ್ಪನೆಯ ಗೊದ್ದ, ಕಟ್ಟಿರುವೆ
ಎರೆಮಣ್ಣಲ್ಲವೇ ನಿನ್ನಯ ಠಾವು?
ದಪ್ಪನೆ ಕಣ್ಣು ಉದ್ದ ಮೀಸೆಯ
ಮುಟ್ಟಲು ಖಂಡಿತ ಹೆದರುವೆನು

ಬಿದ್ದರೆ ಸಾಕು ಬೆಲ್ಲದ ವಾಸನೆ
ನುಗ್ಗಿ ಬರುವಿರಿ ಆನೆಯೋಪಾದಿ
ಮೀಸ ಕುಣಿಸುತ ಮುಕುರುವಿರಿ
ಮಕರಂದವ ಹೀರಿ ಸಾಯುವಿರಿ

ಮುಟ್ಟಿದರೆ ಮುನಿಗಳೇ ನೀವು
ಕಚಕ್ಕನೆ ಕಚ್ಚಲು ಭಾರಿ ನೋವು
ಬೇರ್ಪಟ್ಟರೂ ರುಂಡ ಮುಂಡಗಳು
ನಂದವು ನಿಮ್ಮಯ ಸೇಡಿನ ಕಿಡಿಗಳು

ಹಾರುವ ಹೋರುವ ಪುಕ್ಕದ ಇರುವೆ
ಗಿಡಗಳಲಲ್ಲವೇ ನಿಮ್ಮಯ ಇರವು
ಹಾರುತಲೇ ಮೇಲೆ ಕೆಳಗೆ ಬೀಳುವೆ
ಆ ಕೋಪಕೆ ನಮ್ಮನು ಕಚ್ಚಿಬಿಡುವೆ

ಸತ್ತ ವಾಸನೆ ಬಡಿದರೆ ನಿಮಗೆ
ಜಾತ್ರೆ-ಸಂತೆಗಳ ನೆನಪಾಗುವುದು
ನಿಮ್ಮಯ ಆ ಗುಣ ನಮಗೇಕಿಲ್ಲವೋ
ಇದ್ದರೆ ದಾರಿದ್ರ್ಯ ಇರಲಿಲ್ಲವೇನೋ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...