ಇರುವೆ

ಇರುವೆ ಇರುವೆ ಎಲ್ಲಿರುವೆ?
ನೆಲದಲಿ ಹುತ್ತದಲಿ ನಾನಿರುವೆ

ಸಣ್ಣನೆ ಕಪ್ಪನೆ ಇರುವೆ
ನಿನಗೆ ಆಪರಿ ವೇಗವೇ?
ಮೈಯಲಿ ಬುಳು ಬುಳು ಓಡುವೆ
ಕಚ್ಚದೆ ಕರುಣೆಯ ತೋರುವೆ

ರಾಜ ರಾಣಿ ಜೊತೆಗೆ ಸವಾರಿ
ಅನ್ನವ ಅರಸುತ ಹೊರಡುವಿರಿ
ಶಿಸ್ತಿನ ಶಿಪಾಯಿ ತರಹ ನಿಮ್ ಪರಿ
ನೋಡಿ ಅರಗಾಗುವವು ವೈರಿ ಪಡೆ

ನಿಮ್ಮಯ ತೂಕಕ್ಕಿಂತ ಹೆಚ್ಚಿನ ಭಾರ
ಹೊತ್ತು ನೀವು ಎಲ್ಲಿಗೋ ನಡೆವಿರಿ
ನಿಮ್ಮಯ ಬದುಕು ಮೂರು ತಿಂಗಳು
ಆರು ತಿಂಗಳಿನ ಅನ್ನದ ತಿರುಳು?

ನಿಮ್ಮಯ ಬುದ್ಧಿ ನಮಗಿದ್ದಿದ್ದರೆ
ಫೇಲು ಮಾತು ನಮ್ಮಲ್ಲಿರಲಿಲ್ಲ
ಸತತೋದ್ಯೋಗ ನಮದಾಗಿದ್ದರೆ
ನಮ್ಮ ದೇಶ ಹೀಗಿರುತ್ತಿರಲಿಲ್ಲ

ಕೆಂಪು ಕೆಂಪನೇ ಕಂಜಿರುವ
ತಲೆ ತಗ್ಗಿಸಿಯೇ ನೀ ನಡೆವೆ
ಶಿಸ್ತು ಸಂಯಮ ನಿಮಗಿಲ್ಲವೇ?
ಸುಮ್ಮನೇ ಕಚ್ಚಿ ನೋಯಿಸುವೆ

ಕಪ್ಪನೆಯ ಗೊದ್ದ, ಕಟ್ಟಿರುವೆ
ಎರೆಮಣ್ಣಲ್ಲವೇ ನಿನ್ನಯ ಠಾವು?
ದಪ್ಪನೆ ಕಣ್ಣು ಉದ್ದ ಮೀಸೆಯ
ಮುಟ್ಟಲು ಖಂಡಿತ ಹೆದರುವೆನು

ಬಿದ್ದರೆ ಸಾಕು ಬೆಲ್ಲದ ವಾಸನೆ
ನುಗ್ಗಿ ಬರುವಿರಿ ಆನೆಯೋಪಾದಿ
ಮೀಸ ಕುಣಿಸುತ ಮುಕುರುವಿರಿ
ಮಕರಂದವ ಹೀರಿ ಸಾಯುವಿರಿ

ಮುಟ್ಟಿದರೆ ಮುನಿಗಳೇ ನೀವು
ಕಚಕ್ಕನೆ ಕಚ್ಚಲು ಭಾರಿ ನೋವು
ಬೇರ್ಪಟ್ಟರೂ ರುಂಡ ಮುಂಡಗಳು
ನಂದವು ನಿಮ್ಮಯ ಸೇಡಿನ ಕಿಡಿಗಳು

ಹಾರುವ ಹೋರುವ ಪುಕ್ಕದ ಇರುವೆ
ಗಿಡಗಳಲಲ್ಲವೇ ನಿಮ್ಮಯ ಇರವು
ಹಾರುತಲೇ ಮೇಲೆ ಕೆಳಗೆ ಬೀಳುವೆ
ಆ ಕೋಪಕೆ ನಮ್ಮನು ಕಚ್ಚಿಬಿಡುವೆ

ಸತ್ತ ವಾಸನೆ ಬಡಿದರೆ ನಿಮಗೆ
ಜಾತ್ರೆ-ಸಂತೆಗಳ ನೆನಪಾಗುವುದು
ನಿಮ್ಮಯ ಆ ಗುಣ ನಮಗೇಕಿಲ್ಲವೋ
ಇದ್ದರೆ ದಾರಿದ್ರ್ಯ ಇರಲಿಲ್ಲವೇನೋ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗುವ ನಾಡು
Next post ಕುಂವೀ ಅವರ “ಅರಮನೆ”

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

cheap jordans|wholesale air max|wholesale jordans|wholesale jewelry|wholesale jerseys