ಮರಳು ಮನೆ

ರಜಾ ದಿನದಂದು
ವೇಳೆ ಕಳೆಯಲೆಂದು
ಪುಟ್ಟ ಪುಟ್ಟಿ ಸೇರಿದರು
ತಮ್ಮ ತೋಟದತ್ತ ನಡೆದರು

ತೋಟದ ದಾರಿ ಮಧ್ಯೆ
ಹರಿಯುತ್ತಿತ್ತು ನದಿ
ನದಿಯ ಮರಳಿನಲ್ಲಿ
ಆಟವಾಡಿದರಲ್ಲಿ

ಪುಟ್ಟ ಹೇಳಿದ ಪುಟ್ಟಿಗೆ
ಮರಳಲಿ ಮನೆ ಕಟ್ಟಲು
ಮರಳಲಿ ಮನೆ ಹೇಗಣ್ಣ?
ಬೇಗ ತಿಳಿಸು ಪುಟ್ಟಣ್ಣ

ಹಸಿಯ ಮರಳಿನ ಮೇಲೆ
ಎಡ ಪಾದವಿಕ್ಕಿ ಕುಳಿತ
ಹಸಿ ಮರಳ ರಾಸಿಯನ್ನು
ಸುರಿದ ಕಾಲ ಮೇಲೆ

ಹಾಕಿಕೊಂಡ ಮರಳನ್ನು
ಕೈಗಳಿಂದ ತಟ್ಟಿದ
ಗಟ್ಟಿಯಾದ ಮರಳ ಗುಡ್ಡೆಯಿಂದ
ಮೆಲ್ಲನೆ ಕಾಲನು ಹೊರ ತೆಗೆದ

ಕಾಲು ತೆಗೆದ ಸ್ಥಳದಲ್ಲಿ
ಮರಳ ಮನೆಯ ಬಾಗಿಲ
ಚೆಂದವಿತ್ತು ನೋಡಲು
ಅದುವೆ ಪುಟ್ಟ ಗುಡಿಸಲು

ಅಣ್ಣ ಮಾಡಿದಂತೆ ಮನೆಯ
ಪುಟ್ಟಿ ಕೂಡ ಮಾಡಿದಳು
ತನ್ನ ಮರಳ ಮನೆಯ ನೋಡಿ
ಕುಣಿದು ಕುಣಿದು ನಲಿದಳು

ಬಿಸಿಲು ಕರಗಿ ಮಬ್ಬು ಮುಸುಕಿತು
ಕಪ್ಪನೆ ಮೋಡ ತೇಲಿ ಬಂದಿತ್ತು
ಅದನು ನೋಡಿದ ಪುಟ್ಟನಿಗೆ
ಬಂದಿತ್ತು ಜೀವ ಬಾಯಿಗೆ

ಕ್ಷಣದಲಿ ಆ ಮೋಡ ಕರಗಿ ನೀರಾಯಿತು
ಲಟ ಪಟ ಹನಿಯ ಸುರಿಸಹತ್ತಿತು
ಅವರ ಮುಂದೆ ಅವರ ಮರಳ ಮನೆ
ಕರಗಿ ಹೋಗಿ ಆಯ್ತು ನೀರ್ಮನೆ

ಮನೆ ಹಾಳಾದುದ ನೋಡಿದ ಪುಟ್ಟಿ
ಅತ್ತಳು ಬಿಕ್ಕಿ ಬಿಕ್ಕಿ
ತಂಗಿಯ ಸಂತೈಸುತ ಅವಳಣ್ಣ
ಅಪ್ಪನ ಬಳಿಬಿಟ್ಟ.

ಜೀವನ ಕೂಡ ಮರಳ ಮನೆ
ಹೀಗೇ ನಶಿಸಿ ಹೋಗುವುದು
ದುಃಖ ಸಂತಸ ಶಾಶ್ವತವಲ್ಲ
ಅರಿತು ನಡೆದರೆ ಸ್ವರ್ಗ ಸಿಗುವುದು
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...