ಮರಳು ಮನೆ

ರಜಾ ದಿನದಂದು
ವೇಳೆ ಕಳೆಯಲೆಂದು
ಪುಟ್ಟ ಪುಟ್ಟಿ ಸೇರಿದರು
ತಮ್ಮ ತೋಟದತ್ತ ನಡೆದರು

ತೋಟದ ದಾರಿ ಮಧ್ಯೆ
ಹರಿಯುತ್ತಿತ್ತು ನದಿ
ನದಿಯ ಮರಳಿನಲ್ಲಿ
ಆಟವಾಡಿದರಲ್ಲಿ

ಪುಟ್ಟ ಹೇಳಿದ ಪುಟ್ಟಿಗೆ
ಮರಳಲಿ ಮನೆ ಕಟ್ಟಲು
ಮರಳಲಿ ಮನೆ ಹೇಗಣ್ಣ?
ಬೇಗ ತಿಳಿಸು ಪುಟ್ಟಣ್ಣ

ಹಸಿಯ ಮರಳಿನ ಮೇಲೆ
ಎಡ ಪಾದವಿಕ್ಕಿ ಕುಳಿತ
ಹಸಿ ಮರಳ ರಾಸಿಯನ್ನು
ಸುರಿದ ಕಾಲ ಮೇಲೆ

ಹಾಕಿಕೊಂಡ ಮರಳನ್ನು
ಕೈಗಳಿಂದ ತಟ್ಟಿದ
ಗಟ್ಟಿಯಾದ ಮರಳ ಗುಡ್ಡೆಯಿಂದ
ಮೆಲ್ಲನೆ ಕಾಲನು ಹೊರ ತೆಗೆದ

ಕಾಲು ತೆಗೆದ ಸ್ಥಳದಲ್ಲಿ
ಮರಳ ಮನೆಯ ಬಾಗಿಲ
ಚೆಂದವಿತ್ತು ನೋಡಲು
ಅದುವೆ ಪುಟ್ಟ ಗುಡಿಸಲು

ಅಣ್ಣ ಮಾಡಿದಂತೆ ಮನೆಯ
ಪುಟ್ಟಿ ಕೂಡ ಮಾಡಿದಳು
ತನ್ನ ಮರಳ ಮನೆಯ ನೋಡಿ
ಕುಣಿದು ಕುಣಿದು ನಲಿದಳು

ಬಿಸಿಲು ಕರಗಿ ಮಬ್ಬು ಮುಸುಕಿತು
ಕಪ್ಪನೆ ಮೋಡ ತೇಲಿ ಬಂದಿತ್ತು
ಅದನು ನೋಡಿದ ಪುಟ್ಟನಿಗೆ
ಬಂದಿತ್ತು ಜೀವ ಬಾಯಿಗೆ

ಕ್ಷಣದಲಿ ಆ ಮೋಡ ಕರಗಿ ನೀರಾಯಿತು
ಲಟ ಪಟ ಹನಿಯ ಸುರಿಸಹತ್ತಿತು
ಅವರ ಮುಂದೆ ಅವರ ಮರಳ ಮನೆ
ಕರಗಿ ಹೋಗಿ ಆಯ್ತು ನೀರ್ಮನೆ

ಮನೆ ಹಾಳಾದುದ ನೋಡಿದ ಪುಟ್ಟಿ
ಅತ್ತಳು ಬಿಕ್ಕಿ ಬಿಕ್ಕಿ
ತಂಗಿಯ ಸಂತೈಸುತ ಅವಳಣ್ಣ
ಅಪ್ಪನ ಬಳಿಬಿಟ್ಟ.

ಜೀವನ ಕೂಡ ಮರಳ ಮನೆ
ಹೀಗೇ ನಶಿಸಿ ಹೋಗುವುದು
ದುಃಖ ಸಂತಸ ಶಾಶ್ವತವಲ್ಲ
ಅರಿತು ನಡೆದರೆ ಸ್ವರ್ಗ ಸಿಗುವುದು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...