ಮರಳು ಮನೆ

ರಜಾ ದಿನದಂದು
ವೇಳೆ ಕಳೆಯಲೆಂದು
ಪುಟ್ಟ ಪುಟ್ಟಿ ಸೇರಿದರು
ತಮ್ಮ ತೋಟದತ್ತ ನಡೆದರು

ತೋಟದ ದಾರಿ ಮಧ್ಯೆ
ಹರಿಯುತ್ತಿತ್ತು ನದಿ
ನದಿಯ ಮರಳಿನಲ್ಲಿ
ಆಟವಾಡಿದರಲ್ಲಿ

ಪುಟ್ಟ ಹೇಳಿದ ಪುಟ್ಟಿಗೆ
ಮರಳಲಿ ಮನೆ ಕಟ್ಟಲು
ಮರಳಲಿ ಮನೆ ಹೇಗಣ್ಣ?
ಬೇಗ ತಿಳಿಸು ಪುಟ್ಟಣ್ಣ

ಹಸಿಯ ಮರಳಿನ ಮೇಲೆ
ಎಡ ಪಾದವಿಕ್ಕಿ ಕುಳಿತ
ಹಸಿ ಮರಳ ರಾಸಿಯನ್ನು
ಸುರಿದ ಕಾಲ ಮೇಲೆ

ಹಾಕಿಕೊಂಡ ಮರಳನ್ನು
ಕೈಗಳಿಂದ ತಟ್ಟಿದ
ಗಟ್ಟಿಯಾದ ಮರಳ ಗುಡ್ಡೆಯಿಂದ
ಮೆಲ್ಲನೆ ಕಾಲನು ಹೊರ ತೆಗೆದ

ಕಾಲು ತೆಗೆದ ಸ್ಥಳದಲ್ಲಿ
ಮರಳ ಮನೆಯ ಬಾಗಿಲ
ಚೆಂದವಿತ್ತು ನೋಡಲು
ಅದುವೆ ಪುಟ್ಟ ಗುಡಿಸಲು

ಅಣ್ಣ ಮಾಡಿದಂತೆ ಮನೆಯ
ಪುಟ್ಟಿ ಕೂಡ ಮಾಡಿದಳು
ತನ್ನ ಮರಳ ಮನೆಯ ನೋಡಿ
ಕುಣಿದು ಕುಣಿದು ನಲಿದಳು

ಬಿಸಿಲು ಕರಗಿ ಮಬ್ಬು ಮುಸುಕಿತು
ಕಪ್ಪನೆ ಮೋಡ ತೇಲಿ ಬಂದಿತ್ತು
ಅದನು ನೋಡಿದ ಪುಟ್ಟನಿಗೆ
ಬಂದಿತ್ತು ಜೀವ ಬಾಯಿಗೆ

ಕ್ಷಣದಲಿ ಆ ಮೋಡ ಕರಗಿ ನೀರಾಯಿತು
ಲಟ ಪಟ ಹನಿಯ ಸುರಿಸಹತ್ತಿತು
ಅವರ ಮುಂದೆ ಅವರ ಮರಳ ಮನೆ
ಕರಗಿ ಹೋಗಿ ಆಯ್ತು ನೀರ್ಮನೆ

ಮನೆ ಹಾಳಾದುದ ನೋಡಿದ ಪುಟ್ಟಿ
ಅತ್ತಳು ಬಿಕ್ಕಿ ಬಿಕ್ಕಿ
ತಂಗಿಯ ಸಂತೈಸುತ ಅವಳಣ್ಣ
ಅಪ್ಪನ ಬಳಿಬಿಟ್ಟ.

ಜೀವನ ಕೂಡ ಮರಳ ಮನೆ
ಹೀಗೇ ನಶಿಸಿ ಹೋಗುವುದು
ದುಃಖ ಸಂತಸ ಶಾಶ್ವತವಲ್ಲ
ಅರಿತು ನಡೆದರೆ ಸ್ವರ್ಗ ಸಿಗುವುದು
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...