ಹಣ್ಣ ಬಂದಾವ ಹಣ್ಣ

ಹಣ್ಣ ಬಂದಾವ ಹೆಣ್ಣಾ ಮಗಿಯ ಮಾವಿನಽ ಹಣ್ಣ ಜಾಣಿ||
ಹಣ್ಣ ಕೊಳತೇವ ಹಣ್ಣಿನ ಬಿಲಿವಯ ಹೇಳ ಜಾಣಿ ||೧||

ಬೆಲಿಯ ಹೇಳುಽವ ಜಾಣಾ ಮಲ್ಲಾಡ ದೇಶಕ್ಹೋಗಿದನಲ್ಲೋ ಜಾಣಾ ||
ತಿಳಿಯಲಾರಽದ ಬೆಲಿಯ ನಾ ಏನ್ಹೇಳಾಲೊ ಜಾಣಾ ||೨||

ಕೆರಿಯ ಪಾಳ್ಯದ ಮ್ಯಾಲ ಕರಿಽ ಕಬ್ಬ ಹೆಚ್ಚ್ಯಾರಲಮ್ಮಽ ಜಾಣಿ ||
ಅದರಾಗ ತುಡಽಗ ದನ ಹೊಗತಾವಲಮಽ ಜಾಣಿ ||೩||

ತುಡಽಗ ದನ ಹೊಳ್ಳರ ಹೊಡದಾರ ಬಡೆದಾರೋ ಜಾಣಾ ||
ನಾಲೂರ ಕೂಡಿ ಬುದ್ದೀ ಹೇಳುವರಲ್ಲೋ ಜಾಣಾ ||೪||

ಭಾಂಯಾದರ ಕಟ್ಟ್ಯಾರಲ್ಲ ಅರುಟಿಗ್ಯಾದರಿಟ್ಟಾರಲಮಽ ಜಾಣಿ ||
ಅದರಾಗ ದಾಽನ ಧರ್ಮ ಇಲ್ಲ ಏನಽ ಜಾಣಿ ||೫||

ಅನ್ನ ವಸ್ತರು ದಾನ ಬೆಳ್ಳಿ ಬಂಗಾರ ದಾನೋ ಜಾಣಾ ||
ಹೆಣ್ಣ ಮಕ್ಕಳ ದಾನಾ ಕೊಡುಽವರೇನೋ ಜಾಣಾ ||೬||

ಗುಡಿಯಾದರು ಕಟ್ಟ್ಯಾರಲ್ಲ ಕಳಸಾದರಿಟ್ಟಾರಲಮಽ ಜಾಣಿ ||
ಕಣ್ಣೊತ್ತಿ ಕಳಸಗೋಳು ಒಡೆದಾವಲಮಽಽ ಜಾಣಿ ||೭||

ಒಡೆದಾರೆ ಒಡಿಯಾಲಿ ಒಡೆದುನೆ ಛಲ್ಲುವರೋ ಜಾಣಾ ||
ಒಡಹುಟ್ಟಿದಣ್ಣನಾಗಿ ಇರಽನೆ ಹೋಗೋ ಜಾಣಾ ||೮||
*****

ಹೆಂಡತಿಯನ್ನು ಅಗಲಿ ಬಹಳ ದಿನ ವ್ಯಾಪಾರಕ್ಕೆಂದು ಮಲ್ಲಾಡ ದೇಶಕ್ಕೆ ಹೋಗಿದ್ದ ಶೆಟ್ಟಿಯು ಮರಳಿ ಬಂದು ಬೇರೆ ವೇಷದಿಂದ ತನ್ನ ಮಡದಿಯ ಪಾತಿವ್ರತ್ಯವನ್ನು ಪರೀಕ್ಷಿಸುತ್ತಾನೆ. ಈ ಇಡೀ ಹಾಡಿನಲ್ಲಿ-ಒಂದು ನುಡಿಯಲ್ಲಿ ಅವನ ಕೌಶಲ್ಯದ ಪ್ರಶ್ನವೂ ಇನ್ನೊಂದು ನುಡಿಯಲ್ಲಿ ಅವಳ ಅದೇ ಬಗೆಯ ಉತ್ತರವೂ ಇನೆ.

ಛಂದಸ್ಸು:- ಸಾಂಗತ್ಯಕ್ಕೆ ಸಮೀಪವಾದುದು.

ಶಬ್ದಪ್ರಯೋಗಗಳು:– ಪಾಳ್ಯಾ=ದಂಡೆ. ಕೊಳತೇವು=ಕೊಂಡುಕೊಳ್ಳುತ್ತೇವೆ. ನಾಲೂರ=ನಾಲ್ವರು. ಭಾಂಯಿ=ಬಾವಿ. ಅರೂಟಿಗಿ=ಆರವಟ್ಟಿಗೆ. ಎಲಮ=ಏನೇ. ಇರಽನೆ ಮತ್ತು ಒಡದೂನೆ ಎಂಬಲ್ಲಿ `ನೆ’ ಎಂಬುದು ಪದ ಪೂರಣಕ್ಕಾಗಿ ಬಂದ ಅರ್ಥವಿಲ್ಲದ ಅಕ್ಷರವು. ಹೆಣ್ಣುಮಕ್ಕಳ ಹಾಡುಗಳಲ್ಲೆಲ್ಲಾ ಇದು ಬಹಳ ಕಡೆಗೆ ಬರುತ್ತದೆ. ಇದಕ್ಕೆ ಅರ್ಧಹಚ್ಚುವುದೇ ಅದರೆ `ರೆ’ ಎಂಬ ಅಕ್ಷರದಂತೆ ಇದನ್ನು ತಿಳಿದುಕೊಳ್ಳಬಹುದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎತ್ತ ಸಾಗಿದೆಯೊ ಕನ್ನಡ ರಥವು
Next post ಅತಿ ಬೇಡ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys