Home / ಕವನ / ಕವಿತೆ / ಹಣ್ಣ ಬಂದಾವ ಹಣ್ಣ

ಹಣ್ಣ ಬಂದಾವ ಹಣ್ಣ

ಹಣ್ಣ ಬಂದಾವ ಹೆಣ್ಣಾ ಮಗಿಯ ಮಾವಿನಽ ಹಣ್ಣ ಜಾಣಿ||
ಹಣ್ಣ ಕೊಳತೇವ ಹಣ್ಣಿನ ಬಿಲಿವಯ ಹೇಳ ಜಾಣಿ ||೧||

ಬೆಲಿಯ ಹೇಳುಽವ ಜಾಣಾ ಮಲ್ಲಾಡ ದೇಶಕ್ಹೋಗಿದನಲ್ಲೋ ಜಾಣಾ ||
ತಿಳಿಯಲಾರಽದ ಬೆಲಿಯ ನಾ ಏನ್ಹೇಳಾಲೊ ಜಾಣಾ ||೨||

ಕೆರಿಯ ಪಾಳ್ಯದ ಮ್ಯಾಲ ಕರಿಽ ಕಬ್ಬ ಹೆಚ್ಚ್ಯಾರಲಮ್ಮಽ ಜಾಣಿ ||
ಅದರಾಗ ತುಡಽಗ ದನ ಹೊಗತಾವಲಮಽ ಜಾಣಿ ||೩||

ತುಡಽಗ ದನ ಹೊಳ್ಳರ ಹೊಡದಾರ ಬಡೆದಾರೋ ಜಾಣಾ ||
ನಾಲೂರ ಕೂಡಿ ಬುದ್ದೀ ಹೇಳುವರಲ್ಲೋ ಜಾಣಾ ||೪||

ಭಾಂಯಾದರ ಕಟ್ಟ್ಯಾರಲ್ಲ ಅರುಟಿಗ್ಯಾದರಿಟ್ಟಾರಲಮಽ ಜಾಣಿ ||
ಅದರಾಗ ದಾಽನ ಧರ್ಮ ಇಲ್ಲ ಏನಽ ಜಾಣಿ ||೫||

ಅನ್ನ ವಸ್ತರು ದಾನ ಬೆಳ್ಳಿ ಬಂಗಾರ ದಾನೋ ಜಾಣಾ ||
ಹೆಣ್ಣ ಮಕ್ಕಳ ದಾನಾ ಕೊಡುಽವರೇನೋ ಜಾಣಾ ||೬||

ಗುಡಿಯಾದರು ಕಟ್ಟ್ಯಾರಲ್ಲ ಕಳಸಾದರಿಟ್ಟಾರಲಮಽ ಜಾಣಿ ||
ಕಣ್ಣೊತ್ತಿ ಕಳಸಗೋಳು ಒಡೆದಾವಲಮಽಽ ಜಾಣಿ ||೭||

ಒಡೆದಾರೆ ಒಡಿಯಾಲಿ ಒಡೆದುನೆ ಛಲ್ಲುವರೋ ಜಾಣಾ ||
ಒಡಹುಟ್ಟಿದಣ್ಣನಾಗಿ ಇರಽನೆ ಹೋಗೋ ಜಾಣಾ ||೮||
*****

ಹೆಂಡತಿಯನ್ನು ಅಗಲಿ ಬಹಳ ದಿನ ವ್ಯಾಪಾರಕ್ಕೆಂದು ಮಲ್ಲಾಡ ದೇಶಕ್ಕೆ ಹೋಗಿದ್ದ ಶೆಟ್ಟಿಯು ಮರಳಿ ಬಂದು ಬೇರೆ ವೇಷದಿಂದ ತನ್ನ ಮಡದಿಯ ಪಾತಿವ್ರತ್ಯವನ್ನು ಪರೀಕ್ಷಿಸುತ್ತಾನೆ. ಈ ಇಡೀ ಹಾಡಿನಲ್ಲಿ-ಒಂದು ನುಡಿಯಲ್ಲಿ ಅವನ ಕೌಶಲ್ಯದ ಪ್ರಶ್ನವೂ ಇನ್ನೊಂದು ನುಡಿಯಲ್ಲಿ ಅವಳ ಅದೇ ಬಗೆಯ ಉತ್ತರವೂ ಇನೆ.

ಛಂದಸ್ಸು:- ಸಾಂಗತ್ಯಕ್ಕೆ ಸಮೀಪವಾದುದು.

ಶಬ್ದಪ್ರಯೋಗಗಳು:– ಪಾಳ್ಯಾ=ದಂಡೆ. ಕೊಳತೇವು=ಕೊಂಡುಕೊಳ್ಳುತ್ತೇವೆ. ನಾಲೂರ=ನಾಲ್ವರು. ಭಾಂಯಿ=ಬಾವಿ. ಅರೂಟಿಗಿ=ಆರವಟ್ಟಿಗೆ. ಎಲಮ=ಏನೇ. ಇರಽನೆ ಮತ್ತು ಒಡದೂನೆ ಎಂಬಲ್ಲಿ `ನೆ’ ಎಂಬುದು ಪದ ಪೂರಣಕ್ಕಾಗಿ ಬಂದ ಅರ್ಥವಿಲ್ಲದ ಅಕ್ಷರವು. ಹೆಣ್ಣುಮಕ್ಕಳ ಹಾಡುಗಳಲ್ಲೆಲ್ಲಾ ಇದು ಬಹಳ ಕಡೆಗೆ ಬರುತ್ತದೆ. ಇದಕ್ಕೆ ಅರ್ಧಹಚ್ಚುವುದೇ ಅದರೆ `ರೆ’ ಎಂಬ ಅಕ್ಷರದಂತೆ ಇದನ್ನು ತಿಳಿದುಕೊಳ್ಳಬಹುದು.

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...