Home / ಕವನ / ಕವಿತೆ / ಹಣ್ಣ ಬಂದಾವ ಹಣ್ಣ

ಹಣ್ಣ ಬಂದಾವ ಹಣ್ಣ

ಹಣ್ಣ ಬಂದಾವ ಹೆಣ್ಣಾ ಮಗಿಯ ಮಾವಿನಽ ಹಣ್ಣ ಜಾಣಿ||
ಹಣ್ಣ ಕೊಳತೇವ ಹಣ್ಣಿನ ಬಿಲಿವಯ ಹೇಳ ಜಾಣಿ ||೧||

ಬೆಲಿಯ ಹೇಳುಽವ ಜಾಣಾ ಮಲ್ಲಾಡ ದೇಶಕ್ಹೋಗಿದನಲ್ಲೋ ಜಾಣಾ ||
ತಿಳಿಯಲಾರಽದ ಬೆಲಿಯ ನಾ ಏನ್ಹೇಳಾಲೊ ಜಾಣಾ ||೨||

ಕೆರಿಯ ಪಾಳ್ಯದ ಮ್ಯಾಲ ಕರಿಽ ಕಬ್ಬ ಹೆಚ್ಚ್ಯಾರಲಮ್ಮಽ ಜಾಣಿ ||
ಅದರಾಗ ತುಡಽಗ ದನ ಹೊಗತಾವಲಮಽ ಜಾಣಿ ||೩||

ತುಡಽಗ ದನ ಹೊಳ್ಳರ ಹೊಡದಾರ ಬಡೆದಾರೋ ಜಾಣಾ ||
ನಾಲೂರ ಕೂಡಿ ಬುದ್ದೀ ಹೇಳುವರಲ್ಲೋ ಜಾಣಾ ||೪||

ಭಾಂಯಾದರ ಕಟ್ಟ್ಯಾರಲ್ಲ ಅರುಟಿಗ್ಯಾದರಿಟ್ಟಾರಲಮಽ ಜಾಣಿ ||
ಅದರಾಗ ದಾಽನ ಧರ್ಮ ಇಲ್ಲ ಏನಽ ಜಾಣಿ ||೫||

ಅನ್ನ ವಸ್ತರು ದಾನ ಬೆಳ್ಳಿ ಬಂಗಾರ ದಾನೋ ಜಾಣಾ ||
ಹೆಣ್ಣ ಮಕ್ಕಳ ದಾನಾ ಕೊಡುಽವರೇನೋ ಜಾಣಾ ||೬||

ಗುಡಿಯಾದರು ಕಟ್ಟ್ಯಾರಲ್ಲ ಕಳಸಾದರಿಟ್ಟಾರಲಮಽ ಜಾಣಿ ||
ಕಣ್ಣೊತ್ತಿ ಕಳಸಗೋಳು ಒಡೆದಾವಲಮಽಽ ಜಾಣಿ ||೭||

ಒಡೆದಾರೆ ಒಡಿಯಾಲಿ ಒಡೆದುನೆ ಛಲ್ಲುವರೋ ಜಾಣಾ ||
ಒಡಹುಟ್ಟಿದಣ್ಣನಾಗಿ ಇರಽನೆ ಹೋಗೋ ಜಾಣಾ ||೮||
*****

ಹೆಂಡತಿಯನ್ನು ಅಗಲಿ ಬಹಳ ದಿನ ವ್ಯಾಪಾರಕ್ಕೆಂದು ಮಲ್ಲಾಡ ದೇಶಕ್ಕೆ ಹೋಗಿದ್ದ ಶೆಟ್ಟಿಯು ಮರಳಿ ಬಂದು ಬೇರೆ ವೇಷದಿಂದ ತನ್ನ ಮಡದಿಯ ಪಾತಿವ್ರತ್ಯವನ್ನು ಪರೀಕ್ಷಿಸುತ್ತಾನೆ. ಈ ಇಡೀ ಹಾಡಿನಲ್ಲಿ-ಒಂದು ನುಡಿಯಲ್ಲಿ ಅವನ ಕೌಶಲ್ಯದ ಪ್ರಶ್ನವೂ ಇನ್ನೊಂದು ನುಡಿಯಲ್ಲಿ ಅವಳ ಅದೇ ಬಗೆಯ ಉತ್ತರವೂ ಇನೆ.

ಛಂದಸ್ಸು:- ಸಾಂಗತ್ಯಕ್ಕೆ ಸಮೀಪವಾದುದು.

ಶಬ್ದಪ್ರಯೋಗಗಳು:– ಪಾಳ್ಯಾ=ದಂಡೆ. ಕೊಳತೇವು=ಕೊಂಡುಕೊಳ್ಳುತ್ತೇವೆ. ನಾಲೂರ=ನಾಲ್ವರು. ಭಾಂಯಿ=ಬಾವಿ. ಅರೂಟಿಗಿ=ಆರವಟ್ಟಿಗೆ. ಎಲಮ=ಏನೇ. ಇರಽನೆ ಮತ್ತು ಒಡದೂನೆ ಎಂಬಲ್ಲಿ `ನೆ’ ಎಂಬುದು ಪದ ಪೂರಣಕ್ಕಾಗಿ ಬಂದ ಅರ್ಥವಿಲ್ಲದ ಅಕ್ಷರವು. ಹೆಣ್ಣುಮಕ್ಕಳ ಹಾಡುಗಳಲ್ಲೆಲ್ಲಾ ಇದು ಬಹಳ ಕಡೆಗೆ ಬರುತ್ತದೆ. ಇದಕ್ಕೆ ಅರ್ಧಹಚ್ಚುವುದೇ ಅದರೆ `ರೆ’ ಎಂಬ ಅಕ್ಷರದಂತೆ ಇದನ್ನು ತಿಳಿದುಕೊಳ್ಳಬಹುದು.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...