Home / ಕವನ / ಕವಿತೆ / ಅವ್ವನ ಸಂಸ್ಕೃತಿ

ಅವ್ವನ ಸಂಸ್ಕೃತಿ

ಅಮ್ಮ ಒಳಗೊಳಗೇ ಬಂದಳು ಬೆಳೆಸಿದಳು
ಕಠಿಣ ಕಬ್ಬಿಣದ ಕಷ್ಟ ನೋವುಗಳ ಸಹಿಸಿ.
ಕರಗಿಸಿಕೊಂಡಳು ಒಡಲೊಳಗೆ ಕುದಿವ ಲಾವಾ
ಶತಶತಮಾನಗಳ ತಂಪು ತಗುಲಿ ತಂಗಾಳಿ
ತಣ್ಣಗಾಗುತ್ತ ಭೂಮಿಯಾದಳು ಅಮ್ಮ
ಬೆಳೆಸಿದಳು ಮಹಾ ವೃಕ್ಷಗಳ ಅವಳು
ಬೇರು ಬಿಡಿಸಿದಳು ಒಡಲಲ್ಲಿ
ಲೋಕಕ್ಕೆ ತಂಪು ನೀಡಿದಳು
ಗುಡ್ಡಗಾಡುಗಳಲ್ಲಿ ಬುಡಕಟ್ಟುಗಳ ನೆಲೆ
ಪೋಷಿಸಿದಳು ತಂಪೆರೆದಳು ಅವಳು
ಜೀರುಂಡೆಗಳ ಝೇಂಕಾರ ಕೇಳುತ್ತ
ಹಲಸು ಕಿತ್ತಳೆ ಮಾಮರಗಳ ಬೆಳೆಸಿದಳು
ಋತುಮನಗಳ ಪರಿಮಳ ಸೂಸಿದಳು
ಒಣಗಿದೆಲೆಗಳ ಕೊಳೆತ ವಾಸನೆಯಲ್ಲಿ
ನಾಗರೀಕತೆಗಳ ಸುಳಿವಿಲ್ಲ
ಅಮ್ಮನ ಶಾಂತ ಸೆರಗು ಮಾತ್ರ
ದೂರದೂರದ ತನಕ ಹಬ್ಬಿದ ಶಾಂತತೆ
ಹುಲ್ಲು ಹಾಸಿನ ಮೇಲೆ ಅವ್ವನ ಸರಳ ಮುಗ್ಧತೆ
ಬಣ್ಣಬಣ್ಣದಲಿ ಕಣ್ಣು ಮಿಟುಕಿಸುವ ಕಮನಬಿಲ್ಲು
ನೆರಳು ನೀಡಲಾರದು ಭೂತಾಯಿ ಒಡಲಿಗೆ
ಮೋಡಗಳ ನೆರಳು ಬೆಳಕಿನಾಟ ಮಧ್ಯಾಹ್ನ
ಅಮ್ಮನ ಏಕಾಕಿತನಗಳಿಗೆ ತಿವಿಯುವ ಖಾಲಿತನವಿಲ್ಲ
ಬೇಸರವಿಲ್ಲ ಬೆಟ್ಟಕ್ಕೆ ಎಂದಿಗೂ ಕಾಲ ಹೊರೆಯಾಗಿಲ್ಲ
ಒಂದೇ ತರಹದ ಏಕತಾನತೆಯ ಚಿಂತೆ ಅವಳಿಗಿಲ್ಲ
ಅವಳು ಹೆತ್ತು ಹೊತ್ತ ಗರ್ಭದ ಹೊಕ್ಕಳಬಳ್ಳಿ
ಅನನ್ಯ ತಲಸ್ಪರ್ಶಿ ತಾಯ್ತನದ ಮುಖಕಾಂತಿ,
ಅಮ್ಮ ತಟ್ಟಿದ ರೊಟ್ಟಿ ಸುಡುವ ಹೆಂಚಿನ ತಳದಲ್ಲಿ
ಮಿಂಚು ಬಳ್ಳಿಯ ಸರಿದಾಟ, ಕಣ್ಣಮುಚ್ಚಾಲೆ
ಉರಿವ ಕಟ್ಟಿಗೆಯ ಬಿಸಿ ತುಂಬಿದ ಸುವಾಸನೆ
ಆಪ್ತ ದೀಪದ ಬುಡ್ಡಿಯ ಮಂದ ಬೆಳಕು,
ಚಿತ್ರಿಸುವ ತರತರದ ನೆರಳ ಚಿತ್ತಾರಗಳು
ನೋವು ಸಂಕಟಗಳ ಮದ್ಯ ಮಿನುಗಿ
ಲಯವಾದ ಸೂರ್ಯ ಕಿರಣಗಳನ್ನು
ಮುತ್ತಿಟ್ಟು ಋತುಗಳ ಅಪ್ಪುಗೆಯಲ್ಲಿ
ಪ್ರಕೃತಿ ಮಲಗಿತ್ತು ಸುಖ ನಿದ್ರೆಯಲ್ಲಿ
ಅಮ್ಮನ ಮೆಚ್ಚಗಿನ ಮೃದು ಹಚ್ಚಡವ ಹೊದ್ದು
ಒಲೆಯಲ್ಲಿನ ನಿಗಿನಿಗಿಸುವ ಬೆಂಕಿ ಕೆಂಡದಲ್ಲಿ
ಅಮ್ಮನ ನೋವಿನ ನೆಲೆಗಳ ಪ್ರತಿಫಲನವಿತ್ತು
ದೈತ್ಯ ನಿಸರ್ಗದ ನಿಡಿದಾದ ಟೊಂಗೆಗಳಲ್ಲಿ
ಅಮ್ಮನ ಪ್ರೀತಿಯ ಜೀವಜಾಲವಿತ್ತು
ಬೆಟ್ಟದ ನಿಶ್ಚಲ ಕಲ್ಲು ಮಣ್ಣುಗಳಲ್ಲಿ
ಧರ್ಮದರ್ಶಿಗಳ ನೆರಳಿತ್ತು
ಶತಶತಮಾನಗಳಿಂದ ಗಟ್ಟಿಯಾಗಿ ನಿಂತ
ಧೃಢಚಿತ್ತದ ಬೆಟ್ಟದ ಕಲ್ಲುಗಳಲ್ಲಿ
ಅಮ್ಮ ಕಟ್ಟಿದ ಬುಡಕಟ್ಟುಗಳಿದ್ದವು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...