ವಚನ ವಿಚಾರ – ಎಲ್ಲರೂ ಓದುವುದು ವಚನ

ವಚನ ವಿಚಾರ – ಎಲ್ಲರೂ ಓದುವುದು ವಚನ

ಎಲ್ಲರೂ ಓದುವುದು ವಚನಂಗಳು
ಎಲ್ಲರೂ ನುಡಿವರು ಬೊಮ್ಮವ
ಎಲ್ಲರೂ ಕೇಳುವುದು ವಚನಂಗಳು
ಹೇಳುವಾತ ಗುರುವಲ್ಲ
ಕೇಳುವಾತ ಶಿಷ್ಯನಲ್ಲ
ಹೇಳಿಹೆ ಕೇಳಿಹೆನೆಂಬನ್ನಕ್ಕರ
ವಿರಕ್ತಿಸ್ಥಲಕ್ಕೆ ಭಂಗ ನೋಡಾ

[ಬೊಮ್ಮ-ಬ್ರಹ್ಮ]

ಅಮುಗೆ ರಾಯಮ್ಮನ ವಚನ. ಎಲ್ಲರೂ ವಚನ ಓದುತ್ತಾರೆ, ಎಲ್ಲರೂ ವಚನ ಕೇಳುತ್ತಾರೆ, ಬ್ರಹ್ಮ ಪರಮಾತ್ಮ ಇತ್ಯಾದಿ ಎಲ್ಲರೂ ಮಾತಾಡುತ್ತಾರೆ. ಆದರೆ ಹೇಳುವವನು ಗುರುವಲ್ಲ, ಕೇಳುವವನು ಶಿಷ್ಯನಲ್ಲ. ಹೇಳಿದೆ, ಕೇಳಿದೆ ಎಂಬ ಭಾವ ಇರುವವರೆಗೆ ವಿ-ರಕ್ತಿ, ಲೋಕದ ವ್ಯವಹಾರಗಳಿಗೆ ಭಾವಗಳಿಗೆ ಅಂಟಿಕೊಳ್ಳದೆ ಇರುವ ಗುಣ, ಸಾಧ್ಯವಾಗುವುದಿಲ್ಲ.

ನಮ್ಮ ನಿಮ್ಮಂಥವರನ್ನೇ ಕುರಿತು ಹೇಳುತ್ತಿದ್ದಾಳೆ ಅಲ್ಲವೇ ರಾಯಮ್ಮ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುರುಸಾಮ್ರಾಜ್ಯದ ಯುವರಾಜ
Next post ಬಾಹುಬಲಿ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…