ವಚನ ವಿಚಾರ – ಎಲ್ಲರೂ ಓದುವುದು ವಚನ

ವಚನ ವಿಚಾರ – ಎಲ್ಲರೂ ಓದುವುದು ವಚನ

ಎಲ್ಲರೂ ಓದುವುದು ವಚನಂಗಳು
ಎಲ್ಲರೂ ನುಡಿವರು ಬೊಮ್ಮವ
ಎಲ್ಲರೂ ಕೇಳುವುದು ವಚನಂಗಳು
ಹೇಳುವಾತ ಗುರುವಲ್ಲ
ಕೇಳುವಾತ ಶಿಷ್ಯನಲ್ಲ
ಹೇಳಿಹೆ ಕೇಳಿಹೆನೆಂಬನ್ನಕ್ಕರ
ವಿರಕ್ತಿಸ್ಥಲಕ್ಕೆ ಭಂಗ ನೋಡಾ

[ಬೊಮ್ಮ-ಬ್ರಹ್ಮ]

ಅಮುಗೆ ರಾಯಮ್ಮನ ವಚನ. ಎಲ್ಲರೂ ವಚನ ಓದುತ್ತಾರೆ, ಎಲ್ಲರೂ ವಚನ ಕೇಳುತ್ತಾರೆ, ಬ್ರಹ್ಮ ಪರಮಾತ್ಮ ಇತ್ಯಾದಿ ಎಲ್ಲರೂ ಮಾತಾಡುತ್ತಾರೆ. ಆದರೆ ಹೇಳುವವನು ಗುರುವಲ್ಲ, ಕೇಳುವವನು ಶಿಷ್ಯನಲ್ಲ. ಹೇಳಿದೆ, ಕೇಳಿದೆ ಎಂಬ ಭಾವ ಇರುವವರೆಗೆ ವಿ-ರಕ್ತಿ, ಲೋಕದ ವ್ಯವಹಾರಗಳಿಗೆ ಭಾವಗಳಿಗೆ ಅಂಟಿಕೊಳ್ಳದೆ ಇರುವ ಗುಣ, ಸಾಧ್ಯವಾಗುವುದಿಲ್ಲ.

ನಮ್ಮ ನಿಮ್ಮಂಥವರನ್ನೇ ಕುರಿತು ಹೇಳುತ್ತಿದ್ದಾಳೆ ಅಲ್ಲವೇ ರಾಯಮ್ಮ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುರುಸಾಮ್ರಾಜ್ಯದ ಯುವರಾಜ
Next post ಬಾಹುಬಲಿ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

cheap jordans|wholesale air max|wholesale jordans|wholesale jewelry|wholesale jerseys