ಆ ಹುಡುಗಿ

ಜಗಮಗಿಸುವ ಬೆಳಕಲ್ಲಿ
ಜರಿಸೀರೆಯ ಭಾರಹೊತ್ತು
ನಿಂತಿದ್ದಳು ಮದುಮಗಳು
ಭವಿಷ್ಯದ ಕನಸುಗಳ ಹೊತ್ತು!
ಸಾಕ್ಷಿಯಾಗಿದ್ದವು
ಸಾವಿರಾರು ಕಣ್ಣುಗಳು
ಹರಸಿದ್ದವು
ನೂರಾರು ಹೃದಯಗಳು.
ಪತಿಯಾಗುವವನ ಕೈ ಹಿಡಿದು
ಸಪ್ತಪದಿಯ ತುಳಿವಾಗ
ಅರಳಿತ್ತು ಪ್ರೀತಿ. ರಂಗಾಗಿತ್ತು ಮನಸ್ಸು
ಒಲವು ಜೇನಾಗಿತ್ತು. ಸ್ವರ್ಶ ಬಿಸಿಯಾಗಿತ್ತು.
ನಿಂತಲ್ಲಿ ಕೂತಲ್ಲಿ ಅವನದ್ದೇ ನೆನಪಿತ್ತು.
ಬಾಳ ಮುಂಜಾವಿನಲ್ಲಿ ರವಿಯು ಮೂಡಿದ್ದ.
ಉಷೆಯ ಕೆಂಪಾಗಿಸಿದ್ದ.
ಆದರೆ ಕನಸುಗಳು ನನಸಾಗಲಿಲ್ಲ.
ಹರಕೆಗಳು ಸಾಕಾರವಾಗಲಿಲ್ಲ.
ಮಧ್ಯಾಹ್ನದ ಕಾದ ಉರಿಯಲಿ ಅವಳ ಸುಟ್ಟು,
ಮುಸ್ಸಂಜೆಯ ರಂಗಿನಲಿ ಅವಳ ಮರೆತು
ಅವನು ಮುನ್ನಡೆದಿದ್ದ, ಅವಳ ಹಿಂದೆಯೇ ಬಿಟ್ಟು;
ಕನಸುಗಳ ಹೊತ್ತು ಜೀವನಕೆ ಕಾಲಿಟ್ಟ
ಆ ಹುಡುಗಿ ತನ್ನಿರವ ಮರೆತು
ವರ್ತಮಾನದಲಿ ಕರಗಿ ಹೋಗಿದ್ದಳು
ಮೌನವಾಗಿದ್ದಳು
ಜೀವಿಸುವುದನ್ನೇ ಮರೆತು!
ಇದಕ್ಕಾರೂ ಸಾಕ್ಷಿಯಾಗಲಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ವಾಣಿಯ ನೀನು ವರಿಸಿದವನೇನಲ್ಲ
Next post ಕಟ್ಟು

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys