Home / ಕವನ / ಕವಿತೆ / ಆ ಹುಡುಗಿ

ಆ ಹುಡುಗಿ

ಜಗಮಗಿಸುವ ಬೆಳಕಲ್ಲಿ
ಜರಿಸೀರೆಯ ಭಾರಹೊತ್ತು
ನಿಂತಿದ್ದಳು ಮದುಮಗಳು
ಭವಿಷ್ಯದ ಕನಸುಗಳ ಹೊತ್ತು!
ಸಾಕ್ಷಿಯಾಗಿದ್ದವು
ಸಾವಿರಾರು ಕಣ್ಣುಗಳು
ಹರಸಿದ್ದವು
ನೂರಾರು ಹೃದಯಗಳು.
ಪತಿಯಾಗುವವನ ಕೈ ಹಿಡಿದು
ಸಪ್ತಪದಿಯ ತುಳಿವಾಗ
ಅರಳಿತ್ತು ಪ್ರೀತಿ. ರಂಗಾಗಿತ್ತು ಮನಸ್ಸು
ಒಲವು ಜೇನಾಗಿತ್ತು. ಸ್ವರ್ಶ ಬಿಸಿಯಾಗಿತ್ತು.
ನಿಂತಲ್ಲಿ ಕೂತಲ್ಲಿ ಅವನದ್ದೇ ನೆನಪಿತ್ತು.
ಬಾಳ ಮುಂಜಾವಿನಲ್ಲಿ ರವಿಯು ಮೂಡಿದ್ದ.
ಉಷೆಯ ಕೆಂಪಾಗಿಸಿದ್ದ.
ಆದರೆ ಕನಸುಗಳು ನನಸಾಗಲಿಲ್ಲ.
ಹರಕೆಗಳು ಸಾಕಾರವಾಗಲಿಲ್ಲ.
ಮಧ್ಯಾಹ್ನದ ಕಾದ ಉರಿಯಲಿ ಅವಳ ಸುಟ್ಟು,
ಮುಸ್ಸಂಜೆಯ ರಂಗಿನಲಿ ಅವಳ ಮರೆತು
ಅವನು ಮುನ್ನಡೆದಿದ್ದ, ಅವಳ ಹಿಂದೆಯೇ ಬಿಟ್ಟು;
ಕನಸುಗಳ ಹೊತ್ತು ಜೀವನಕೆ ಕಾಲಿಟ್ಟ
ಆ ಹುಡುಗಿ ತನ್ನಿರವ ಮರೆತು
ವರ್ತಮಾನದಲಿ ಕರಗಿ ಹೋಗಿದ್ದಳು
ಮೌನವಾಗಿದ್ದಳು
ಜೀವಿಸುವುದನ್ನೇ ಮರೆತು!
ಇದಕ್ಕಾರೂ ಸಾಕ್ಷಿಯಾಗಲಿಲ್ಲ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ