ಜಗಮಗಿಸುವ ಬೆಳಕಲ್ಲಿ
ಜರಿಸೀರೆಯ ಭಾರಹೊತ್ತು
ನಿಂತಿದ್ದಳು ಮದುಮಗಳು
ಭವಿಷ್ಯದ ಕನಸುಗಳ ಹೊತ್ತು!
ಸಾಕ್ಷಿಯಾಗಿದ್ದವು
ಸಾವಿರಾರು ಕಣ್ಣುಗಳು
ಹರಸಿದ್ದವು
ನೂರಾರು ಹೃದಯಗಳು.
ಪತಿಯಾಗುವವನ ಕೈ ಹಿಡಿದು
ಸಪ್ತಪದಿಯ ತುಳಿವಾಗ
ಅರಳಿತ್ತು ಪ್ರೀತಿ. ರಂಗಾಗಿತ್ತು ಮನಸ್ಸು
ಒಲವು ಜೇನಾಗಿತ್ತು. ಸ್ವರ್ಶ ಬಿಸಿಯಾಗಿತ್ತು.
ನಿಂತಲ್ಲಿ ಕೂತಲ್ಲಿ ಅವನದ್ದೇ ನೆನಪಿತ್ತು.
ಬಾಳ ಮುಂಜಾವಿನಲ್ಲಿ ರವಿಯು ಮೂಡಿದ್ದ.
ಉಷೆಯ ಕೆಂಪಾಗಿಸಿದ್ದ.
ಆದರೆ ಕನಸುಗಳು ನನಸಾಗಲಿಲ್ಲ.
ಹರಕೆಗಳು ಸಾಕಾರವಾಗಲಿಲ್ಲ.
ಮಧ್ಯಾಹ್ನದ ಕಾದ ಉರಿಯಲಿ ಅವಳ ಸುಟ್ಟು,
ಮುಸ್ಸಂಜೆಯ ರಂಗಿನಲಿ ಅವಳ ಮರೆತು
ಅವನು ಮುನ್ನಡೆದಿದ್ದ, ಅವಳ ಹಿಂದೆಯೇ ಬಿಟ್ಟು;
ಕನಸುಗಳ ಹೊತ್ತು ಜೀವನಕೆ ಕಾಲಿಟ್ಟ
ಆ ಹುಡುಗಿ ತನ್ನಿರವ ಮರೆತು
ವರ್ತಮಾನದಲಿ ಕರಗಿ ಹೋಗಿದ್ದಳು
ಮೌನವಾಗಿದ್ದಳು
ಜೀವಿಸುವುದನ್ನೇ ಮರೆತು!
ಇದಕ್ಕಾರೂ ಸಾಕ್ಷಿಯಾಗಲಿಲ್ಲ.
*****
Related Post
ಸಣ್ಣ ಕತೆ
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
-
ಗೋಪಿ
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…
-
ಎರಡು ರೆಕ್ಕೆಗಳು
ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…
-
ನಿಂಗನ ನಂಬಿಗೆ
ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…
-
ಆ ರಾಮ!
ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…