ನಾನೊಂದು ಕವನ ಬರೆದೆ

ಬರೆದು ನಾನೊಂದು ಕವನ
ರಾಯನಿಗೆ ಕೇಳಿದೆ
ಹೇಗಿದೆ ಈ ಕವನ
“ನಾ ಕಂಡ ಕನಸುಗಳೆಲ್ಲಾ
ನೀರ ಮೇಲಿನ ಗುಳ್ಳೆ
ಬರೀ ಹೊಡೆತ ನಿಂದನೆ
ತುಂಬಿದೆ ಬದುಕೆಲ್ಲ”
…ಇತ್ಯಾದಿ …ಇತ್ಯಾದಿ
ಓದುತ್ತಿದ್ದಂತೆಯೇ ರಾಯ
ತಾಳಿದ ರಾವಣನ ಅವತಾರ,
ಮತ್ತೇ ಬೈಗುಳ ಹೊಡೆತ,
“ನಿನಗೆ ಬರೆಯಲು ಬೇರೆ
ವಿಷಯಗಳೇ ಇಲ್ಲವೆ?
ನಿನ್ನ ಕವನ ನನ್ನನ್ನು
ನಿಂದಿಸಿದಂತಿದೆಯಲ್ಲ?
ಬರೆಯುವುದೇ ಆಗಿದ್ದರೆ
ನನ್ನ ಹೊಗಳಿ ಬರೆ-
ಇಲ್ಲವಾದರೆ ಗೊತ್ತಿದೆಯಲ್ಲಾ
ಕಾದ ಕಬ್ಬಿಣದ ಬರೆ..”
ಮತ್ತೆ ಕಾಗದ ಪೆನ್ನು
ಹಿಡಿದು ನಡುಗುವ ಕೈಯಿಂದ
ಕವನ ಬರೆಯಲು ಕುಳಿತೆ-
“ನಿನ್ನ ಮಾತುಗಳೇ
ನನಗೆ ವೇದ – ಕುರಾನ
ಮತ್ತೇಕೆ ಬೇರೆ ಪುರಾಣ
ಆ ಲೋಕ – ಈ ಲೋಕ
ಏಳೇಳು ಲೋಕದಲ್ಲೂ
ನಿನ್ನ ಪಾದ ಸೇವೆಯ ಭಾಗ್ಯ
ಕರುಣಿಸು ನನ್ನ”
..ಇತ್ಯಾದಿ… ಇತ್ಯಾದಿ
ಈ ವಾಕ್ಯಗಳೇ ಸತ್ಯ
ಮಿಕ್ಕಿದ್ದೆಲ್ಲಾ ಬರೀ ಮಿಥ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೇಲುತಿರುವ ಮುಗಿಲುಗಳಿಗೆ
Next post ದರ್‍ಶನ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…