ಬರೆದು ನಾನೊಂದು ಕವನ
ರಾಯನಿಗೆ ಕೇಳಿದೆ
ಹೇಗಿದೆ ಈ ಕವನ
“ನಾ ಕಂಡ ಕನಸುಗಳೆಲ್ಲಾ
ನೀರ ಮೇಲಿನ ಗುಳ್ಳೆ
ಬರೀ ಹೊಡೆತ ನಿಂದನೆ
ತುಂಬಿದೆ ಬದುಕೆಲ್ಲ”
…ಇತ್ಯಾದಿ …ಇತ್ಯಾದಿ
ಓದುತ್ತಿದ್ದಂತೆಯೇ ರಾಯ
ತಾಳಿದ ರಾವಣನ ಅವತಾರ,
ಮತ್ತೇ ಬೈಗುಳ ಹೊಡೆತ,
“ನಿನಗೆ ಬರೆಯಲು ಬೇರೆ
ವಿಷಯಗಳೇ ಇಲ್ಲವೆ?
ನಿನ್ನ ಕವನ ನನ್ನನ್ನು
ನಿಂದಿಸಿದಂತಿದೆಯಲ್ಲ?
ಬರೆಯುವುದೇ ಆಗಿದ್ದರೆ
ನನ್ನ ಹೊಗಳಿ ಬರೆ-
ಇಲ್ಲವಾದರೆ ಗೊತ್ತಿದೆಯಲ್ಲಾ
ಕಾದ ಕಬ್ಬಿಣದ ಬರೆ..”
ಮತ್ತೆ ಕಾಗದ ಪೆನ್ನು
ಹಿಡಿದು ನಡುಗುವ ಕೈಯಿಂದ
ಕವನ ಬರೆಯಲು ಕುಳಿತೆ-
“ನಿನ್ನ ಮಾತುಗಳೇ
ನನಗೆ ವೇದ – ಕುರಾನ
ಮತ್ತೇಕೆ ಬೇರೆ ಪುರಾಣ
ಆ ಲೋಕ – ಈ ಲೋಕ
ಏಳೇಳು ಲೋಕದಲ್ಲೂ
ನಿನ್ನ ಪಾದ ಸೇವೆಯ ಭಾಗ್ಯ
ಕರುಣಿಸು ನನ್ನ”
..ಇತ್ಯಾದಿ… ಇತ್ಯಾದಿ
ಈ ವಾಕ್ಯಗಳೇ ಸತ್ಯ
ಮಿಕ್ಕಿದ್ದೆಲ್ಲಾ ಬರೀ ಮಿಥ್ಯ.
*****
Related Post
ಸಣ್ಣ ಕತೆ
-
ಕೆಂಪು ಲುಂಗಿ
ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…
-
ರಾಮಿ
‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…
-
ಧರ್ಮಸಂಸ್ಥಾಪನಾರ್ಥಾಯ
ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…
-
ಮಿಂಚು
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…
-
ಇರುವುದೆಲ್ಲವ ಬಿಟ್ಟು
ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…