ಕವಿ

ಸೌಂದರ್‍ಯಸರಸಿಯೊಳು ಕವನೀಯ ಸುಕುಮಾರ
ಸಿರಿರಾಜಹಂಸವಾಗಿ
ಇಂದು ಮೂಜಗ ಮೀರಿ ಅವರ ಗದ್ದುಗೆ ಏರಿ
ಆಳ್ವ ಅಧಿಕಾರಿಯಾಗಿ

ಋತುರಾಜ ನವತರುಣ ಮಧುವನದ ಅಭಿರಾಮ
ಮೃದು ಮಂದವಾಯುವಾಗಿ
ಅತಿರೂಪಲಾವಣ್ಯ ಅರೆದೆರೆದು ಬಿರಿಬಿರಿದ
ಅರಳು ಹೂದುಂಬಿಯಾಗಿ

ಸುರಗಂಗೆ ತೆರೆಯಾಗಿ ಕೊಚ್ಚಿಕೊಳ್ಳುವೆ ಪಾಪ
ಹರಿದು ಪಾತಾಳ ಮುಟ್ಟಿ
ಮೆರೆವ ಕವಿಕುಲಕುಮುದ ಗರ್‍ಭಸ್ಥ ನಿತ್ಯಸುಧೆ
ಸುರಿಸುರಿಸಿ ಧಾರಿಗಟ್ಟಿ

ಮಕರಂದ ಶರಸೂರೆಯಾಗಿರುವ ಮೃದುಮೃದುಲ
ಕುಸುಮ ನಲಿನಲಿಯುವಲ್ಲಿ
ಸುಕುಮಾರ ಒಳ್ಳಿಮಂಟಪದಲ್ಲಿ ಅಡಗಿ ಮೈ
ಮರೆವೆನಾನಂದದಲ್ಲಿ

ಮನ್ಮನ ಮಹಾಸಿಂಧು ತಳತನಕ ಮುಳುಗುವೆನು
ಮುತ್ತುರತ್ನಂಗಳಲ್ಲಿ
ಜನ್ಮ ಜನ್ಮದ ವಿಪುಲ ಭೋಗಭಾಂಡಾರವನು
ಒಡೆಯುವೆನು ಯೋಗದಲ್ಲಿ

ರವಿಯ ರಥವನ್ನೇರಿ ವಿಶ್ವಭ್ರಮಣವ ಮಾಡಿ
ನಗುವೆನಾ ಆಡಿ ಹಾಡಿ
ಸವಿಸುಖದ ಕಲ್ಪನಾಕಾಶದೊಳು ಹಾರುವೆನು
ಮೋಡಗಳ ಜೋಡಿಗೂಡಿ

ಸುರಸ್ವರ್‍ಗಲೋಕದಾ ಅವರದೂತನು ನಾನು
ನನಗಿಲ್ಲ ಆಹುದು ಬಹುದು
ತಿರುಕರಲಿ ತಿರುಗಿದರು ರಾಜರ್‍ಷಿ ಬ್ರಹ್ಮರ್‍ಷಿ
ದೇವರ್‍ಷಿ ನಾನೆ ಹೌದು

ಚಿರಗಾನ ಲಹರಿಯಲಿ ಸಿರಿಬೆಡಗ ಬೆರಸುತಲಿ
ಬೆಳಸುವೆನು ಭಾವವನ್ನು
ಅರಿಯಲಾರದ ಗೂಢ ಗೀತೆಯಲ್ಲಿ ಹಾಡುವೆನು
ಭುವನದಲ್ಲಿ ಸ್ವರ್‍ಗವನ್ನು

ಝರಿಯಲ್ಲಿ ಬೆರೆಯುವೆನು ಸೇರುವೆನು ಹೂವಿನಲಿ
ನಲಿನಲಿದು ಬಾಳುತಿರುವೆ
ಬರಿಬಯಲಿನಾಕಾಶದುಡಿಯಲ್ಲಿ ಹೊಡಕರಿಸಿ
ಹಕ್ಕಿಯೊಲು ಹಾಡುತಿರುವೆ
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...