ಪೂರ್‍ಣತೆ

ನೀಲವರ್‍ಣದ ಮುಗಿಲು ಮೋಡಗಳ ಸುಳಿಯಿಲ್ಲ
ತಿಳಿಬೈಲು ಸೊಗಸು
ನಾಲ್ದೆಸೆಗೆ ಹಸರು ಕುಸುರಿನ ಧರಣಿ ಕಣ್ತುಂಬ
ಕಂಡರಳಿ ಮನಸು

ಸ್ವರದೆಗೆದು ಹಾಡಿದೆನು ಸ್ವರವೇರಿ ಸುಳಿಯುತಿದೆ
ಗಿರಿಗಗನದಲ್ಲಿ
ಗಿರಿಯ ಶಿಖರದ ಮೇಲೆ ನಿಂತಿರುವೆ ಅರಳುತಿವೆ
ಮಲ್ಲಿಗೆಯು ಅಲ್ಲಿ

ಕೇಳುತಿದೆ ಅಲ್ಲೊಂದು ನಾದ ಗಗನಾಂಗಣದ
ಕೊನೆದಂಡೆಯಲ್ಲಿ
ಕೇಳಿದೆನು ಕಿವಿಗೊಟ್ಟು ಮನಸಿಟ್ಟು ಬಗೆನೆಟ್ಟು
ಹಿರಿಯಾಶೆಯಲ್ಲಿ

ನೆನೆನೆನೆದು ತಿರುತಿರುಗಿ ನಾದನಾವೀನ್ಯವನು
ಬಲು ಬೆರಗುಗೊಂಡು
ಮನಮರುಗಿ ಹರಿಯುತಿದೆ ಬೆರೆಯಬೇಕೆಂಬಾಸೆ
ಒಳಗುಕ್ಕಿ ಬಂದು

ಗಿರಿಯಲ್ಲಿ ಝರಿಯಲ್ಲಿ ದರಿಯಲ್ಲಿ ತುಳುಕುತಿದೆ
ಸುಳಿಗಾಳಿಯಲ್ಲಿ
ಧರೆಯೆಲ್ಲ ತೇಲುತಿದೆ ಮಿದುವಾಗಿ ಅಲೆದಲೆದು
ಆ ನಾದದಲ್ಲಿ

ಹೃದಯಮಂಟಪದಿಂದ ಹಾರುತೇರಿತು ಮೇಲೆ
ಹಿರಿಯಕ್ಕಿಯೊಂದು
ಮದವೇರಿ ಮೈಮರೆದು ತೂರನೆಗೆಯಿತು ವಿರಹ
ನೆರೆ ಉಕ್ಕಿ ಬಂದು

ಬಹುದಿನದ ಅಗಲಿಕೆಯ ಅಂತರವು ತಾನಳಿದು
ಸಲೆಮಾಯವಾಯ್ತು
ಬಹುಕಾಲದಾ ಆಸೆ ಹೊಮ್ಮಿ ಹೊಂದಿಕೆಗೂಡಿ
ಪರಿಪೂರ್‍ಣವಾಯ್ತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಣೇಶ ಬಾರೋ
Next post ಸುಮತೀಂದ್ರ ನಾಡಿಗರ “ದಾಂಪತ್ಯ ಗೀತ”

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…