ಜೋಗುಳ ಹಾಡು

ಜೋಗುಳ ಹಾಡನ್ನು ಲಾಲಿಸು, ಜೋ! ಜೋ!
ತೂಗುವೆ ತೊಟ್ಟಿಲ, ಮಲಗಿರು, ಜೋ! ಜೋ!

ಸುಮಲತೆಗಳ ಪರಿಮಳವ ಬಿತ್ತರಿಸಿ,
ಕಮಲದ ಕೋಮಲ ಗಂಧವ ಬೆರಸಿ,
ಮಂದ ಮಾರುತವು ಬೀಸುತ್ತಿರಲಿನಿಸು,
ತಂದೆ, ತಂದಿಹೆನೊಂದು ಮುದ್ದಿನ ಕನಸು.

ಮೊದಲೆವೆಗಳನು ಮುಕುಳಿಸೆನ್ನ ಸಿರಿಯೇ!
ತೊದಲನ್ನು ನಿಲ್ಲಿಸೆನ್ನಯ ಹೊನ್ನ ಮರಿಯೇ!
ಸದ್ದು ಮಾಡಲು ಬೇಡ ನೀ ಶಾಂತನೆನಿಸು!
ಕದ್ದು ತಂದಿಹೆನೊಂದು ಮುದ್ದಿನ ಕನಸು!

ರವಿ ಮುಳುಗಿಹನು, ಕಂದಿತು ಸಂಜೆಗೆಂಪು;
ಸವಿಯಾಗಿ ಕಾಂಬುದು ಚಂದ್ರನ ಸೊಂಪು.
ನೊಂದಿಸು ನಿನ್ನಯ ಮಾಯೆಯ ಮುನಿಸು!
ತಂದೆನಿಗೋ, ಚಿಕ್ಕ ಮುದ್ದಿನ ಕನಸು!

ತನುಮನ ಧನವನರ್‍ಪಿಸಿ ಮೋದದಿಂದಾ
ವಿನಿಯೋಗಿಸುತ ಬಲು ಸಾಸಿಗನೆನಿಸು!
ಜನನ ಭೂಮಿಯ ಸೇವೆಯನು ಮಾಡೊ ಕಂದಾ!
ಜನುಮ ಎಂಬುದು ಪುಟ್ಟ ಮುದ್ದಿನ ಕನಸು.

ಮಲಗೊ! ವಿಶ್ರಮಿಸೆನ್ನ ಮೋಹದ ಗೊಂಬೆ!
ಮಲಗೊ! ಗಲ್ಲವನೊತ್ತಿ ನಾ ಬೇಡಿಕೊಂಬೆ,
ರಂಗನಾಥನೆ! ಸರ್‍ವದಾ ನೀ ಸಮನಿಸು,
ಮಂಗಳಕರವಾದ ಮುದ್ದಿನ ಕನಸು.
*****
(“ಆನಂದದಿಂದ”)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೋವಿಲ್ಲದೌಷಧವಿಲ್ಲದಾರೋಗ್ಯ ಮೇಲಲ್ಲವೇ?
Next post ರಾಜಕೀಯ ಶಕ್ತಿಯಾಗಿ ಕನ್ನಡ

ಸಣ್ಣ ಕತೆ

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…