Home / ಕವನ / ಕವಿತೆ / ಡಾ|| ರಾಜ್

ಡಾ|| ರಾಜ್

ರಾಜ ಮುತ್ತು ರಾಜ
ಕನ್ನಡದ ನೀ ಮುದ್ದು ರಾಜ || ಪ ||

ರಂಗಭೂಮಿಯ ಕೃಷಿ ಅಂಗಳದಲಿ
ನಟನೆಯ ಕಲೆಯ ಬೀಜ ನೀವಾಗಿ
ಸಸಿಯಾಗಿ ಮೊಳಕೆಯೊಡೆದು ಸಿನಿಮಾದಲ್ಲಿ
ಹೆಮ್ಮರವಾಗಿ ಬೆಳೆದು ನೆರಳಾದೆ ಕಲೆಗೆ

ಗಾನ ಕೋಗಿಲೆಗಳ ಗಾನಸಿರಿಯಾಗಿ
ಗಂಧರ್ವ ಲೋಕವ ನೀ ಸೃಷ್ಟಿಸಿದೆ
ಯೋಗಿಯಾಗಿ ತ್ಯಾಗಿಯಾಗಿ
ಕಲೆಯಲೇ ನೀ ಜೀವತೇಯ್ದು
ಕನ್ನಡದ ಮೇರು ನಟನಾಗಿ ನಿಂತಿಹೆ

ಕನ್ನಡದ ಹೆಮ್ಮೆಯ ಪುತ್ರನಾಗಿ
ಕನ್ನಡ ರಥವ ನೀನೇರಿ ನಡೆದೆ
ಅಭಿಮಾನಿಗಳು ನಿನ್ನ ದೇವರೆಂದರೂ
ಅಭಿಮಾನಿಗಳೇ ನಿನ್ನ ದೇವರೆಂದು ತೋರಿ
ಸರಳತೆಯ ಸಾಕಾರ ಮೂರ್ತಿ ನೀನಾದೆ

ಅದೆಷ್ಟೋ ಪ್ರಶಸ್ತಿ ಪುರಸ್ಕಾರಗಳು
ನಿನ್ನೊಡಲಿಗೆ ಬಂದು ಸೇರಿದರೂ
ಅಹಂಕಾರವೂ ನಿನ್ನಲ್ಲಿ ಸುಳಿಯಲಿಲ್ಲ
ಸರಳತೆ ನಿನ್ನ ಜೀವನ ಗಾಯನ
ಆಯಿತು ಇತರರಿಗೂ ಮಾರ್ಗದರ್ಶನ

ನೀನೆಂದಿಗೂ ನಮ್ಮೆಲ್ಲರ ಸ್ಫೂರ್ತಿಯಾಗಿರುವೆ
ಮಣ್ಣಲ್ಲಿ ಮಣ್ಣಾಗಿ ಹೋದರೂ
ಕನ್ನಡ ಮಣ್ಣಲಿ ಚಿರ ಚೇತನವಾಗಿರುವೆ
ನೀ ರಾಜಕುಮಾರ ಎಂದೆಂದಿಗೂ
ಕುಮಾರನೇ ಕನ್ನಡಮ್ಮನ ಕುವರನೇ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...