ಅಂದಿನ ರಾಮ-ಇಂದಿನ ರಾಮ

ಗೊತ್ತಿರುವುದು ನನಗೆ
ಪಂಚೆಯ ಶ್ರೀರಾಮ
ಹುಟ್ಟಿರುವುದು ಈಗ
ಚೆಡ್ಡಿಯ ಶ್ರೀರಾಮ ||

ರಾಮ ಹುಟ್ಟಿದ ಅಂದು
ತಾಯಿಯ ಗರ್‍ಭದಲಿ
ಅವನೆ ಹುಟ್ಟಿದ ಇಂದು
ಮಸೀದಿ ಮೂಲೆಯಲಿ

ಅಂದು ರಾಮನ ಜನನ
ಹಗಲು ಹೊತ್ತಿನಲ್ಲಿ
ಇಂದು ಅವನ ಜನನ
ತೂತು ಕತ್ತಲಲ್ಲಿ

ಅಂದು ಬಿಲ್ಲು ಬಾಣ
ಅವನ ಹೆಗಲಿನಲ್ಲಿ
ಇಂದು ಬಿದಿರು ದಂಡ
ಅದೇ ಬಗಲಿನಲ್ಲಿ

ಅಂದು ರಾಮನ ಹಣೆಗೆ
ಎರಡೊ ಮೂರೊ ನಾಮ
ಇಂದು ನಮ್ಮ ಹಣೆಗೆ
ರಕ್ತದ ಒಂದೇ ನಾಮ

ಅಂದು ಹೊರಟ ರಾಮ
ವನವಾಸದ ಕಡೆಗೆ
ಇಂದು ನಮ್ಮ ರಾಮ
ನವದೆಹಲಿಯ ಕಡೆಗೆ

ಅಂದು ರಾಮನಿಗೆ ಸಾಕು
ಕಾಡಲಿ ಪರ್‍ಣ ಕುಟೀರ
ಇಂದು ಬೇಕೇ ಬೇಕು
ಕೋಟಿ ಇಟ್ಟಿಗೆ ಮಂದಿರ

ಅಂದು ರಾಮನಿಗೆ ಪ್ರಿಯವು
ಎಲ್ಲ ಜೀವ ಜಂತು
ಇಂದು ಯಾರೂ ಬೇಡ | ಇರಲಿ
ದಲಿತರಂತೂ ಇಂತು

ನಿನ್ನೆ ಶಂಭೂಕ ಮರ್‍ಡರ್
ತಪ್ಪಿತು ಕುವೆಂಪು ಇಂದ
ಇಂದು ನಾವುಗಳೆ ಮರ್‍ಡರ್
ತಪ್ಪುವುದು ಯಾರಿಂದ?

ಅಂದು ಹರಡಿದ ರಾಮ
ಹೆಚ್ಚೂ ಕಡಿಮೆ ಪ್ರೀತಿ
ಇಂದು ಹರಡುವನು ಯಾಕೆ
ಎಂದಿಲ್ಲದ ಭೀತಿ?

ಇರಲು ಎದುರಿನಲ್ಲಿ
ಭೀಮನ ಸಂವಿಧಾನ
ಮತ್ತೆ ಯಾಕೆ ಬೇಕು
ರಾಮನ ಸಂವಿಧಾನ?

ಇರಲಿ ರಾಮ ಅಲ್ಲಿ
ಜನರ ತಂಟೆ ಯಾಕೆ
ಸುಮ್ಮನಿರದೆ ಇರುವೆ
ಬಿಟ್ಟುಕೊಳುವುದ್ಯಾಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಗಿಲು
Next post ಹಾಸ್ಯ ಪ್ರಜ್ಞೆ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys