ಶತ್ರುವು ಕಾಣುತ್ತಿಲ್ಲ ನಮಗೆ

ಶತ್ರುವು ಕಾಣುತ್ತಿಲ್ಲ ನಮಗೆ ಶತ್ರುವು ಕಾಣುತ್ತಿಲ್ಲ
ಅಡಗಿರಬಹುದು ಒಳಗೆ; ಅವನು ಕಾಣುತ್ತಿಲ್ಲ ಹೊರಗೆ ||ಪ||

ಸುಳಿವು ಸಿಕ್ಕರೂ ಅವನ ಹಿಡಿವುದು ಬೇಕಿಲ್ಲ
ಹಿಡಿಯದೆ ಯುದ್ಧವು ಎಲ್ಲಿ? ನಮ್ಮ ದಾರಿಗೆ ಭವಿಷ್ಯ ಎಲ್ಲಿ? //ಅ.ಪ.//

ಅಕ್ಕಪಕ್ಕದವರು ಇಲ್ಲಿ; ನಡೆದಿರಲು ಬಹುಮುಂದೆ
ಹಾರಿಸಿ ಎಲ್ಲರೂ ಧ್ವಜವ; ಭಾವಿಸಿ ತಾವೆಲ್ಲರೂ ಒಂದೆ
ಅರಿಯಲಿಲ್ಲ ನಮ್ಮನು ನಾವು . . . .
ಕಳೆಯಲಿಲ್ಲ ನಮ್ಮೊಳ ಬೇವು ||೧||

ಸಮಸ್ಯೆ ಯಾವುದೂ ಅಲ್ಲ; ಅದಕೆ ಪರಿಹಾರ ಇರುವಾಗ
ಆ ದಿಕ್ಕಿನಲಿ ನಡಿಗೆ; ನಾಳೆಯೆ ಸಮೃದ್ಧಿ ತರುವಾಗ
ಕೂರುವುದೇಕೆ ಕೈಚೆಲ್ಲಿ . . . .
ಬನ್ನಿರಿ ಹೊರಗೆ ಬಿಟ್ಟು ಚಳಿ ||೨||

ಆಕಾಶವ ದಿಟ್ಟಿಸಿದವರು; ಇಲ್ಲಿಯೆ ಕುಳಿತಿರುವಾಗ
ನೆಲವನ್ನೆಚ್ಚಿ ನಡೆದವರು; ಊರನು ಸೇರಿರುವಾಗ
ಯಾವುದು ಆಯ್ಕೆ ನಿಮಗೆ . . . .
ಯಾವುದು ಮಾದರಿ ನಮಗೆ ||೩||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಸವಿ ಮಗಳು
Next post ಮೂರ್‍ತಿ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ತಿಮ್ಮರಾಯಪ್ಪನ ಬುದ್ಧಿವಾದ

    ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…