ಮಹಾಕಾವ್ಯ

ರೆಕ್ಕೆಸುಟ್ಟ ಹಕ್ಕಿಗಳು
ಎದೆಯ ತುಂಬ ಕೂತಿವೆ
ಮಾತು ಸತ್ತು ಮೌನ ಹೊತ್ತು
ಮಹಾಕಾವ್ಯ ಬರೆದಿವೆ

ಹಾಳೆಗಳ ಹರಡಲಿಲ್ಲ
ಮೇಲೆ ಮಸಿಯು ಹರಿಯಲಿಲ್ಲ
ಅಕ್ಷರಗಳು ಮೂಡಲಿಲ್ಲ
ಮಹಾಕಾವ್ಯ ಬರೆದಿವೆ

ಮುಕ್ಕುಗೊಂಡ ಇತಿಹಾಸವು
ಕೊಕ್ಕಿನಲ್ಲಿ ಕೂತಿದೆ
ಕಣ್ಣ ತುಂಬ ಬೆವರು ತುಂಬಿ
ಮಹಾಕಾವ್ಯ ಬರೆದಿವೆ

ಸಂಕಟಗಳ ಗಾಣದಲ್ಲಿ
ಭ್ರೂಣಭಾವ ಸಿಕ್ಕಿದೆ
ಎದೆಯ ತುಂಬ ಮೌನ ಬಸಿದು
ಮಹಾಕಾವ್ಯ ಬರೆದಿವೆ

ಮಾತಿಲ್ಲದ ಮಹಾಕಾವ್ಯ
ಹುಟ್ಟುತ್ತಿದೆ ಗೂಡಿನಲ್ಲಿ
ನಿಂತ ನೆಲುವು ನಾಚುವಂತೆ
ಹಬ್ಬುತಿದೆ ನಾಡಿನಲ್ಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಕೃತಿ ಆರಾಧಕ – ಇ. ಎಂ. ಫಾರ್‍ಸ್ಟರ್
Next post ತಾಯೇ ಈ ಜನ್ಮ ನೀನಿತ್ತ ಭಿಕ್ಷೆ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…