Home / ಕವನ / ಕವಿತೆ / ಸಿದ್ಧಾರ್‍ಥರು

ಸಿದ್ಧಾರ್‍ಥರು

ಬೋಧಿ ವೃಕ್ಷದ ಚಿತ್ರ
ಬರೆದವರೆಲ್ಲ ಬುದ್ಧರಲ್ಲ
ಹೆಚ್ಚೆಂದರೆ ಸಿದ್ದಾರ್‍ಥರು!
ಕತ್ತಲಲ್ಲಿ ಕದ್ದು ಎದ್ದು ಹೋಗುವ ಇವರು
ಬರೀ ಸಿದ್ದಾರ್‍ಥರೇ ಹೊರತು ಬುದ್ಧರಲ್ಲ.
ಯಾಕೆಂದರೆ-
ಬುದ್ಧರಾಗುವವರ ಬಾಯಲ್ಲಿ
ನರಿ, ಮರಿಹಾಕುವುದಿಲ್ಲ.

ನರಿ ನಾಲಗೆಯಲ್ಲಿ
ನಯವಾಗಿ ನೆತ್ತರು ನೆಕ್ಕುತ್ತ
ಸುಳ್ಳಿನ ಸುಗಮ ಸಂಗೀತದಲ್ಲಿ
ನಂಬಿದವರ ನರಕಿತ್ತು ಸರ ಮಾಡಿ
ಹಾಡುತ್ತ ಓಡಾಡುತ್ತಾರೆ-ಈ ಸಿದ್ದಾರ್‍ಥರು.
ದ್ರೌಪದಿಯ ದಾರಿ ಬಿಟ್ಟು ಧನುಸ್ಸು ಹಿಡಿದು
ಸನ್ಯಾಸಿಯ ಸೋಗಿನಲ್ಲಿ ಸಂ-ಸಾರ
ಹೂಡಬಯಸುತ್ತಾರೆ-ಈ ಪಾರ್‍ಥರು.

ಸಿದ್ದಾರ್‍ಥರೊಳಗಿನ ಪಾರ್‍ಥರನ್ನು ನಂಬಿ
ಕುದುರೆಯೇರಿದ ಚದುರೆಯರು
ಕಣ್ಣಪಟ್ಟಿ ಕಳಚಿಕೊಳ್ಳುವ ವೇಳೆಗೆ
ಅನ್ವರ್‍ಥದ ಆರೋಪದಲ್ಲಿ ಬೀಗುವ ಈ ಸಿದ್ಧಾರ್‍ಥರು
ಬೋಧಿವೃಕ್ಷದ ಪೊಟರೆಯೊಳಗೆ
ಚದುರೆಯರ ಚಂದ ಕನಸುತ್ತ
ಕಾಲು ಚಾಚುತ್ತಾರೆ ಜೊಲ್ಲು ಸುರಿಸುತ್ತ.
ಇತ್ತ ಬುದ್ಧ ಭ್ರಮೆಯ ಗತ್ತಿನಲ್ಲಿ ಚಿತ್ತಾದ ಚದುರೆಯರು
ಕುದುರೆಗೆ ಕಾಲು ಮುರಿದು ಕೆನದಾಗ ಕನಸೊಡೆದು
ಕಂಗಾಲಾಗುತ್ತಾರೆ ಚಡಪಡಿಸುತ್ತ.

ಇಲ್ಲ, ಬೋಧಿವೃಕ್ಷದ ಚಿತ್ರ
ಬರೆದವರೆಲ್ಲ ಬುದ್ದರಲ್ಲ,
ಹೆಚ್ಚೆಂದರೆ ಸಿದ್ದಾರ್‍ಥರು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...