ಅದು ಅದುವೆ ಯುಗಾದಿ

-೧-
ನೆತ್ತಿಗೆ ಎಣ್ಣೆ
ಮೀಯಲು ಬಿಸಿ ನೀರು
ಕುದ್ದರೆ ಒಬ್ಬಟ್ಟಿನ ಸಾರು
ಅದು ಅಡವೆ ಯುಗಾದಿ

ಮನೆಗೆ ಸುಣ್ಣ
ಬಾಗಿಲಿಗೆ ತೋರಣ
ಎಲೆಯೊಳಗೆ ಹೊರಳಿದರೆ ಹೂರಣ
ಅದು ಅದುವೆ ಯುಗಾದಿ

ರಟ್ಟೆಯ ತುಂಬಾ ಕೆಲಸ
ಹೊಟ್ಟೆಯ ತುಂಬಾ ಊಟ
ತೊಟ್ಟರೆ ಹೊಚ್ಚ ಹೊಸ ಬಟ್ಟೆ
ಅದು ಅದುವೆ ಯುಗಾದಿ

ಮುಡಿಗೆ ಗಮಗಮಿಸುವ ಮಲ್ಲಿಗೆ
ತುಸು ಬಂಗಾರ ಕೊರಳಿಗೆ
ಬೇಡದೆ ನೀಡಲು ಇದ್ದರೆ
ಅದು ಅದುವೆ ಯುಗಾದಿ

ಮಾಮರಕೆ ಕೆಂಭಾರ
ಕುಹೂ ಎಂದರಳಿ ಸ್ವರ
ಮೂಡಿದರೆ ಎಳೆ ಚಂದಿರ
ಅದು ಅದುವೆ ಯುಗಾದಿ

ಅಷ್ಟೋ ಇಷ್ಟೋ ಸವೆದಿದೆ ಹಾದಿ
ತಿಳಿಯದೆ ತೀರಿದೆ ಅದೆಷ್ಟೋ ತೇದಿ
ಸವಕಳಿ ಕಳೆದೂ ಸಡಗರ ಉಳಿದರೆ
ಅದು ಅದುವೆ ಯುಗಾದಿ

-೨-

ಬದುಕಲೆಂದೇ ಸಾಯುವ ಆಟ
ಸಾಯಲೆಂದೇ ಬದುಕಿನ ಓಟ
ಕನಸ ತೊಟ್ಟಿಲೊಳಗೆ ಇಟ್ಟು ಮೊಟ್ಟೆ
ಕಾವು ಕೊಟ್ಟು ತೂಗಿ ಬಿಟ್ಟೆ
ಅದುವೆ ಆದಿ ಅದೇ ಅನಾದಿ
ಅದು ಅದುವೆ… ಯುಗಾದಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇಡವೆನಗಿನ್ನೇನು!
Next post ವಾಗ್ದೇವಿ – ೩೭

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys