ಒಂದು ಬನದ ಹಾಡು

ಈ ನಾಡಿನ ಹಕ್ಕಿ ಚತುಷ್ಪಾದ
ನಿರೀಕ್ಷೆಯಲ್ಲಿವೆ ಹಸಿರಾದ ದಿನಗಳ

ಹಿಟ್ಲರ್ ಮರಿ ಹಿಟ್ಲರ್‌ಗಳೆಂದಳಿವರಂದು
ನಳ ನಳಿಸಿ ಕಂಗೊಳಿಸುವುದು ಬನ

ನಾಡು ನುಡಿಗಳ ನಡುವಣ ಬರ್‍ಲಿನ್‌ಗೋಡೆ ಬೀಳ್ವದೋ
ಬರುವುದಂದುಸಿರು ನೀಳವಾಗಿ

ಉಗ್ರರ ಅಟ್ಟಹಾಸದ ಕರಾಳ ದಿನಗಳಳಿದಂದು
ಈ ನಾಡಿನ ಕತ್ತಲು ಜಾರಿ ಬೆಳಕು ಮೂಡುವುದು

ಗಣಿದಣಿಗಳ ದನಿ ಅಡಗುವುದಂದು
ಸಸ್ಯ ಶ್ಯಾಮಲೆಯರು ಬಿಡುವರಂದು ನಿಟ್ಟುಸಿರು

ಕ್ರೂರತನವೆಂದಡಗುವುದಂದು
ವಿಷಗಾಳಿ ಸಿಹಿಯಾಗಿ ಬೀಸುವುದು

ಬೆನ್ನ ಮೇಲಿನ ಕತ್ತೆ ಭಾರ ಅಳಿದಂದು
ಮಲಿನ ಜಲ ತಿಳಿಯಾಗುವುದು

ಭ್ರಷ್ಟ ದುರಾಡಳಿತಗಳಳಿದಂದು
ರಾಗಿ ಜೋಳ ಮೂಲಂಗಿ ಕ್ಯಾರೆಟ್
ಕುಣಿದಾಡುವವು ಸಂತಸದಿ ಬಯಲು ತುಂಬ

ಆ ದುರ್‍ದಿನಗಳು ಮುರಿದಂದು
ರೆಕ್ಕೆ ಚತುಷ್ಪಾದಗಳೆಲ್ಲ ಸಮಾನ
ಅಂದ್ರ! ನಮಗೆಲ್ಲ ಸಂತಸದ ಹೊನಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೂರ್‍ಣ ಫಲ
Next post ಶಂಕರಯ್ಯನ ಸಂಸಾರ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…