Home / ಕವನ / ಕವಿತೆ / ದಿಂಬು

ದಿಂಬು

ನಿದ್ದೆ ಬರುವುದುಂಟೆ ದಿಂಬಿಲ್ಲದೇ
ಮಲಗುವುದಕ್ಕಂತೂ ಇರಲೇ ಬೇಕು ದಿಂಬು
ತಲೆಗೆ ಆರಾಮು ಮನಕೆ ಹಿತ
ಹೆಂಡತಿ ಹಾಕಿದ ಹೂವೊಂದಿದ್ದರೆ
ಗಮ್ಮತ್ತೆ ಬೇರೆ
ಸುಖ ನಿದ್ರೆಯಲಿ
ಕನಸಿನ ಮೇಲೆ ಕನಸುಗಳು

ಶಯನೋತ್ಸವಕೆ ಬೇಕು ಮೋಹಕ ದಿಂಬು
ಅಂಚಿನಲಿ ನಯನ ಮನೋಹರ ಕುಚ್ಚುಗಳು
ಬಣ್ಣ ಬಣ್ಣದಾ ಚಿತ್ತಾರದ ಚಿತ್ತಾಕರ್ಷಕ ದಿಂಬು
ನೂರೆಂಟು ಕನಸುಗಳ ಹೊತ್ತು
ಮದುವೆಯಲಿ
ಬರುವುದು ಗಾದಿ ಜೊತೆಯಲಿ
ಮೆತ್ತನೆಯ ದಿಂಬು

ಎಲ್ಲೆಲ್ಲೂ ದಿಂಬೇ ದಿಂಬು
ಮದುವೆಯಾಗದ
ಕಾಲೇಜು ಕನ್ಯಾಮಣಿಗಳ
ರೂಮಿನಲು ಉಂಟುಂಟು ದಿಂಬು

ಒರಗಲು ಬಗೆ ಬಗೆ ದಿಂಬುಗಳು
ಗುಂಡನೆಯ ಜಾಮೂನಿನಾಕಾರದ
ಅರಳೆ ತುಂಬಿದ ಶ್ವೇತವಸ್ತ್ರದ
ರಾಜಕೀಯ ವೇದಿಕೆ ಏರಿದ
ಸಿಂಹಾಸನದಲಿ
ಅಕ್ಕ ಪಕ್ಕ ಉಂಟು ದಿಂಬು
ಗಾಳಿ ತುಂಬಿದ ರಬ್ಬರ್ ದಿಂಬು

ಬಸ್ಸು ಕಾರುಗಳಲಿ ಸೀಟಿಗೆ ದಿಂಬು
ಜಾತಿ ಧರ್‍ಮ ಬೇಧ ಭಾವವಿಲ್ಲದೇ
ಶುಭ್ರ ಮನಸಿನಲಿ
ಮಾಡುವುದು ವೆಲ್ಕಮ್ಮು

ಮಾನವನ ಹೊರತಾಗಿ
ಅವ ಪ್ರಾಣಿ ದಿಂಬಿಟ್ಟು ಮಲಗಿದ್ದುಂಟು?
ದಿಂಬು ರಹಿತ ನಿದ್ದೆ
ಅದೇ ಅದರ ಆರೋಗ್ಯದಾಗುಟ್ಟು
ದಿಂಬು ರಹಿತ ನಿದ್ದೆ ಮಾಡೆಂದು
ಮಾಡುವನು ಸಲಹೆ ನರತಜ್ಞ
ಇಲ್ಲದಿದ್ದರೆ ಬರುವುದುಂಟು
ಕುತ್ತಿಗೆಗೆ ಬೆಲ್ಟು

ವೃದ್ಧರಿಗೆ ಮಕ್ಕಳಿಗೆ ನೀಡುವುದು
ನಿಸ್ಪೃಹ ಸೇವೆ
ಇದರ ಪರೋಪಕಾರವ ಮರೆಯುವವರಾರು?
ಸೇವೆ ಮುಗಿದ ಬಳಿಕ
ಬೇಡ ಇದರ ಪಾಡು
ಬಗಿದ ಹಿರಣ್ಯಾಕ್ಷನ ಹೊಟ್ಟೆಯಂತೆ
ರೂಪತಾಳಿ ಸೇರಲು ತಿಪ್ಪೆ
ಏರುವುದು ಮುನಿಸಿಪ್ಯಾಲಿಟಿ ಲಾರಿ
ಸಿಗುವುದಾಗ ಮೋಕ್ಷ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...