Home / ಲೇಖನ / ವಿಜ್ಞಾನ / ಸೂಕ್ಷ್ಮ ತರಂಗಗಳ ಒಲೆ

ಸೂಕ್ಷ್ಮ ತರಂಗಗಳ ಒಲೆ

(Micro wave oven)
ವಿದ್ಯುತ್ ಶಕ್ತಿ, ಅನಿಲ, ಇಜ್ಜಲ, ಸೌದೆ, ಹೊಟ್ಟು, ಕಟ್ಟಿಗೆ, ಇದ್ಯಾವ ವಸ್ತು ಇಲ್ಲದೆಯೂ ಅತ್ಯಂತ ಬೇಗನೆ ಯಾವುದೇ ಪದಾರ್ಥಗಳನ್ನು ಬೇಯಿಸಬಲ್ಲ ಒಲೆಯೇ ಸೂಕ್ಷ್ಮತರಂಗಗಳ ಒಲೆ. ಇದನ್ನು ಮ್ಯಾಗ್ನೆ ಟ್ರಾನ್ಸ್ ಎಂಬ ಒಂದು ಕಂಪನಿಯಲ್ಲಿಯ ಸಂಶೋಧಕರು ೧೯೬೦ ರಲ್ಲಿಯೇ ಅಮೆರಿಕಾದಲ್ಲಿ ಕಂಡು ಹಿಡಿದಿದ್ದರೂ ಬೆಳಕಿಗೆ ಬಂದಿರಲಿಲ್ಲ. ಇದೀಗ ಎಲ್ಲೆಡೆಯಲ್ಲಿಯೂ ಪ್ರಚಾರ ಪಡೆಯುತ್ತಿರುವ ಈ ಸೂಕ್ಷ್ಮ ತರಂಗಗಳ ಒಲೆಯು ಬೇಡಿಕೆಯಲ್ಲಿದೆ. ಈ ಒಲೆ ಹೆಚ್ಚು ಕಂಪನ ವೇಗದ ರೇಡಿಯೋ ತರಂಗಗಳನ್ನೇ ಬಳಸಲ್ಪಡುತ್ತದೆ. ತರಂಗಗಳು ಬೇಯಿಸುವ ಆಹಾರವನ್ನು ಒಳಹೊಕ್ಕು ಅದರಲ್ಲಿರುವ ಪದಾರ್ಥಗಳನ್ನು ಮಥನ ಮಾಡಿ ಆಹಾರಪಚನವನ್ನುಂಟು ಮಾಡುತ್ತದೆ. ಇದರಿಂದ ಆಹಾರವು ಹೊರವಲಯದಲ್ಲಿ ಮಾತ್ರ ಪಚನವಾಗದೇ ಅಂತರೀಕರವಾಗಿಯೂ ಬೇಯಿಸಲ್ಪಡುತ್ತದೆ. ಈ ಮಥನ ಕ್ರಿಯೆಯಲ್ಲಿ ಶಾಖವು ವಿಪರೀತ ಏರುತ್ತದೆ. ಈ ಬಲೆಯಲ್ಲಿ ಉತ್ಪತ್ತಿಂಟಾಗುವ ಸೂಕ್ಷ್ಮತರಂಗಗಳ ಆಧಾರವೇ ಡ್ಯೂಗ್ನೆಟ್ರಾನ್ಸ್ ಇದು ಹೆಚ್ಚು ಕಂಪನವೇಗವ Diode ಇದರಲ್ಲಿ ಉರುಳೆಯಕಾರದ ಋಣ ವಿದ್ಯುತ್ವಾಹಕವಿದೆ ಮತ್ತು (Cathode) ಮತ್ತು ಏಕಾಕ್ಷೀಯ ಧನವಿದ್ಯುದ್ವಾಹಕವೂ (Anode) ಇದೆ. ಈ ಎರಡೂ ವಿದ್ಯುತ್ವಾಹಕಗಳ ಮೂಲಕ ನೇರವಾಗಿ ವಿದ್ಯುತ್‌ಶಕ್ತಿಯನ್ನು ಹಾಯಿಸಿದರೆ ಅಲ್ಲಿ ವಿದ್ಯುತ್ ಕ್ಷೇತ್ರವು ನಿರ್ಮಿತವಾಗುತ್ತದೆ. ಆಯಸ್ಕಾಂತ ಕ್ಷೇತ್ರವನ್ನು ಅಡ್ಡಡ್ಡಲಾಗಿ ಹೊರಗಡೆಯ ಆಯಸ್ಕಾಂತದ ಸಹಾಯದಿಂದ ಪ್ರಯೋಗಿಸಿದರೆ ಮತ್ತು ಇದನ್ನು ಅನುಕಣನೀಯ ಸಾಧನಕ್ಕೆ ಸಿಕ್ಕಿಸಿದರೆ ಇದು Oscillator ರೀತಿಯಲ್ಲಿ ವರ್ತಿಸಿ ಅತ್ಯಂತ ಹೆಚ್ಚಿನ ಕಂಪನ ವೇಗದ ತರಂಗಗಳನು ಉತ್ಪತ್ತಿ ಮಾಡಬಲ್ಲದು.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...