Home / ಲೇಖನ / ವಿಜ್ಞಾನ / ಸೂಕ್ಷ್ಮ ತರಂಗಗಳ ಒಲೆ

ಸೂಕ್ಷ್ಮ ತರಂಗಗಳ ಒಲೆ

(Micro wave oven)
ವಿದ್ಯುತ್ ಶಕ್ತಿ, ಅನಿಲ, ಇಜ್ಜಲ, ಸೌದೆ, ಹೊಟ್ಟು, ಕಟ್ಟಿಗೆ, ಇದ್ಯಾವ ವಸ್ತು ಇಲ್ಲದೆಯೂ ಅತ್ಯಂತ ಬೇಗನೆ ಯಾವುದೇ ಪದಾರ್ಥಗಳನ್ನು ಬೇಯಿಸಬಲ್ಲ ಒಲೆಯೇ ಸೂಕ್ಷ್ಮತರಂಗಗಳ ಒಲೆ. ಇದನ್ನು ಮ್ಯಾಗ್ನೆ ಟ್ರಾನ್ಸ್ ಎಂಬ ಒಂದು ಕಂಪನಿಯಲ್ಲಿಯ ಸಂಶೋಧಕರು ೧೯೬೦ ರಲ್ಲಿಯೇ ಅಮೆರಿಕಾದಲ್ಲಿ ಕಂಡು ಹಿಡಿದಿದ್ದರೂ ಬೆಳಕಿಗೆ ಬಂದಿರಲಿಲ್ಲ. ಇದೀಗ ಎಲ್ಲೆಡೆಯಲ್ಲಿಯೂ ಪ್ರಚಾರ ಪಡೆಯುತ್ತಿರುವ ಈ ಸೂಕ್ಷ್ಮ ತರಂಗಗಳ ಒಲೆಯು ಬೇಡಿಕೆಯಲ್ಲಿದೆ. ಈ ಒಲೆ ಹೆಚ್ಚು ಕಂಪನ ವೇಗದ ರೇಡಿಯೋ ತರಂಗಗಳನ್ನೇ ಬಳಸಲ್ಪಡುತ್ತದೆ. ತರಂಗಗಳು ಬೇಯಿಸುವ ಆಹಾರವನ್ನು ಒಳಹೊಕ್ಕು ಅದರಲ್ಲಿರುವ ಪದಾರ್ಥಗಳನ್ನು ಮಥನ ಮಾಡಿ ಆಹಾರಪಚನವನ್ನುಂಟು ಮಾಡುತ್ತದೆ. ಇದರಿಂದ ಆಹಾರವು ಹೊರವಲಯದಲ್ಲಿ ಮಾತ್ರ ಪಚನವಾಗದೇ ಅಂತರೀಕರವಾಗಿಯೂ ಬೇಯಿಸಲ್ಪಡುತ್ತದೆ. ಈ ಮಥನ ಕ್ರಿಯೆಯಲ್ಲಿ ಶಾಖವು ವಿಪರೀತ ಏರುತ್ತದೆ. ಈ ಬಲೆಯಲ್ಲಿ ಉತ್ಪತ್ತಿಂಟಾಗುವ ಸೂಕ್ಷ್ಮತರಂಗಗಳ ಆಧಾರವೇ ಡ್ಯೂಗ್ನೆಟ್ರಾನ್ಸ್ ಇದು ಹೆಚ್ಚು ಕಂಪನವೇಗವ Diode ಇದರಲ್ಲಿ ಉರುಳೆಯಕಾರದ ಋಣ ವಿದ್ಯುತ್ವಾಹಕವಿದೆ ಮತ್ತು (Cathode) ಮತ್ತು ಏಕಾಕ್ಷೀಯ ಧನವಿದ್ಯುದ್ವಾಹಕವೂ (Anode) ಇದೆ. ಈ ಎರಡೂ ವಿದ್ಯುತ್ವಾಹಕಗಳ ಮೂಲಕ ನೇರವಾಗಿ ವಿದ್ಯುತ್‌ಶಕ್ತಿಯನ್ನು ಹಾಯಿಸಿದರೆ ಅಲ್ಲಿ ವಿದ್ಯುತ್ ಕ್ಷೇತ್ರವು ನಿರ್ಮಿತವಾಗುತ್ತದೆ. ಆಯಸ್ಕಾಂತ ಕ್ಷೇತ್ರವನ್ನು ಅಡ್ಡಡ್ಡಲಾಗಿ ಹೊರಗಡೆಯ ಆಯಸ್ಕಾಂತದ ಸಹಾಯದಿಂದ ಪ್ರಯೋಗಿಸಿದರೆ ಮತ್ತು ಇದನ್ನು ಅನುಕಣನೀಯ ಸಾಧನಕ್ಕೆ ಸಿಕ್ಕಿಸಿದರೆ ಇದು Oscillator ರೀತಿಯಲ್ಲಿ ವರ್ತಿಸಿ ಅತ್ಯಂತ ಹೆಚ್ಚಿನ ಕಂಪನ ವೇಗದ ತರಂಗಗಳನು ಉತ್ಪತ್ತಿ ಮಾಡಬಲ್ಲದು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...