ನಿನ್ನ ಮನಸ್ಸಿನಲ್ಲಿ ನಾನು ಇಲ್ಲದ ಹೊತ್ತು

ನಿನ್ನ ಮನಸ್ಸಿನಲ್ಲಿ ನಾನು ಇಲ್ಲದ ಹೊತ್ತು
ನಿನ್ನಿಂದ ನಡೆದಿರುವ ಸಣ್ಣ ತಪ್ಪುಗಳೆಲ್ಲ
ಹೊನ್ನ ಪ್ರಾಯಕ್ಕೆ ಚೆಲುವಿಗೆ ತಕ್ಕವೇ, ಗೊತ್ತು
ಬೆನ್ನಿಗೇ ಗಂಟು ಬಿದ್ದಿದೆ ಪ್ರಲೋಭನೆಯೆಲ್ಲ.
ಸಭ್ಯ, ಹಾಗೆಂದೆ ಗೆಲ್ಲುವರೆಲ್ಲ ನಿನ್ನನ್ನು;
ಚೆಲುವ, ಹಾಗೆಂದೆ ಆಕ್ರಮಿಸುವರು. ಅಲ್ಲದೆ
ಹೆಣ್ಣೆ ಬಯಸಲು, ಹೆಣ್ಣ ಬಸಿರಿಂದ ಬಂದವನು
ಗಂಡು ಯಾವನು ಅವಳ ಹೋಗಗೊಡುವನು ಬರಿದೆ ?
ಆದರೂ ಅಯ್ಯೊ! ನೀ ಬಳಸದಿರಬಹುದಿತ್ತು
ನನ್ನದೆನ್ನುವುದನ್ನು : ಚೆಲುವು ಹರಯಗಳನ್ನು
ಹದ್ಧುಬಸ್ತಲ್ಲಿಟ್ಟು ನೀ ತಡೆಯಬಹುದಿತ್ತು
ನಂಬಿಕೆಗೆ ಎರಡೆರಡು ದ್ರೋಹ ನಡೆಯುವುದನ್ನು ;
ನಿನ್ನ ರೂಪಕ್ಕವಳು ಮಾರುಹೋದದ್ದನ್ನು
ನೀ ನನ್ನ ನಂಬಿಕೆಯ ಬೆನ್ನಗಿರಿದದ್ದನ್ನು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 41
Those pretty wrongs that liberty commits

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಂಸ್ತ್ರೀ – ೧೬
Next post ಬಸವ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…